ಮೇಕೇರಿ : ಅಕ್ರಮವಾಗಿ ಸಾಗಾಟವಾಗುತ್ತಿದ್ದ ಶ್ರೀಗಂಧದ ತುಂಡುಗಳು ವಶ : ಆರೋಪಿ ಪರಾರಿ.

ಮೇಕೇರಿ : ಅಕ್ರಮವಾಗಿ ಸಾಗಾಟವಾಗುತ್ತಿದ್ದ ಶ್ರೀಗಂಧದ ತುಂಡುಗಳು ವಶ : ಆರೋಪಿ ಪರಾರಿ.


ಮಡಿಕೇರಿ ಫೆ.10 : ಶ್ರೀಗಂಧದ ತುಂಡುಗಳನ್ನು
ಮಾಡುತ್ತಿದ್ದ ಉಪವಲಯ ಅಕ್ರಮವಾಗಿ ಸಾಗಾಟ
ಪ್ರಕರಣವನ್ನು ಮಡಿಕೇರಿ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಖಚಿತ ಮಾಹಿತಿಯ ಹಿನ್ನೆಲೆ ಮೇಕೇರಿ
ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ಕಾರು ಸಹಿತ ಸುಮಾರು 3 ಲಕ್ಷ
ರೂ.ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ
ಸಂಬಂಧಿಸಿದಂತೆ ಅಶ್ವತ್ತೋಕ್ಲು ಗ್ರಾಮದ
ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಡಿಕೇರಿ
ವಿಭಾಗದ ಡಿಸಿಎಫ್ ಎ.ಟಿ.ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಮೋಷಿನ್ ಬಾಷಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಗಳಾದ ಬಾಬು ರಾಥೋಡ್, ಮಲ್ಲಯ್ಯ
ಹಿರೇಮಠ, ಗಸ್ತು ಅರಣ್ಯ ಪಾಲಕರಾದ ಭವ್ಯ
ಯತೀಶ್ ಅರಣ್ಯ ವೀಕ್ಷಕ ವಾಸುದೇವ, ವಾಹನ
ಚಾಲಕರಾದ ಸಂಜು, ಮೋಹನ್, ಕುಶ ಅರಣ್ಯ
ಸಿಬ್ಬಂದಿಗಳು ಮತ್ತಿತರ ಪಾಲ್ಗೊಂಡಿದ್ದರು.

ರಾಜ್ಯ