ಮೆಕ್ಕಾಕ್ಕೆ ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಪಾಂಡಿ ಅಬ್ಬಾಸ್ ರವರಿಗೆ ಪೇರಡ್ಕ ಜಮಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ

ಮೆಕ್ಕಾಕ್ಕೆ ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಪಾಂಡಿ ಅಬ್ಬಾಸ್ ರವರಿಗೆ ಪೇರಡ್ಕ ಜಮಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ


ಹಲವು ವರ್ಷಗಳ ಕಾಲ ಪೇರಡ್ಕ ಜಮಾಯತ್ ಕಮಿಟಿಯಲ್ಲಿ ವಿವಿಧ ಹುದ್ದೆ ನಿರ್ವಿಹಿಸಿ ಇದೀಗ ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಪಾಂಡಿ ಅಬ್ಬಾಸ್ ರವರಿಗೆ ಅಲ್ ಹಾಜ್ ಸಯ್ಯದ್ ಜೈನುಲ್ ಅಭಿದಿನ್ ತಂಗಳ್ ಕುಂನ್ನುಂಗೈ ದುಗ್ಗಲಡ್ಕ ಅವರು ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲು ಹೊದಿಸಿ ಮಾತನಾಡಿ ಪಾಂಡಿ ಅಬ್ಬಾಸ್ ರವರು ಹಿರಿಯರು ಅವರಿಗೆ ಪೇರಡ್ಕದ ಚರಿತ್ರೆ ಬಲ್ಲವರು ಪೇರಡ್ಕದಲ್ಲಿ ಚಿನ್ನ ಕಳೆದಾಗ ಒಬ್ಬರು ಪೇರಡ್ಕ ದರ್ಗಾಕ್ಕೆ ಹರಕೆ ಹೊತ್ತು ಹಲವು ವರ್ಷದ ಬಳಿಕ ಚಿನ್ನ ಮರಳಿ ಸಿಕ್ಕಿದ ಹಲವು ವರ್ಷದ ಹಿಂದಿನ ಚರಿತ್ರೆ ಮೆಲುಕು ಹಾಕಿದ ತಂಗಳ್ ರವರು,ನಾವು ಹಳೆಯ ಚರಿತ್ರೆ ಯುವಕರಿಗೆ ನೆನಪಿಸಬೇಕು,ಪೇರಡ್ಕ ದರ್ಗಾಕ್ಕೆ ಅದರದೇ ಆದ ಇತಿಹಾಸ ಇದೆ,ಎಂದರು ಇದೊಂದು ಪವಿತ್ರ ಐತಿಹಾಸಿಕ ಪ್ರದೇಶ ಎಂದರು ಈ ಸಂದರ್ಭದಲ್ಲಿ ಖತೀಬರಾದ ನಹೀಮ್ ಪೈಝಿ,ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ಆರ್ ಡಿ ಎ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ.ಎಸ್.ಉಮ್ಮರ್,ಜಮಾಯತ್ ಉಪಾಧ್ಯಕ್ಷರಾದ ಹನೀಫ್ ಟಿ.ಬಿ.ಪ್ರದಾನ ಕಾರ್ಯದರ್ಶಿ ಉಮ್ಮರ್ ಪಿ.ಕೆ. ಕಾರ್ಯದರ್ಶಿ ಉಸ್ಮಾನ್ ಸಂಟ್ಯಾರ್, ಮುನೀರ್ ಧಾರಿಮಿ ಇಬ್ರಾಹಿಂ ಚೇರೂರ್,ಹನೀಫ್ ಮೊಟ್ಟಂಗಾರ್ ಅಶ್ರಫ್ ಪೇರಡ್ಕ, ತೆಕ್ಕಿಲ್ ಮಹಮ್ಮದ್ ಕುಂಞಿ ಪೇರಡ್ಕ, ಡಿ.ಎ.ಮೊಯಿದು ದರ್ಕಸ್ ಸಾಧುಮೊನ್ ತೆಕ್ಕಿಲ್ ಪೇರಡ್ಕ,ಸಲೀಂ ಅಲ್ತಾಫ್,ಮೊದಲದವರು ಉಪಸ್ಥಿತರಿದ್ದರು

ರಾಜ್ಯ