ಸುಳ್ಯ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ತಯ : ಮಧ್ಯರಾತ್ರಿಯಲ್ಲೂ ಟ್ಯಾಂಕರ್ ಮೂಲಕ ನೀರು ಹಂಚಿಕೆಯ ಜವಾಬ್ಧಾರಿ ಮೆರೆದ ನ.ಪಂ.ಅಧ್ಯಕ್ಷ.

ಸುಳ್ಯ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ತಯ : ಮಧ್ಯರಾತ್ರಿಯಲ್ಲೂ ಟ್ಯಾಂಕರ್ ಮೂಲಕ ನೀರು ಹಂಚಿಕೆಯ ಜವಾಬ್ಧಾರಿ ಮೆರೆದ ನ.ಪಂ.ಅಧ್ಯಕ್ಷ.

ಸುಳ್ಯ ನಗರದ ಕುರುಂಜಿಗುಡ್ಡೆ ನೀರಿನ ಟ್ಯಾಂಕ್ ಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ರಥಬೀದಿಯಲ್ಲಿ ಒಡೆದು ಹೋಗಿರುವ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕುರುಂಜಿಗುಡ್ಡೆ ಭಾಗದ 5ವಾರ್ಡ್ ಗಳಲ್ಲಿ ನೀರು ಸರಬರಾಜು ವ್ಯತ್ಯಯ ವಾಗಿದ್ದು ಪೈಪ್ ಲೈನ್ ಸರಿಪಡಿಸಲು ಕಳೆದೆರಡು ದಿನಗಳಿಂದ ಹಗಲಿರುಳು ಯತ್ನಿಸುತ್ತಿದ್ದು ಕುರುಂಜಿ ಭಾಗದ ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮಧ್ಯರಾತ್ರಿ

ವೇಳೆಯಲ್ಲಿಯೂ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ನೀರು ಸರಬರಾಜು ಮಾಡುವರ ಜೊತೆಯಲ್ಲಿ ಶ್ರಮವಹಿಸುತ್ತಿದ್ದು ಕಂಡುಬಂದಿದ್ದು ಇವರ ಜವಬ್ಧಾರಿಗೆ ಸ್ಥಳೀಯರ ಮೆಚ್ಚುಗೆ ವ್ಯಕ್ತವಾಗಿದೆ. ಹಗಲಿನಿಂದ ಮತ್ತು ರಾತ್ರಿ 11ರ ತನಕ ಕುರುಂಜಿ ಕೇರ್ಪಳ ಭಾಗದ 5ವಾರ್ಡ್ ಗಳಿಗೆ ಪಿಕಪ್ ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಕಾರ್ಯವನ್ನು ನ .ಪಂ ಸಿಬ್ಬಂದಿ ಶ್ರೀಜಿತ್, ಬಿಜಿಲ, ಪೌರ ಸಿಬ್ಬಂದಿ ಗುರುನಾಥ, ಟ್ಯಾಂಕರ್ ಮಾಲಕ, ಚಾಲಕ ಅನಿಲ್ ಕುಮಾರ್, ನಾಮ ನಿರ್ದೇಶಿತ ಸದಸ್ಯ ಬೂಡು ರಾಧಾಕೃಷ್ಣ ರೈ ಮೊದಲಾದವರು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Uncategorized ರಾಜ್ಯ