ಅಡಿಕೆಗೆ ಭವಿಷ್ಯವಿಲ್ಲ ಗೃಹ ಸಚಿವರ ಹೇಳಿಕೆಗೆ ಸುಳ್ಯ ಯೂತ್ ಕಾಂಗ್ರೇಸ್ ಖಂಡನೆ: ಪ್ರತಿಭಟನೆಗೆ ಚಿಂತನೆ: ಅಭಿಷೇಕ್

ಅಡಿಕೆಗೆ ಭವಿಷ್ಯವಿಲ್ಲ ಗೃಹ ಸಚಿವರ ಹೇಳಿಕೆಗೆ ಸುಳ್ಯ ಯೂತ್ ಕಾಂಗ್ರೇಸ್ ಖಂಡನೆ: ಪ್ರತಿಭಟನೆಗೆ ಚಿಂತನೆ: ಅಭಿಷೇಕ್

ಸುಳ್ಯ: ಕರಾವಳಿ ಮತ್ತು ಮಲೆನಾಡು ಪ್ರದೇಶದ ಅಡಿಕೆ ಕೃಷಿಕರು ಈಗಾಗಲೇ ಹಳದಿ ಎಲೆ ರೋಗ ಮತ್ತು ಎಲೆ
ಚುಕ್ಕಿ ರೋಗ ಕಂಗಾಲಾಗಿದ್ದಾರೆ ಇಂತಹ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರರು ಅಡಿಕೆ ಬೆಳೆಗೆ ಭವಿಷ್ಯವಿಲ್ಲ ಎಂಬ ಹೇಳಿಕೆ ನೀಡಿದ್ದು ಅಡಿಕೆಯನ್ನೆ ಮುಖ್ಯ ವಾಣಿಜ್ಯ ಬೆಳೆಯಾಗಿ ನಂಬಿ ಬದುಕುತಿರುವ ರೈತರಿಗೆ ಇದರಿಂದ ಭವಿಷ್ಯದ ಭಯ ಎದುರಾಗಿದೆ ರೈತರ ಪರ ಮಾತಾನಾಡಬೇಕಾದ ಸಚಿವರ ಈ ಹೇಳಿಕೆಗೆ ಯೂತ್ ಕಾಂಗ್ರೆಸ್ ವಿರೋಧವಿದೆ ಮತ್ತು ಖಂಡಿಸುತ್ತಿದ್ದೇವೆ ಎಂದು ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ ಹೇಳಿದ್ದಾರೆ. ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಸಚಿವರು ಅಡಿಕೆ ಕೃಷಿಕರಲ್ಲಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ಬೃಹತ್
ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ರಾಜ್ಯದಲ್ಲಿ ದಕ್ಷಿಣ ಕನ್ನಡ


ಜಿಲ್ಲೆ ಸೇರಿದಂತೆ ಇತರ ಜಿಲ್ಲೆಯ ಕೃಷಿಕರು ಅಡಿಕೆ
ಬೆಳೆಯನ್ನು ಬೆಳೆದು ಪ್ರಧಾನ ವಾಣಿಜ್ಯ ಬೆಳೆಯನ್ನಾಗಿ
ಮಾಡಿಕೊಂಡಿದ್ದಾರೆ. ಅಡಿಕೆ ಬೆಳೆದರೇನೇ ಜೀವನ
ನಿರ್ವಹಣೆಗೆ ಸಾಧ್ಯ ಎನ್ನುವ ಸ್ಥಿತಿಯಲ್ಲಿ ಕೃಷಿಕರು ಇದ್ದಾರೆ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಅರಗ ಜ್ಞಾನೇಂದ್ರರು ಅಡಿಕೆ ಕೃಷಿಗೆ ಭವಿಷ್ಯವಿಲ್ಲ.


ಪ್ರೋತ್ಸಾಹ ಕೊಡಬಾರದು, ಅಡಿಕೆ ಹೆಚ್ಚು
ಬೆಳೆಯುವುದರಲ್ಲಿ ಅರ್ಥವಿಲ್ಲ ಎಂದು ಹೇಳುವ ಮೂಲಕ ಕೃಷಿಕರ ಆತ್ಮಸ್ಥೆರ್ಯ ಕುಗ್ಗಿಸಿದ್ದಾರೆ .ಈಗ ಈ ಹೇಳಿಕೆ ನೀಡಿದ ಸಚಿವರಿಗೆ ಭವಿಷ್ಯ ಇದೆಯಾ ಎಂದು ನೋಡಬೇಕಾಗಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ. ಮಾತನಾಡಿ,
ಅಡಿಕೆ ಎಲೆ ಹಳದಿ ರೋಗಕ್ಕೆ ಸರಕಾರ ಯಾವುದೇ
ಪರಿಹಾರ ಇಲ್ಲಿಯವರೆಗೆ ಕೃಷಿಕರಿಗೆ ಸಿಕ್ಕಿಲ್ಲ. ಆದ್ದರಿಂದ
ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಾಕಷ್ಟು
ಕೆಲಸವನ್ನು ವಿಪಕ್ಷವಾಗಿ ಕಾಂಗ್ರೆಸ್ ಮಾಡಿದೆ. ಈಗಾಗಲೇ ಗಿಡಗಳ ರೋಗದಿಂದ ಸಂಕಷ್ಟಕ್ಕೀಡಾದ
ಬೆಳೆಗಾರರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.
ಇಲ್ಲದಿದ್ದರೆ ಸಂಪಾಜೆಯಿಂದ ಮಂಗಳೂರು ತನಕ
ಪಾದಯಾತ್ರೆ ಮಾಡಲು ನಿರ್ದರಿಸಿರುವುದಾಗಿ ಹೇಳಿದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಕುತ್ತಮೊಟ್ಟೆ ಮಾತನಾಡಿ ಇವರಿಗೆ ಇಚ್ಚಾಶಕ್ತಿ ಇದ್ದರೆ ದೇಶಕ್ಕೆ ಹೊರದೇಶದಿಂದ ಅಡಿಕೆ ಆಮದನ್ನು ಮೊದಲು ಸರಕಾರ ನಿಲ್ಲಿಸಲಿ. ಸದನದಲ್ಲಿ ಇನ್ನೋರ್ವ ಸಚಿವರು ಇದರ ಬಗ್ಗೆ ಮಾತನಾಡುವಾಗ ಗೃಹ ಸಚಿವರು ಮೌನವಾಗಿದ್ದರು.ಹಿಂದೆ ಸದನದಲ್ಲಿ ಅಡಿಕೆಯಿಂದ ಆರೋಗ್ಯಕ್ಕೆ ಹಾನಿಯಿಲ್ಲ ಎಂದು ಹೇಳಿಕೆ ನೀಡಿದ್ದ ಸಚಿವರ ಈಗಿನ ಹೇಳಿಕೆ ಅನುಮಾನಕ್ಕೆ ಕಾರಣವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತ, ಉಬರಡ್ಕ ಗ್ರಾಮ
ಪಂಚಾಯತ್ ಸದಸ್ಯ ಅನಿಲ್ ಬಳ್ಳಡ, ಭವಾನಿಶಂಕರ
ಕಲ್ಮಡ್ಕ ಮೊದಲಾದವರಿದ್ದರು..

ರಾಜ್ಯ