ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೆಸಿಸಿ ಅಪಘಾತ ವಿಮೆ ಚೆಕ್ ವಿತರಣೆ.

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೆಸಿಸಿ ಅಪಘಾತ ವಿಮೆ ಚೆಕ್ ವಿತರಣೆ.

ಇತ್ತೀಚೆಗೆ ಸಂಭವಿಸಿದ ಅವಘಡವೊಂದರಲ್ಲಿ ಮೃತಪಟ್ಟ ಸಂಸ್ಥೆಯ ಸದಸ್ಯ ನಾಗಪ್ಪ ನಾಯ್ಕ ನಿಡ್ಯಮಲೆ ಮರಣ ಹೊಂದಿದ ಹಿನ್ನೆಲೆಯಲ್ಲಿ ಮೃತರ ವಾರೀಸುದಾರರಾದ ದರ್ಶನ್ ಇವರಿಗೆ ರೂ 50,000ಗಳ ಕೆ ಸಿ ಸಿ ವಿಮಾ ಪರಿಹಾರ ಮೊತ್ತದ ಚೆಕ್ಕನ್ನು ಅಧ್ಯಕ್ಷರಾದ ಶ್ರೀ ನಾಗೇಶ್ ಕುಂದಲ್ಪಾಡಿ ಇವರು ವಿತರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಶೋಕ ಪಿ ಎಂ ನಿರ್ದೇಶಕರುಗಳಾದ ಮೋನಪ್ಪ ಎನ್ ಬಿ, ಪ್ರಸನ್ನ ಎನ್ ಬಿ, ಧನಂಜಯ ಕೋಡಿ, ಪ್ರಮೀಳಾ ಎನ್, ರೇಣುಕ ಕುಂದಲ್ಪಾಡಿ, ಉದಯಕುಮಾರ್ ಪಿ ಎ, ದಾಸಪ್ಪ ಮಡಿವಾಳ, ಜಯರಾಮ ಪಿ.ಟಿ, ಕಿರಣ್ ಬಂಗಾರಕೋಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಎಚ್ ಕೆ ಇವರು ಉಪಸ್ಥಿತರಿದ್ದರು.

ರಾಜ್ಯ