ಅಂತರಾಷ್ಟ್ರೀಯ

ಗಿಲ್-ಇಶಾನ್ ಸ್ಫೋಟಕ ಬ್ಯಾಟಿಂಗ್: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 170 ರನ್‌ಗಳ ಭರ್ಜರಿ ಜಯ
ಅಂತರಾಷ್ಟ್ರೀಯ ಕ್ರೀಡೆ

ಗಿಲ್-ಇಶಾನ್ ಸ್ಫೋಟಕ ಬ್ಯಾಟಿಂಗ್: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 170 ರನ್‌ಗಳ ಭರ್ಜರಿ ಜಯ

ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ 170 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಭಾರತ ತಂಡದ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ನೀಡಿದ ಅತ್ಯುತ್ತಮ ಪ್ರದರ್ಶನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು.…

ರಾಜ್ಯ

ಧಾರ್ಮಿಕ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶಬರಿಮಲೆ ಯಾತ್ರೆ; ಕೊಚ್ಚಿಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ ಹೆಚ್‌ಡಿಕೆ

ಕೊಚ್ಚಿ: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಗೆ ತಮ್ಮ ಪವಿತ್ರ ಯಾತ್ರೆಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಇಂದು (ಜೂನ್ 15) ಬೆಳಿಗ್ಗೆ ಕೇರಳದ ಕೊಚ್ಚಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕುಮಾರಸ್ವಾಮಿ ಅವರು ಶಾಸ್ತ್ರೋಕ್ತವಾಗಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದರು. ​ಕೇಂದ್ರ ಸಚಿವರಾದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಅವರು ಹಮ್ಮಿಕೊಂಡಿರುವ ಮೊದಲ ಪ್ರಮುಖ ಧಾರ್ಮಿಕ ಯಾತ್ರೆ ಇದಾಗಿದ್ದು, ತಮ್ಮ ಆಪ್ತರು ಹಾಗೂ ಪಕ್ಷದ ಪ್ರಮುಖ…

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶಬರಿಮಲೆ ಯಾತ್ರೆ; ಕೊಚ್ಚಿಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ ಹೆಚ್‌ಡಿಕೆ
ಧಾರ್ಮಿಕ ರಾಜಕೀಯ ರಾಜ್ಯ
​ಶನಿ ಜಯಂತಿ 2026: ಇಂದು ವೈಶಾಖ ಅಮಾವಾಸ್ಯೆ; ಶನಿ ಮಹಾತ್ಮನ ಕೃಪೆಗೆ ಪಾತ್ರರಾಗಲು ಸೂಕ್ತ ಕಾಲ!
ಆಧ್ಯಾತ್ಮ ಧಾರ್ಮಿಕ ರಾಷ್ಟ್ರೀಯ

​ಶನಿ ಜಯಂತಿ 2026: ಇಂದು ವೈಶಾಖ ಅಮಾವಾಸ್ಯೆ; ಶನಿ ಮಹಾತ್ಮನ ಕೃಪೆಗೆ ಪಾತ್ರರಾಗಲು ಸೂಕ್ತ ಕಾಲ!

ಇಂದು ದೇಶಾದ್ಯಂತ ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ‘ಶನಿ ಜಯಂತಿ’ಯನ್ನು ಆಚರಿಸಲಾಗುತ್ತಿದೆ. ಹಿಂದೂ ಪಂಚಾಂಗದ ಪ್ರಕಾರ, ವೈಶಾಖ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಂದು ಸೂರ್ಯದೇವ ಮತ್ತು ಛಾಯಾದೇವಿಯ ಪುತ್ರನಾದ ಶನಿ ಮಹಾತ್ಮನು ಜನಿಸಿದನು ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ಕರ್ಮಫಲ ದಾತ ಮತ್ತು ನ್ಯಾಯದೇವತೆ ಎಂದು ಕರೆಯಲಾಗುತ್ತದೆ. ಮನುಷ್ಯರು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ತಕ್ಕಂತೆ ಫಲ ನೀಡುವ ಈ ದಿನ, ಶನಿ ದೇವನ ವಿಶೇಷ ಅನುಗ್ರಹ ಪಡೆಯಲು…

ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇಗುಲ: ಟಿಟಿಡಿಗೆ ಭೂಮಿ ಹಸ್ತಾಂತರ

ಬೆಳಗಾವಿ: ಕುಂದಾನಗರಿ ಬೆಳಗಾವಿಯ ಹೊರವಲಯದಲ್ಲಿ ಶೀಘ್ರದಲ್ಲೇ ದಕ್ಷಿಣ ಭಾರತದ ಪ್ರಸಿದ್ಧ ತಿರುಪತಿ ಮಾದರಿಯ ವೆಂಕಟೇಶ್ವರ ಸ್ವಾಮಿ ದೇಗುಲ ತಲೆಯೆತ್ತಲಿದೆ. ನಗರದ ಸಮೀಪವಿರುವ ಕೋಳಿಕೊಪ್ಪ ಗ್ರಾಮದ ಗುಡ್ಡದ ಮೇಲೆ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭವ್ಯ ದೇವಸ್ಥಾನ ನಿರ್ಮಾಣವಾಗಲಿದೆ. 7 ಎಕರೆ ಜಮೀನು ಹಸ್ತಾಂತರ​ಈ ಬೃಹತ್ ಯೋಜನೆಗಾಗಿ ಬೆಳಗಾವಿ ರೆಡ್ಡಿ ಸಂಘದ ವತಿಯಿಂದ ಮೀಸಲಿಡಲಾಗಿದ್ದ 7 ಎಕರೆ ಜಮೀನನ್ನು ಅಧಿಕೃತವಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿಗೆ ಹಸ್ತಾಂತರಿಸಲಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭೂಮಿಯ…

ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದ ಭವ್ಯ ತಿರುಪತಿ ವೆಂಕಟೇಶ್ವರ ದೇಗುಲ: ಟಿಟಿಡಿಗೆ ಭೂಮಿ ಹಸ್ತಾಂತರ
ಧಾರ್ಮಿಕ ರಾಜ್ಯ
ಸುನ್ನೀ ಸೆಂಟರ್ ಕಲ್ಲುಗುಂಡಿಯಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಯಶಸ್ವಿ
ಧಾರ್ಮಿಕ ಪ್ರಾದೇಶಿಕ

ಸುನ್ನೀ ಸೆಂಟರ್ ಕಲ್ಲುಗುಂಡಿಯಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಯಶಸ್ವಿ

ಕಲ್ಲುಗುಂಡಿ: ಎಸ್ಸೆಸ್ಸೆಫ್, ಎಸ್ ವೈ ಎಸ್ ಹಾಗೂ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯುನಿಟ್ ಸಂಯುಕ್ತಾಶ್ರಯದಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ಸುನ್ನತ್(ಮುಂಜಿ) ಕಾರ್ಯಕ್ರಮ ಏಪ್ರಿಲ್ 12ರಂದು ಕಲ್ಲುಗುಂಡಿಯ ಸುನ್ನೀ ಸೆಂಟರ್‌ನಲ್ಲಿ ಯಶಸ್ವಿಯಾಗಿ ನೆರವೇರಿತು. ಡಾ. ಮುಹಮ್ಮದ್ ಫಯಾಝ್ ಮಂಜನಾಡಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಾಮಾಜಿಕ ಸೇವೆಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಯಿತು. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅವರು ಮಾತನಾಡಿ ಇಂತಹ ಸೇವಾ ಕಾರ್ಯಗಳ ಬಗ್ಗೆ ಶ್ಲಾಘಿಸಿದರು. ಬದ್ರಿಯಾ…

ಕ್ರೀಡೆ

ಕಾವು ಹೇಮಾನಾಥ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ಅಪಾಯದಿಂದ ಪಾರು
ರಾಜ್ಯ

ಕಾವು ಹೇಮಾನಾಥ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ಅಪಾಯದಿಂದ ಪಾರು

ಪುತ್ತೂರು: ಫೆ.24 ರ ತಡ ರಾತ್ರಿ ಪುತ್ತೂರಿನ ಹೊರ ವಲಯ ಬೆದ್ರಾಳದಲ್ಲಿ ಪುತ್ತೂರು – ಸುಬ್ರಹ್ಮಣ್ಯ ರಸ್ತೆಯಲ್ಲಿ ಕೆಪಿಸಿಸಿ ಮುಖಂಡ ಕಾವು ಹೇಮಾನಾಥ ಶೆಟ್ಟಿ ಪ್ರಯಾಣಿಸುತಿದ್ದ ಕಾರು ಹಾಗೂ ಇನ್ನೊಂದು ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎರಡು ಕಾರಿನಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಕಾವು ಹೇಮಾನಾಥ…

ಮಂಗಳೂರು : ಮನೆಗೆ ಆಕಸ್ಮಿಕ ಬೆಂಕಿ- ಸೊತ್ತುಗಳು ಸಂಪೂರ್ಣ ನಾಶ..!
ರಾಜ್ಯ

ಮಂಗಳೂರು : ಮನೆಗೆ ಆಕಸ್ಮಿಕ ಬೆಂಕಿ- ಸೊತ್ತುಗಳು ಸಂಪೂರ್ಣ ನಾಶ..!

ಫೆ.24ರಂದು ಮಂಗಳೂರಿನ ಸಸಿಹಿತ್ಲು ಬೀಚ್ ಬಳಿಯ ದಾoಡಿ ಮನೆಯ ಶ್ಯಾಮಲಾ ಎಂಬವರ ಮನೆಗೆ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದೆ.ಮನೆಯಲ್ಲಿ ಶ್ಯಾಮಲಾ ಮತ್ತು ಅವರ ಪುತ್ರ ಮಾತ್ರ ವಾಸಿಸುತ್ತಿದ್ದು, ಇಬ್ಬರೂ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಗ್ನಿ ದುರಂತ ನಡೆದಿದೆ. ಬೆಂಕಿ ತಗುಲಿದ್ದನ್ನು ಗಮನಿಸಿದ ಸ್ಥಳೀಯರು…

ರಿಕ್ಷಾಗಳ ಮುಖಾಮುಖಿ ಡಿಕ್ಕಿ : ಹಲವು ಮಂದಿಗೆ ಗಾಯ
ರಾಜ್ಯ

ರಿಕ್ಷಾಗಳ ಮುಖಾಮುಖಿ ಡಿಕ್ಕಿ : ಹಲವು ಮಂದಿಗೆ ಗಾಯ

ವಿಟ್ಲ: ಪಡಿಬಾಗಿಲು ಅಳಿಕೆ ಸಂಪರ್ಕ ರಸ್ತೆಯಲ ಪಡಿಬಾಗಿಲು ದ್ವಾರದ ಬಳಿ ರಿಕ್ಷಾಗಳ ನಡುವೆ ಭಾನುವಾರ ಅಪಘಾತಗೊಂಡು 10ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ. ಎರುಂಬು ನಿವಾಸಿ ಹಮೀದ್ ಎರುಂಬು, ಪಡಿಬಾಗಿಲು ನಿವಾಸಿ ರವಿ ಪಡಿಬಾಗಿಲು ಎಂಬವರಿಗೆ ಸೇರಿದ ರಿಕ್ಷಾಗಳಾಗಿದೆ. ನೇರ ರಸ್ತೆಯಲ್ಲಿ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಒಂದು ರಿಕ್ಷಾ…

ಬೆಳ್ತಂಗಡಿ : ಹೆಜ್ಜೇನು ದಾಳಿ ; 6 ಮಂದಿಗೆ ಗಾಯ
ರಾಜ್ಯ

ಬೆಳ್ತಂಗಡಿ : ಹೆಜ್ಜೇನು ದಾಳಿ ; 6 ಮಂದಿಗೆ ಗಾಯ

ಬೆಳ್ತಂಗಡಿ: ಮಚ್ಚಿನ ಕೊಡಿಯೇಲು ಎಂಬಲ್ಲಿ ಹೆಜ್ಜೇನು ದಾಳಿಯಿಂದ ಆರು ಮಂದಿ ಗಾಯಗೊಂಡಿದ್ದು, ಈ ಪೈಕಿ ಓರ್ವನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಫೆ.23ರಂದು ಶುಕ್ರವಾರ ಬೆಳಗ್ಗೆ ಕೊಡಿಯೇಲು ಕೋರೆಗೆ ತಿರುಗುವ ರಸ್ತೆ ಬಳಿಯಲ್ಲಿ ಮರದಲ್ಲಿದ್ದ ಹೆಜ್ಜೇನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ದಾಳಿ ನಡೆಸಿದೆ. ಕೋರೆಗೆ ಕೆಲಸಕ್ಕೆ ಹೋಗುತ್ತಿದ್ದ ನಾಲ್ವರು…

ಪಣಂಬೂರು ಬೀಚ್ ನಲ್ಲಿ ನೀರಾಟ ಆಡಲು ಸಮುದ್ರಕ್ಕಿಳಿದ ವಿಧ್ಯಾರ್ಥಿ ನೀರುಪಾಲು
ರಾಜ್ಯ

ಪಣಂಬೂರು ಬೀಚ್ ನಲ್ಲಿ ನೀರಾಟ ಆಡಲು ಸಮುದ್ರಕ್ಕಿಳಿದ ವಿಧ್ಯಾರ್ಥಿ ನೀರುಪಾಲು

ಮಂಗಳೂರು : ಶನಿವಾರ ಮಧ್ಯಾಹ್ನ ವೇಳೆ ಪಣಂಬೂರು ಸಮುದ್ರದಲ್ಲಿ ಆಟವಾಡಲು ಇಳಿದ ವಿಧ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ನಡೆದಿದೆ.ಮೃತ ಬಾಲಕನನ್ನು ಉತ್ತರ ಕರ್ನಾಟಕ ಮೂಲದ ತುಕರಾಮ(13) ಎಂದು ಗುರುತಿಸಲಾಗಿದೆ. ಈತ ಬೈಕಂಪಾಡಿಯ ಮೀನಕಳಿಯ ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದು, ಶಾಲೆ ಬಿಟ್ಟ ಬಳಿಕ ತನ್ನ ಸ್ನೇಹಿತನೊಂದಿಗೆ…

ಬಂಟ್ವಾಳ: ಅಪಘಾತದಲ್ಲಿ ಗಾಯಗೊಂಡ ಯುವಕ ಮೃತ್ಯು
ರಾಜ್ಯ

ಬಂಟ್ವಾಳ: ಅಪಘಾತದಲ್ಲಿ ಗಾಯಗೊಂಡ ಯುವಕ ಮೃತ್ಯು

ಬಂಟ್ವಾಳ : ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಭಾನುವಾರ ಮುಂಜಾನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಫರಂಗಿಪೇಟೆ ಸಮೀಪದ ಅಮ್ಮೆಮಾರ್ ನಿವಾಸಿ ಪ್ರಸ್ತುತ ಪಾಣೆಮಂಗಳೂರು - ಆಲಡ್ಕ ವಾಸ್ತವ್ಯವಿರುವ ಆಶ್ರಫ್ (32) ಎಂದು ಗುರುತಿಸಲಾಗಿದೆ. ಆಲಡ್ಕ…

ಮಹಿಳೆಯ ಚಿನ್ನದ ಸರ ಎಗರಿಸಿದ್ದ ಬಿಸಿರೋಡ್ ಮೂಲದ ಜುಬೈರ್ ಸಹಿತ ಕುಖ್ಯಾತ ಕಳ್ಳರಿಬ್ಬರ ಸೆರೆ
ರಾಜ್ಯ

ಮಹಿಳೆಯ ಚಿನ್ನದ ಸರ ಎಗರಿಸಿದ್ದ ಬಿಸಿರೋಡ್ ಮೂಲದ ಜುಬೈರ್ ಸಹಿತ ಕುಖ್ಯಾತ ಕಳ್ಳರಿಬ್ಬರ ಸೆರೆ

ಮಂಗಳೂರು : ಬಜಾಲ್ ಜೆಎಂ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕೇರಳ ಮೂಲದ ಅಂತಾರಾಜ್ಯ ಸರಗಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೂಲತಃ ಕಾಸರಗೋಡು ಜಿಲ್ಲೆಯ ಚೆರ್ಕಳ ನಿವಾಸಿ, ಬಂಟ್ವಾಳದ…

ಮಲ್ಪೆ: ಸ್ಕೂಟರ್ ಸಮೇತವಾಗಿ ನೀರಿಗೆ ಬಿದ್ದ ವ್ಯಕ್ತಿ
ರಾಜ್ಯ

ಮಲ್ಪೆ: ಸ್ಕೂಟರ್ ಸಮೇತವಾಗಿ ನೀರಿಗೆ ಬಿದ್ದ ವ್ಯಕ್ತಿ

ಮಲ್ಪೆ: ಸ್ಕೂಟರ್ ಸಮೇತವಾಗಿ ನೀರಿಗೆ ಬಿದ್ದ ವ್ಯಕ್ತಿಯನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಮೇಲೆತ್ತಿದ ಘಟನೆ ಮಲ್ಪೆ ಮೀನುಗಾರಿಕೆ ಬಂದರಿನ ಬಾಪುತೋಟ ಬಳಿಕ ದಕ್ಕೆಯಲ್ಲಿ ನಡೆದಿದೆ. ಬೋಟು ಒಂದರ ಲೆಕ್ಕ ಸಹಾಯಕನಾಗಿ ಕೆಲಸ ಮಾಡುತ್ತಿರುವ ನಿಖಿಲ್ ಸುಮಾರು 8 ಗಂಟೆ ವೇಳೆಗೆ ತನ್ನ ಡಿಯೋ ಸ್ಕೂಟರಿನಲ್ಲಿ ದಕ್ಕೆ…

ಜೆಸಿಐ ಸುಳ್ಯ ಪಯಸ್ವಿನಿ  ಎಲ್ ಓ ಜಿ ಬಿ  ಸಭೆಯಲ್ಲಿ ಯುವ ಕೊಳಲು ವಾದಕ   ವೀಕ್ಷೀತ್ ಗೌಡ ಕುತ್ಯಾಳ ಇವರಿಗೆ ಸನ್ಮಾನ.
ರಾಜ್ಯ

ಜೆಸಿಐ ಸುಳ್ಯ ಪಯಸ್ವಿನಿ ಎಲ್ ಓ ಜಿ ಬಿ ಸಭೆಯಲ್ಲಿ ಯುವ ಕೊಳಲು ವಾದಕ ವೀಕ್ಷೀತ್ ಗೌಡ ಕುತ್ಯಾಳ ಇವರಿಗೆ ಸನ್ಮಾನ.

ಜೆಸಿಐ ಸುಳ್ಯ ಪಯಸ್ವಿನಿ ಎಲ್ ಓ ಜಿ ಬಿ ಸಭೆಯಲ್ಲಿ ಯುವ ಕೊಳಲು ವಾದಕ ವೀಕ್ಷೀತ್ ಗೌಡ ಎಲ್ರೂ ಕುತ್ಯಾಳ ಇವರಿಗೆ ಯುವ ಸಾಧಕ ಪ್ರಶಸ್ತಿ ಯಾನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನವನ್ನು ವಲಯ 15ರ ವಲಯ ಉಪಾಧ್ಯಕ್ಷ ಜೆ ಎಫ್ ಎಂ ಅಭಿಷೇಕ್ ಜಿ ಎಂ ನೆರವೇರಿಸಿದರು. ಸಭಾಧ್ಯಕ್ಷತೆಯಾನ್ನು…

ಸುರತ್ಕಲ್ : ಬಸ್ಸು ಇಳಿದು ಮನೆಗೆ ತೆರಳುತ್ತಿದ್ದ  ಬಾಲಕನ ಮೇಲೆರಗಿದ ಬಸ್ ..ಮುಂದೇನಾಯ್ತು..?
ರಾಜ್ಯ

ಸುರತ್ಕಲ್ : ಬಸ್ಸು ಇಳಿದು ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆರಗಿದ ಬಸ್ ..ಮುಂದೇನಾಯ್ತು..?

ಸುರತ್ಕಲ್ : ಶಾಲಾ ಬಸ್ಸಿನಿಂದ ಇಳಿದ ಬಾಲಕ ರಸ್ತೆ ದಾಟಲು ಬಸ್ ಮುಂದೆ ತೆರಳಿದಾಗ ಮಿನಿಬಸ್ ಅಡಿಗೆ ಬಿದ್ದ ಘಟನೆ ಸುರತ್ಕಲ್ ನ ಕುಳಾಯಿ ಎಂಬಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಅಪಘಾತದಲ್ಲಿ ಬಾಲಕ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಅಪಘಾತದ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI