
ಸುಳ್ಯ ತಾಲೂಕು ಜನತಾದಳ ಪಕ್ಷದ ನೂತನ
ಕಚೇರಿಯು ನ.28 ರಂದು ಉದ್ಘಾಟನೆಗೊಳ್ಳಲಿದೆ . ಕರ್ನಾಟಕ ಪ್ರದೇಶ ಜನತಾದಳ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಕಾರ್ಯಾಲಯವನ್ನು ಉದ್ಘಾಟಿಸಲಿದ್ದು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜನತಾ ದಳ (ಜಾ)ದ.ಕ ಜಿಲ್ಲೆಯ
ಪಕ್ಷದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ನೆರವೇರಿಸಲಿದ್ದಾರೆ ಪಕ್ಷದ ಹಿರಿಯರು ಮತ್ತು ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸುವ ಕಾರ್ಯಕ್ರಮವಿದ್ದು. ಕಟ್ಟೆಕ್ಕಾರ್ ಸಮೀಪದ ಕಟ್ಟಡದಲ್ಲಿ ಕಾರ್ಯಾಲಯದ ಕಚೇರಿಯು ಕಾರ್ಯ ನಿರ್ವಹಿಸಲಿದೆ. ಸಭಾ ಕಾರ್ಯಕ್ರಮ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಲಿರುವುದಾಗಿ ಪಕ್ಷದ ವಕ್ತಾರ ರಾಕೇಶ್ ಕುಂಟಿಕಾನ ರವರು ತಿಳಿಸಿದ್ದಾರೆ.


