ಮಾಂಡೌಸ್ ಸೈಕ್ಲೋನ್ ಚಂಡಮಾರುತ ತಮಿಳುನಾಡು ತತ್ತರ: ಭಾರೀ ಬಿರುಗಾಳಿ ಮಳೆಗೆ ನಾಲ್ಕು ಮಂದಿ ಸಾವು..

ಮಾಂಡೌಸ್ ಸೈಕ್ಲೋನ್ ಚಂಡಮಾರುತ ತಮಿಳುನಾಡು ತತ್ತರ: ಭಾರೀ ಬಿರುಗಾಳಿ ಮಳೆಗೆ ನಾಲ್ಕು ಮಂದಿ ಸಾವು..

ತಮಿಳುನಾಡಿನ ಮಾಮಲ್ಲಪುರಂನಲ್ಲಿ ತೀರವನ್ನು ದಾಟಿದ ಮಾಂಡೌಸ್ ಸೈಕ್ಲೋನಿಕ್ ಚಂಡಮಾರುತವು ತಮಿಳುನಾಡು ಜನತೆಯನ್ನು ಹೈರಾಣಾಗಿಸಿದೆ, ಜನರು ಮನೆ ಅಂಗಡಿ ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದಾರೆ .ಹಲವಾರು ಮರಗಳನ್ನು ಬಿರುಗಾಳಿ ಕಿತ್ತುಹಾಕಿದೆ. 70 ಕಿಲೋಮೀಟರ್ ವೇಗದ ಗಾಳಿಯ ಪ್ರಭಾವದ ಅಡಿಯಲ್ಲಿ ನಗರದಲ್ಲಿ ಸುಮಾರು 400 ಮರಗಳು ಬಿದ್ದಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇಲ್ಲಿನ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಸೇರಿದಂತೆ ನಾಗರಿಕ ಸಂಸ್ಥೆಗಳು ಬಿದ್ದ ಮರಗಳನ್ನು ತೆಗೆಯುವಲ್ಲಿ ತೊಡಗಿವೆ.ಚಂಡಮಾರುತವು ಶನಿವಾರದ ಮುಂಜಾನೆ ದುರ್ಬಲಗೊಂಡಿತು ಮತ್ತು ಮಹಾಬಲಿಪುರಂನಿಂದ 55 ಕಿಮೀ ಉತ್ತರ-ವಾಯುವ್ಯ ಮತ್ತು ಚೆನ್ನೈನಿಂದ ಸುಮಾರು 40 ಕಿಮೀ ಪಶ್ಚಿಮ-ನೈಋತ್ಯಕ್ಕೆ ಕೇಂದ್ರೀಕೃತವಾಗಿತ್ತು.ಹೆಚ್ಚಿನ ಕರಾವಳಿ ತೀರಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ, ಉತ್ತರದ ಒಳಭಾಗದ ತಮಿಳುನಾಡಿನಾದ್ಯಂತ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮತ್ತು ಅತಿ ಭಾರೀ ಮಳೆಯಾಗುತ್ತದೆ.
ಮಳೆಯ ಮುನ್ಸೂಚನೆಯಿಂದಾಗಿ ಚೆನ್ನೈ, ವೆಲ್ಲೂರು, ವಿಲ್ಲುಪುರಂ, ಕಡಲೂರು, ರಾಣಿಪೇಟ್, ತಿರುವಳ್ಳೂರು, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿತ್ತು. ಭದ್ರತೆ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ರಾಜ್ಯದಲ್ಲಿ 16,000 ಪೊಲೀಸ್ ಸಿಬ್ಬಂದಿ ಮತ್ತು 1,500 ಗೃಹ ರಕ್ಷಕರನ್ನು ನಿಯೋಜಿಸಲಾಗಿದೆ ಮತ್ತು 12 ಜಿಲ್ಲಾ ವಿಪತ್ತು ನಿರ್ವಹಣಾ ಪಡೆ ತಂಡಗಳ ಜೊತೆಗೆ ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪಡೆಯ 40 ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ. ಸನ್ನದ್ಧ ಸ್ಥಿತಿಯಲ್ಲಿದೆ . ಎನ್‌ಡಿಆರ್‌ಎಫ್ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸುಮಾರು 400 ಸಿಬ್ಬಂದಿಗಳು ಕಾವೇರಿ ನದಿ ಮುಖಜ ಭೂಮಿ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ..

ರಾಷ್ಟ್ರೀಯ