
ಮಂಗಳೂರು: ಮಂಗಳೂರಿನಿಂದ ಮೂಡಬಿದ್ರೆಗೆ ಚಲಿಸುತ್ತಿದ್ದ ಖಾಸಗಿ ನಿಶ್ಮಿತಾ ಬಸ್ ನ ಚಾಲಕನ ಅಜಾಗರೂಕತೆಯಿಂದ ಮಾಂಗಳೂರಿನ ಹೊರ ವಲಯದ ವಾಮಂಜೂರು ಚೆಕ್ ಪೋಸ್ಟ್ ಸಮೀಪ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾನಹದ ಸಹ ಸವಾರ ಉದಯ್ ಎಂಬುವವರು ತನ್ನ ಪ್ರಾಣ ಕಳೆದುಕೊಂಡಿದ್ದಾರೆ.

ವಾಹನದ ಸಹ ಸವಾರರಾದ ಮುರಳೀಧರ್ ಎನ್ನುವರು ಗಂಭೀರ ಗಾಯಗೊಂಡಿದ್ದು ನಗರದ ಖಾಸಗಿ ಎ ಜೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಪ್ರಕರಣ ಮಂಗಳೂರು ನಗರ ಸಂಚಾರ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಕೇಸು ದಾಖಲಾಗಿದೆ.
