ಸಂಪಾಜೆಯ ಕಾಂಗ್ರೇಸ್ ನಲ್ಲಿ ತಳಮಳ : ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ದಿಢೀರ್ ರಾಜಿನಾಮೆ.

ಸಂಪಾಜೆಯ ಕಾಂಗ್ರೇಸ್ ನಲ್ಲಿ ತಳಮಳ : ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ದಿಢೀರ್ ರಾಜಿನಾಮೆ.

ಸಂಪಾಜೆ ಗ್ರಾಮ ಪಂಚಾಯತ್ ನ ಸದಸ್ಯ ಸೋಮಶೇಖರ್ ಕೊಯಿಂಗಾಜೆಯವರು ಪಂಚಾಯತ್ ಸದಸ್ಯತ್ವಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ರಾಗಿರುವ ಸೋಮಶೇಖರ ಕೊಯಿಂಗಾಜೆಯವರು ಕಳೆದ 25 ವರ್ಷಗಳಿಂದ ದ ಕ ಸಂಪಾಜೆ ವಲಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ , ಪ್ರಸ್ತುತ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರು ತಮ್ಮ ರಾಜಿನಾಮೆ ಪತ್ರವನ್ನು ಇಂದು ಪಂಚಾಯತ್ ಅಧ್ಯಕ್ಷ ಜಿ ಕೆ ಹಮೀದ್ ಸಲ್ಲಿಸಿದ್ದಾರೆ ತಿಳಿದುಬಂದಿದೆ.

ಈ ಕುರಿತು ಮಾತನಾಡಿದ ಸೋಮಶೇಖರ್ ರವರು ವೈಯುಕ್ತಿಕ ಕಾರಣಗಳಿಂದ ನಾನು ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದು ಯಾವುದೇ ಸಮಸ್ಯೆಯಿಂದ ಅಲ್ಲ ಎಂದು ಹೇಳಿದ್ದಾರೆ. ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಲು ನನ್ನ ಎಲ್ಲಾ ಆತ್ಮೀಯ ಮಿತ್ರರು ಮತ್ತು ಪಕ್ಷದ ಕಾರ್ಯಕರ್ತರು ತಾಲೂಕು ಮಟ್ಟದ ಮತ್ತು ಜಿಲ್ಲಾಮಟ್ಟದ ರಾಜ್ಯಮಟ್ಟದ ನಾಯಕರುಗಳು ನನಗೆ ಬೆಂಬಲವನ್ನು ನೀಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುವ ಕುರಿತು ಸಹಕಾರಿ ಸಂಘದ ಶತಮಾನೋತ್ಸವದ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಕಾಂಗ್ರೇಸ್ ಒಳಗೆ ಬಿನ್ನಮತ ಸ್ಫೋಟಕ್ಕೆ ಕಾರಣ


ಕಾಂಗ್ರೇಸ್ ಬಧ್ರಕೋಟೆಯಾಗಿದ್ದ ಸಂಪಾಜೆಯಲ್ಲಿ ಗ್ರಾಮ ಪಂಚಾಯತ್ಅಧಿಕಾರ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಆದರೆ ಕಳೆದ ಎರಡು ಅವಧಿಯಲ್ಲಿ ಪಂಚಾಯತ್ ಅದ್ಯಕ್ಷ ರಾಗಿದ್ದ ಜಿ ಕೆ ಹಮೀದ್ .ಈ ಬಾರಿ ೨.೫ ವರ್ಷದ ಬಳಿಕ ಅದ್ಯಕ್ಷತೆಯನ್ನು ಮತ್ತೊಬ್ಬರಿಗೆ ಬಿಟ್ಟು ಕೊಡಬೇಕು ಎಂಭ ಒಪ್ಪಂದ ನಡೆದಿತ್ತು ಹೇಳಲಾಗಿತ್ತು, ಆದರೆ ಅಧ್ಯಕ್ಷರಾಗಿದ್ದ ಜಿ.ಕೆ ಹಮೀದ್ ತನ್ನ ಅದ್ಯಕ್ಷತೆ ಹುದ್ದೆಯನ್ನು ಬಿಟ್ಟು ಕೊಟ್ಟಿರಲ್ಲಿಲ್ಲ, ಇದರಿಂದ ಸಂಪಾಜೆ ಕಾಂಗ್ರೇಸ್ ನಲ್ಲಿ ಬಿರುಕು ಮೂಡಿ ಎರಡು ಬಣಗಳಾಗಿದ್ದವು , ಜಿ ಕೆ ಹಮೀದ್ ಬ್ಲಾಕ್ ಕಾಂಗ್ರೇಸ್ ಮಾತಿಗೂ ಬಗ್ಗಿರಲ್ಲಿಲ್ಲ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರ ಮಾತಿಗೂ ಜಗ್ಗಿರಲಿಲ್ಲ ಇದರಿಂದ ಕಾಂಗ್ರೇಸ್ ಇವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿತ್ತು ಮತ್ತು ತಾಲೋಕು ಅಲ್ಪಾ ಸಂಖ್ಯಾತ ಘಟಕದ ಅದ್ಯಕ್ಷ ರಾಗಿದ್ದ ಜಿ ಕೆ ಹಮೀದ್ ಉಚ್ಚಾಟಿಸಿ,ಇಸ್ಮಾಯಿಲ್ ಪಡ್ಪಿನಂಗಡಿಯನ್ನು ನೇಮಕ ಮಾಡಿದ್ದರು .ಇಷ್ಟೆಲ್ಲಾ ಆದರೂ ಜಿ.ಕೆ ಹಮೀದ್ ಅದ್ಯಕ್ಷತೆಯಲ್ಲಿ ಮುಂದುವರೆದಿದ್ದರು. ಇದರಿಂದ ಸೋಮಶೇಖರ್ ತೀವ್ರ ಅಸಮದಾನ ಗೊಂಡಿದ್ದರು, ಇದೀಗ ಅವರು ತನ್ನ ಪಂಚಾಯತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದು ಪಕ್ಷದಲ್ಲಿ ಮುಂದುವರೆಯುವರೋ ಎಂದು ಕಾದು ನೋಡಬೇಕಾಗಿದೆ.

ರಾಜ್ಯ