
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ದೇವರ ದರ್ಶನ ಪಡೆಯಲೆಂದೋ.. ತಮ್ಮ ಇಷ್ಠಾರ್ಥ ಈಡೇರಲೆಂದೊ….ಆರೋಗ್ಯ ನೀಡಲೆಂದೋ… ಊರ ಹಾಗು ಪರವೂರ ಭಕ್ತರು ದೇವರಲ್ಲಿ ಪ್ರಾರ್ಥಿಸಲು ಕುಕ್ಕೆ ಕ್ಷೇತ್ರಕ್ಕೆ ಬರುತ್ತಾರೆ.ಆದರೆ ಇಲ್ಲಿಯ ಬೀದಿನಾಯಿಗಳ ಹಾವಳಿಯಿಂದ ಜನರ ಜೀವಕ್ಕೆ ಕುತ್ತು ತರುವಂತಹ ಘಟನೆಯೊಂದು ಇಂದು ಮುಂಜಾನೆ ನಡೆದಿದ್ದು. ದೇವಸ್ಥಾನದ ಒಳಗಡೆ ಧರ್ಮಸಮ್ಮೇಳನ ಮಂಟಪದಲ್ಲಿ ಹಾಸನಮೂಲದ ವ್ಯಕ್ತಿಯ ಕೈಗೆ



ಬೀದಿನಾಯಿ ಕಚ್ಚಿದ ಪರಿಣಾಮ ವ್ಯಕ್ತಿಯ ಕೈಗೆ ಬಲವಾದ ಗಾಯವಾಗಿದ್ದು ಇವರನ್ನು ಸಾಮಾಜ ಸೇವಕ ರವಿ ಕಕ್ಕೆಪದವು ಕಡಬ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಸುಬ್ರಹ್ಮಣ್ಯದಲ್ಲಿ ವಾಹನಗಳಿಗೆ ಹಾಗೂ ಇತ್ತೀಚೆಗೆ ಶಾಲಾ ವಿದ್ಯಾರ್ಥಿ ಹಾಗು ಸರ್ಪಸಂಸ್ಕಾರ ಪೂಜಾ ಕಾರ್ಯಮಾಡುವ ಅರ್ಚಕರಿಗೆ ಹಾನಿ ಉಂಟಾಗಿದ್ದು ನಿನ್ನೆಯದಿನ ರಸ್ತೆಗೆ ಬೀದಿ ನಾಯಿ ಅಡ್ಡಬಂದ ಪರಿಣಾಮ ಜಗದೀಶ್ ಕೀಲಾರ್ ಕಜೆ ಎಂಬವರ ಆಟೋರಿಕ್ಷಾ ಪಲ್ಟಿಯಾಗಿರುವ

ಘಟನೆಯೊಂದು ನಡೆದಿದ್ದು ಅದೃಷ್ಟವಶಾತ್ ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಒಂದು ವಾರದ ಹಿಂದೆಯಷ್ಟೇ ಹೊಸದಾಗಿ ಖರೀದಿ ಮಾಡಿದ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದೆ,ಇದರ ಬಗ್ಗೆ ಅಟೋರಿಕ್ಷಾ ಚಾಲಕರು ಹಾಗೂ ಗ್ರಾಮಸ್ಥರು ಹಲವಾರು ಬಾರಿ ಪಶು ವೈಧ್ಯಾಧಿಕಾರಿಗಳಿಗೆ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿಮಾಡಿದ್ದು ಸುಬ್ರಹ್ಮಣ್ಯದಲ್ಲಿ ಪಶು ವೈಧ್ಯಾಧಿಕಾರಿ ನೇಮಕ ಮಾಡಲು ಹಾಗೂ ಪ್ರಾಥಮಿಖ ಆರೋಗ್ಯ ಕೇಂದ್ರದಲ್ಲಿ ೨೪ ಗಂಟೆಗಳ ವೈದ್ಯಕೀಯ ಸೇವೆ ಸಾರ್ವಜನಿಕರಿಗೆ ದೊರೆಯುವಂತೆ ಸಮಾಜ ಸೇವಕ ರವಿಕಕ್ಕೆ ಪದವು,ಆಟೋ ಚಾಲಕ ಮಾಲಕರಾದಂತಹ ಡಿ.ಶೇಷಕುಮಾರ್ ಶೆಟ್ಟಿ, ದಿನೇಶ್ ಶೀರಾಡಿ, ರಾಧಕೃಷ್ಣ,ಯಶೋಧರ ಮೊದಲಾದವರು ಮಾಧ್ಯಮದ ಮೂಲಕ ಒತ್ತಾಯಿಸಿದ್ದಾರೆ. ಸುಬ್ರಹ್ಮಣ್ಯ ಗ್ರಾಮ ಸಭೆಯಲ್ಲಿಯೂ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದು ಇಂದಿನವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸುಬ್ರಹ್ಮಣ್ಯದ ಗ್ರಾಮಸ್ಥರು ಇದೀಗ ಪಂಚಾಯತ್ ಆಡಳಿತದ ವಿರುಧ್ದ ಮತ್ತು ಸ್ಥಳೀಯ ಜನ ಪ್ರತಿನಿದಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

