
ಸುಳ್ಯದ ಅಂಬಟಡ್ಕದಲ್ಲಿ ಜೀಪು ಚಾಲಕನ ಅವಾಂತರಕ್ಕೆ ನಾಲ್ಕು ಬೈಕ್ ಮತ್ತು ಒಂದು ಕಾರು ಹಾನಿಯಾದ ಘಟನೆ.ಇದೀಗ ವರದಿಯಾಗಿದೆ. ಡಿ.೧.7 ಗಂಟೆ ಸುಮಾರಿಗೆ ಸುಳ್ಯದ ಮುಖ್ಯರಸ್ತೆಯಿಂದ ರಥಬೀದಿಯಾಗಿ ಬಂದ ಜೀಪು ಚೆನ್ನಕೇಶವ ದೇವಸ್ಥಾನದ ಬಳಿ ಹಾಕಲಾಗಿರುವ ಬ್ಯಾರಿ ಕೇಡ್ ಗೆ ಗುದ್ದಿ ಅಲ್ಲಿಂದ ವೇಗವಾಗಿ ಬಂದು ಅಂಬಟಡ್ಕ ನವರತ್ನ ಹೋಟೇಲ್ ಎದುರು ನಿಲ್ಲಿಸಿದ್ದ ಹೋಟೆಲ್ ಗ್ರಾಹಕರ ನಾಲ್ಕು ಬೈಕ್ ಮತ್ತು ಕಾರಿಗೆ ಡಿಕ್ಕಿಹೊಡೆದು ನಿಂತಿದೆ.



ಜೀಪು ಚಾಲಕ ಅತೀವಾ ಮದ್ಯ ಸೇವಿಸಿ ತೂರಾಡುತ್ತಿದ್ದ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.ಕೆ.ಎ 13 N 4599 ನಂಬರಿನ ನಂದಾದೀಪ ಜೀಪ್ ಚಾಲಕನೆ ಇಷ್ಟೆಲ್ಲಾ ಅವಾಂತರ ಸೃಷ್ಠಿ ಮಾಡಿದವನು ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಸುಳ್ಯ ಪೋಲಿಸರು ಧಾವಿಸಿದ್ದು ಎಲ್ಲಾ ವಾಹನಗಳನ್ನು ಠಾಣೆಗೆ ಒಯ್ಯಲಾಗಿದೆ ಎಂದು ತಿಳಿದು ಬಂದಿದೆ.

