ಸುಳ್ಯದ ಎನ್ನೆಂಸಿ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳ: ಯುವಜನತೆ ಆಶಾವಾದಿಗಳಾಗಬೇಕು: ಎಸ್ ಅಂಗಾರ.

ಸುಳ್ಯದ ಎನ್ನೆಂಸಿ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳ: ಯುವಜನತೆ ಆಶಾವಾದಿಗಳಾಗಬೇಕು: ಎಸ್ ಅಂಗಾರ.


ಯುವಜನತೆ ಆಶಾವಾದಿಗಳಾಗಿ ಪ್ರಾಮಾಣಿಕವಾಗಿ ಶತಾಯ ಗತಾಯ ಪ್ರಯತ್ನ ಮಾಡಿದಾಗ ಆಸೆಗಳು ಬಲು ಬೇಗ ಈಡೇರಬಲ್ಲದು , ಮುಂದಿನ ತಿಂಗಳಲ್ಲಿ ವಾಹನ ಚಾಲನೆ ತಿಳಿದವರನ್ನು ಮುಂದಿರಿಸಿಕೊಂಡು ಚಾಲಕರಿಗೆ ಸ್ವಾ ಉದ್ಯೂಗ ಕಲ್ಪಿಸುವ ವ್ಯವಸ್ಥೆಯನ್ನು ಮೀನುಗಾರಿಕಾ ಇಲಾಖೆಯಿಂದ ಮಾಡಲಾಗುವುದು ಎಂದು ಬಂದರು ಮತ್ತು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಹೇಳಿದ್ದಾರೆ.
ಅವರು ಸುಳ್ಯದ ನೆಹರೂ ಮೆಮೊರಿಯಲ್ ಕಾಲೇಜು ಆವರಣದಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ ಕೌಶಲ್ಯಾಭಿವೃದ್ದಿ ಉದ್ಯಮ ಶೀಲತೆ , ಜೀವನೋಪಾಯ ಇಲಾಖೆ, ಕೆರಿಯರ್ ಡೆಸ್ಟಿನಿ ಮಂಗಳೂರು , ಪ್ಲೇಸ್ ಮೆಂಟ್ ಕಾಲ್ ನೆಹರೂ ಮೆಮೋರಿಯಲ್ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಅದ್ಯಕ್ಷರಾದ ಡಾ. ಕೆ.ವಿ ಚಿದಾನಂದ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮೀನುಗಾರಿಕೆ ನಿಗಮ ಇದರ ಜಿಲ್ಲಾದ್ಯಕ್ಷ ಎ.ವಿ ತೀರ್ಥರಾಮ, ನಗರ ಪಂಚಾಯತ್ ಅದ್ಯಕ್ಷ ವಿನಯ ಕುಮಾರ್ ಕಂದಡ್ಕ, ಕೆರಿಯರ್ ಡೆಸ್ಟಿನಿ ಮಂಗಳೂರು ಸಂಸ್ಥೆಯ ಜಯಶ್ರೀ, ಜೇನು ಸಹಕಾರಿ ಸಂಘದ ಜಿಲ್ಲಾದ್ಯಕ್ಷ ಚಂದ್ರಾ ಕೋಲ್ಚಾರ್. ಎನ್ನೆಂಸಿ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ .ಎಂ ಆರ್.,ಎನ್ನೆಂಸಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹೇಮಚಂದ್ರ ಕಣಿಪಿಲ, ವಿಜಯಲಕ್ಷ್ಮಿ, , ರತ್ನಾವತಿ, ಅರವಿಂದ ಬಾಳೇರಿ, ಹೇಮಚಂದ್ರ,ಎಸ್ ಜಿ., ಚಂದ್ರಶೇಖರ ದೊಡ್ಡಮನಿ, ವಿಮಲ ಎಸ್ ದೇವರಾಜ್. ಮೊದಲಾದವರು ವೇದಿಕೆಯಲ್ಲಿದ್ದರು.ಒಟ್ಟು 62.ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು, ಸುಮಾರು 2000. ಕ್ಕೂ ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಕೊಂಡರು.

ರಾಜ್ಯ