ಮೇನಾಲದಲ್ಲಿ ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ, ಸುಳ್ಯ ತಹಶೀಲ್ದಾರ್ ಕು ಅನಿತಾಲಕ್ಷ್ಮಿ ನೇತ್ರತ್ವದಲ್ಲಿ ದಿಢೀರ್ ದಾಳಿ..!

ಮೇನಾಲದಲ್ಲಿ ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ, ಸುಳ್ಯ ತಹಶೀಲ್ದಾರ್ ಕು ಅನಿತಾಲಕ್ಷ್ಮಿ ನೇತ್ರತ್ವದಲ್ಲಿ ದಿಢೀರ್ ದಾಳಿ..!


ಅಜ್ಜಾವರ ಗ್ರಾಮದ ವಿವಿಧ ಭಾಗಗಳಲ್ಲಿ ಅವ್ಯಾಹುತವಾಗಿ ಕೆಂಪು ಕಲ್ಲುಗಣಿಗಾರಿಕೆ ಕಾರ್ಯ ಚಟುವಟಿಕೆ ಮಾಡುತ್ತಿದ್ದು ಇದರಲ್ಲಿ ಕೆಲವು ಅಕ್ರಮ ಗಣಿಗಾರಿಕೆಗಳಾಗಿವೆ, ಇತಂಹ ಕಲ್ಲುಕೋರೆಗಳಿಗೆ ಡಿ 10. ರ ಸಂಜೆ ಸುಳ್ಯ ತಹಶೀಲ್ದಾರ್ ಕು .ಅನಿತಾಲಕ್ಷ್ಮಿ ಮತ್ತುಆರ್ ಎಫ್ ಒ ಮಂಜುನಾಥ್ ತಂಡ ದಿಢೀರ್ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ಹಲವು ಶ್ರೀಮಂತ ಕುಳಗಳು ಗಣಿಗಾರಿಕೆ ನಡೆಸುತ್ತಿದ್ದು, ಸ್ಥಳೀಯರ ವಿರೋಧದ ನಡುವೆಯೂ ಗಣಿಗಾರಿಕೆ ನಡೆಯುತ್ತಿತ್ತು ಎಂದು ಹೇಳಲಾಗಿದೆ, ಇದೀಗ ಸ್ಥಳೀಯರು , ಮತ್ತು ಸುಳ್ಯ ತಹಶೀಲ್ದಾರರಿಗೆ ಲಿಖಿತ ಮನವಿ ಮಾಡಿ ಪರಿಶೀಲಿಸುವ ಬಗ್ಗೆ ಕೇಳಿ ಕೊಂಡಿತ್ತು. ಈ ದೂರಿನ ಹಿನ್ನಲೆಯಲ್ಲಿ ದಾಳಿ ಸಂಘಟಿಸಲಾಗಿದೆ ಎಂದು ತಿಳಿದು ಬಂದಿದೆ. ದಾಳಿಯಲ್ಲಿ ಗಣಿಗಾರಿಕೆಗೆ ಬಳಸುತ್ತಿದ್ದ ಯಂತ್ರ ಹಾಗೂ ಪರಿಕರಗಳನ್ನು ಮುಟ್ಟುಗೋಲು ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ರಾಜ್ಯ