ಕೊಕ್ಕಡ:ಮರದ ರೆಂಬೆ ತಲೆ ಮೇಲೆ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು..

ಕೊಕ್ಕಡ:ಮರದ ರೆಂಬೆ ತಲೆ ಮೇಲೆ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು..


:ನೆಲ್ಯಾಡಿ: ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸಮೀಪ ಮಹಿಳೆಯ ತಲೆಗೆ ಮರಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ಎ.28 ರಂದು ವರದಿಯಾಗಿದೆ.
ಕ್ವಾಟ್ರಸ್ ನಿವಾಸಿ ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ ಆಚಾರ್ಯ 60 ವರ್ಷ ಮೃತಪಟ್ಟ ದುರ್ದೈವಿ.
ವ್ಯಕ್ತಿಯೊಬ್ಬರು ಮನೆ ಸಮೀಪದ ಮರದ ರೆಂಬೆ ಕಡಿಯುವ ಸಂದರ್ಭ ಆಕಸ್ಮಿಕವಾಗಿ ಮಹಿಳೆಯ ತಲೆಗೆ ಬಿದ್ದಿದೆ ಎನ್ನಲಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ

ರಾಜ್ಯ