ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಕ್ತಿ ಭಾವದ ನಾಗರ ಪಂಚಮಿ ಆಚರಣೆ- ನಾಗರಕಟ್ಟೆಗಳಲ್ಲಿ ಭಕ್ತರ ದಂಡು: ನಾಗ ಕಲ್ಲಿಗೆ ಕ್ಷೀರಾಭಿಷೇಕ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಗರ ಪಂಚಮಿಯನ್ನು ಶುಕ್ರವಾರ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಹೆಚ್ಚಾಗಿ ಕಂಡು ಬರುವ ನಾಗರಕಟ್ಟೆಗಳು ಹಾಗೂ ನಾಗದೇವರ ದೇವಾಲಯಗಳಲ್ಲಿ ಭಕ್ತರು ಬೆಳಿಗ್ಗೆನೇ ಸರತಿ ಸಾಲಿನಲ್ಲಿ ನಿಂತು ಶ್ರೀದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಿದರು. ವಿಶೇಷವಾಗಿ ನಾಗದೇವನಿಗೆ ಪ್ರಿಯವಾದ ಕ್ಷೀರಾಭಿಷೇಕ ಮಾಡುವ ದೃಶ್ಯ…









