ಅ.26- 27 ರಂದು ಸುಳ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ತಾಲೂಕು ಕ್ರೀಡಾಕೂಟ :ಸೈಂಟ್ ಜೋಸೆಫ್ – ಸೈಂಟ್ ಬ್ರಿಜಿಡ್ಸ್ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ಕೊಡಿಯಾಲಬೈಲ್ ಎಂ.ಜಿ.ಎಂ. ಮೈದಾನದಲ್ಲಿ -ಕ್ರೀಡಾ ವಿಕ್ರಮ-2023

ಅ.26- 27 ರಂದು ಸುಳ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ತಾಲೂಕು ಕ್ರೀಡಾಕೂಟ :ಸೈಂಟ್ ಜೋಸೆಫ್ – ಸೈಂಟ್ ಬ್ರಿಜಿಡ್ಸ್ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ಕೊಡಿಯಾಲಬೈಲ್ ಎಂ.ಜಿ.ಎಂ. ಮೈದಾನದಲ್ಲಿ -ಕ್ರೀಡಾ ವಿಕ್ರಮ-2023

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಳ್ಯ
ಮತ್ತುಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು ಸುಳ್ಯ ಹಾಗೂ ಸೈಂಟ್ ಬ್ರಿಜಿಡ್ಜ್ ಅನುದಾನಿತ ಹಿ. ಪ್ರಾ. ಶಾಲೆ ಸುಳ್ಯ ಇವರ ಸಹಯೋಗ ದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟ ಕ್ರೀಡಾ ವಿಕ್ರಮ – 2023
ಅ.26 ಮತ್ತು 27 ರಂದು ಸುಳ್ಯದ ಕೊಡಿಯಾಲಬೈಲಿನ ಮಹಾತ್ಮಗಾಂಧಿ ಮಲ್ನಾಡ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸೈಂಟ್ ‌ಜೋಸೆಫ್ ವಿದ್ಯಾಸಂಸ್ಥೆ ಸಂಚಾಲಕ ರೆ.ಫಾ.ವಿಕ್ಟರ್ ಡಿಸೋಜಾ ಹೇಳಿದರು.
ಅ.20 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು.

ಉದ್ಘಾಟನೆ : ಅ.26 ರಂದು ಶಾಸಕಿ ಭಾಗೀರಥಿ ಮುರುಳ್ಯ ಕ್ರೀಡಾಕೂಟ ಉದ್ಘಾಟಿಸುವರು.
ಉಬರಡ್ಕ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಮಂಗಳೂರು ಕಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ರೆl ಫಾ| ಆ್ಯಂಟನಿ ಮೈಕಲ್ ಸೆರಾ ವಹಿಸಲಿದ್ದಾರೆ.ಧ್ವಜಾರೋಹಣವನ್ನು ಸೈಂಟ್ ಜೋಸೆಫ್ – ಸೈಂಟ್ ಬ್ರಿಜಿಡ್ಸ್ ಸಂಸ್ಥೆ ಸಂಚಾಲಕ ರೆ| ಫಾ| ವಿಕ್ಟರ್ ಡಿ’ಸೋಜ ನೆರವೇರಿಸುವರು. ಹಲವು ಮಂದಿ ಗಣ್ಯರು‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸನ್ಮಾನ : ಲಕ್ಷ್ಮೀಶ ರೈ ರೆಂಜಾಳ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು,
ಸಂಶೀರ್ ಜಯನಗರ ಅಂತರಾಷ್ಟ್ರೀಯ ಕ್ರೀಡಾಪಟು, ಆದರ್ಶ ಎಸ್‌.ಪಿ. ರಾಷ್ಟ್ರೀಯ ಕ್ರೀಡಾಪಟು, ಬ್ರಯಾನ್ ರಾಲ್ ಸ್ಟನ್ ಗೋವಿಯಸ್ ರಾಷ್ಟ್ರೀಯ ಚೆಸ್ ಪಟು ರನ್ನು ಗೌರವಿಸಲಾಗುವುದು.

ಸಮಾರೋಪ : ಅ. 27ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು
ರೆlಫಾ| ಲೋರೆನ್ಸ್ ಮಸ್ಕರೇನಸ್ ವಲಯ ಶ್ರೇಷ್ಠ ಧರ್ಮಗುರುಗಳು, ಪುತ್ತೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಲವು ಮಂದಿ ಗಣ್ಯರು‌ ಭಾಗವಹಿಸಲಿದ್ದಾರೆ.

ಎರಡು ದಿನಗಳ ಕ್ರೀಡಾಕೂಟದಲ್ಲಿ ತಾಲೂಕಿನ 900 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 80 ಮಂದಿ ತೀರ್ಪು ಗಾರರು‌ ಆಗಮಿಸಲಿದ್ದಾರೆ.‌ ಎರಡು ದಿನದಲ್ಲಿ 5 ರಿಂದ 6 ಸಾವಿರ ಮಂದಿ‌ ಭಾಗವಹಿಸಲಿದ್ದು ಎಲ್ಲರಿಗೂ ಊಟದ ವ್ಯವಸ್ಥೆ ‌ಮಾಡಲಾಗಿದೆ ಎಂದು ವಿವರ ನೀಡಿದರು.
ಸೈಂಟ್ ಜೋಸೆಫ್ ಪ್ರಾ.ಶಾಲೆ ಪೋಷಕ ಸಮಿತಿ ಅಧ್ಯಕ್ಷ ಜೆ.ಕೆ.ರೈ, ಮುಖ್ಯೋಪಾಧ್ಯಾಯಿನಿ ಬಿನೋಮಾ, ಸೈಂಟ್ ಬ್ರಿಜಿಡ್ಸ್ ದೈ.ಶಿ.ಶಿಕ್ಷಕ ಉಮೇಶ್, ಸೈಂಟ್ ಜೋಸೆಫ್ ‌ದೈ.ಶಿ.ಶಿಕ್ಷಕ ಕೊರಗಪ್ಪ,ಸುಳ್ಯ ಸೈಂಟ್ ಬ್ರಿಜಿಡ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ ಇದ್ದರು.

ರಾಜ್ಯ