ರಾಜ್ಯ

ಯುವತಿಯ ಮಾನ ಭಂಗಯತ್ನ ಪ್ರಕರಣ :ಆರೋಪಿಯ ಮಧ್ಯಂತರ ಜಾಮೀನು ಅರ್ಜಿ ವಜಾ.

ಸರಕಾರಿ ಅಭಿಯೋಜಕ ಜನಾರ್ದನ್

ಹಿಂದೂ ಯುವತಿಯ ಮಾನ ಭಂಗಯತ್ನ ಪ್ರಕರಣ ಆರೋಪಿಯ ಮಧ್ಯಂತರ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಂಗ ಬಂಧನ ವಿಧಿಸಿದ ಮಂಗಳೂರಿನ ಆರನೇ JMFC ನ್ಯಾಯಾಲಯ
ಬಜಪೆ ಪೋಲಿಸ್ ಠಾ toಣೆ ವ್ಯಪ್ತಿಯಲ್ಲಿ ಗಂಜಿ ಮಠ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನು ಬೈಕಿನಲ್ಲಿ ಬಂದು ಬೆನ್ನಟ್ಟಿ ಅಸಹ್ಯವಾಗಿ ಸನ್ನೆ ಮಾಡಿ ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿದ ಆರೋಪದಡಿ ಕೆ ಶರೀಫ್ ತಂದೆ ಮಹಮ್ಮದ್ ಮಳಲಿ ಮಸೀದಿ ಬಳಿ ತೆಂಕುಳಿಪಾಡಿ ಗ್ರಾಮ ಅವರ ಮೇಲೆ ಬಜಪೆ ಪೋಲಿಸರು ಐಪಿಸಿ ಕಲಂ 354,354 (d),509 ರಡಿಯಲ್ಲಿ ಪ್ರಕರಣ ದಾಖಲಿಸಿ , ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆಗ ಆರೋಪಿ ಪರ ವಕೀಲರು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು . ಈ ವೇಳೆ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿ ಮಧ್ಯಾಂತರ ಜಾಮೀನು ಅರ್ಜಿಯನ್ನು ಪುರಸ್ಕರಿಸದಂತೆ ನ್ಯಾಯಾಲಯವನ್ನುಮನವಿ ಮಾಡಿಕೊಂಡರು ವಿಚಾರಣೆ ನಡೆಸಿದ ಮಂಗಳೂರಿನ ಆರನೇ JMFC ನ್ಯಾಯಾಲಯದ ನ್ಯಾಯಾಧೀಶರು ಸರಕಾರಿ ಅಭಿಯೋಜಕರ ವಾದವನ್ನು ಪುರಸ್ಕರಿಸಿ ಅರೋಪಿ ಪರ ಸಲ್ಲಿಸಿದ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾ ಗೊಳಿಸಿ ಜನವರಿ 23 ರ ವರಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು. ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಅವರೂ ವಾದ ಮಂಡಿಸಿದರು.

Leave a Response

error: Content is protected !!