
ಕಾಸರಗೋಡು: ಮಂಜೇಶ್ವರ ಸಮೀಪದ
ಪೊಸೆಟ್ ನಲ್ಲಿ ಕೆಎಸ್ಆರ್ಟಿಸಿ ಬಸ್ಸು
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮಗುಚಿ
ಬಿದ್ದ ಘಟನೆ ಇಂದು ಸಂಜೆ ನಡೆದಿದ್ದು,
ಘಟನೆಯಲ್ಲಿ 15 ಕ್ಕೂ ಹೆಚ್ಚು ಮಂದಿ
ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ
ಕೇರಳ ಮಲಬಾರ್ ಬಸ್ಸು ಪೊಸೋಟ್
ಪೆಟ್ರೋಲ್ ಪಂಪ್ ಬಳಿ ಪಲ್ಟಿ ಹೊಡೆದಿದೆ.
ಇನ್ನು ಅಪಘಾತವಾದ ಬಸ್ಸಿನಲ್ಲಿ 40
ಕ್ಕೂಅಧಿಕ ಪ್ರಯಾಣಿಕರಿದ್ದು, ಬಸ್ಸಿನಲ್ಲಿ
ಸಿಲುಕಿದ್ದ ಪ್ರಯಾಣಿಕರನ್ನು ನಾಗರಿಕರು,
ಪೊಲೀಸರು ಹೊರತೆಗೆದು ಆಸ್ಪತ್ರೆಗೆ
ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ.

