
ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾ ಕಾಳಿ ಕ್ಷೇತ್ರಕ್ಕೆ ಐಕ್ಯತಾ ಸಂದೇಶ ಮತ್ತು ಆಶೀರ್ವಚನ ನೀಡಲು ಆದಿಚುಂಚನಗಿರಿ ಸ್ವಾಮೀಜಿ ಶ್ರೀ ಶ್ರೀ ನಿರ್ಮಲನಂದನಾಥ ಭೇಟಿ ನೀಡಿದರು, ಈ ಸಂದರ್ಭದಲ್ಲಿ ಕರುಣಾಕರ ಬರೆಮೇಲು ದಂಪತಿಗಳು ಸ್ವಾಮೀಜಿಗಳ ಪಾದಕ್ಕೆಎರಗಿ ಆಶೀರ್ವಾದ ಪಡೆದರು ಕ್ಷೇತ್ರದಿಂದ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತ ಅರ್ಪಿಸಲಾಯಿತು. ನಂತರ ಸ್ವಾಮೀಜಿಗಳು ಉದ್ಬವ ತ್ರಿಶಕ್ತಿ ಸ್ವರೂಪಿನಿ ಮಹಕಾಳಿ ಕ್ಷೇತ್ರ ಭೇಟಿ ನೀಡಿ ಕ್ಷೇತ್ರದ ಐತಿಹಾಸಿ ವಿವರವನ್ನು ಕರುಣಾಕರರಿಂದ ಪಡೆದುಕೊಂಡರು



.ಈ ಸಂದರ್ಭದಲ್ಲಿ ಐಕ್ಯತಾ ಸಂದೇಶ ಮತ್ತು ಆಶೀರ್ವಚನ ನೀಡಿದ ಮಹಾಮಠದ ಶ್ರೀ ನಿರ್ಮಲನಂದನಾಥ ಸ್ವಾಮಿ ಆದಿ ಶಕ್ತಿ ಸ್ವರೂಪಿನಿ ತಾಯಿ ಇಲ್ಲಿದ್ದಾರೆ, ಯಾವ ವ್ಯಕ್ತಿ ಈ ದೇಹ ನನ್ನದಲ್ಲ ಎಂದು ತಿಳಿದವರಿದ್ದಾರೊ ಅವರಿಂದ ಲೋಕಕಲ್ಯಾಣ ಸಾಧ್ಯ.ಅಂತಹ ಶಕ್ತಿ ಕೆದಂಬಾಡಿ ರಾಮಯ್ಯಗೌಡ ರಂತವರದ್ದು, ಅಂತೆಯೇ ಐವರ್ನಾಡು ಬಾಲಕೃಷ್ಣ ಗೌಡರ ಸಾಧನೆ ಅಪ್ರತಿಮವಾದದು ಎಂದರು.
ಮಂಗಳೂರು ಶಾಖಾ ಮಠದ ಸ್ವಾಮೀಜಿ ಶ್ರೀ ಧರ್ಮಪಾಲನಾಥರು ಓಂಕಾರ ಭಜನೆಯನ್ನು ಭಕ್ತರಿಗೆ ಬೋಧಿಸಿದರು. ಈ ಸಂದರ್ಬದಲ್ಲಿ ಕರುಣಾಕರ ಬರೆಮೇಲು ದಂಪತಿಗಳು, ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ, ಡಾ. ಕೆ ವಿ ಚಿದಾನಂದ, ಕೃಷ್ಣ ಪ್ರಸಾದ್ ಮಡ್ತಿಲ, ರಾಜ್ಯ ಮೀನುಗಾರಿಕಾ ನಿಗಮದ ಅದ್ಯಕ್ಷ ಎ.ವಿ ತೀರ್ಥರಾಮ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ , ಗೋಪಾಲಕೃಷ್ಣ, ಚಂದ್ರಕೋಲ್ಚಾರ್, ಬಾಲಕೃಷ್ಣ ಕೀಲಾಡಿ,ಶ್ರೀನಿವಾಸ ಮಡ್ತಿಲ ಮೊದಲಾದವರಿದ್ದರು.


