ರಸ್ತೆ ಮಾರ್ಗದಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ನೀಡುವಂತಿಲ್ಲ:ನಿಯಮ ಮೀರಿದರೆ ಅರಣ್ಯ ಇಲಾಖೆಯಿಂದ ದಂಡ..!

ರಸ್ತೆ ಮಾರ್ಗದಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ನೀಡುವಂತಿಲ್ಲ:ನಿಯಮ ಮೀರಿದರೆ ಅರಣ್ಯ ಇಲಾಖೆಯಿಂದ ದಂಡ..!


ರಸ್ತೆಯಲ್ಲಿ ಸಂಚರಿಸುವಾಗ ಕಾಡು ಪ್ರಾಣಿಗಳಿಗೆ ಅದರಲ್ಲೂ ಹೆಚ್ಚಾಗಿ ಕಾಣಸಿಗುವ ಮಂಗಗಳಿಗೆ ಬಾಳೆಹಣ್ಣು, ತರಕಾರಿ ಹಾಗೂ ಇತರ ಆಹಾರ ಪದಾರ್ಥಗಳನ್ನು ಮಾನವೀಯತೆಯಿಂದ ನೀಡಿದರೆ ಇನ್ನು ಮುಂದೆ ಅರಣ್ಯ ಇಲಾಖೆ ಅಂತವರಿಗೆ ದಂಡವನ್ನು ವಿಧಿಸಲು ತೀರ್ಮಾನಿಸಿದೆ. ಕಾಡುಪ್ರಾಣಿಗಳು ಕಾಡಿನಲ್ಲಿ ನೈಸರ್ಗಿಕವಾಗಿ ಸಿಗುವಂತ ಆಹಾರಗಳನ್ನೇ ಸೇವಿಸಬೇಕು. ನಾವು ಕಾಡು ಪ್ರಾಣಿಗಳಿಗೆ ನೀಡುವ ಆಹಾರದಲ್ಲಿ ರಾಸಾಯನಿಕ ವಸ್ತುಗಳು ಸಿಂಪಡಿಸಿರುವುದರಿಂದ, ನೈಸರ್ಗಿಕ ವಲ್ಲದ ಆಹಾರವನ್ನು ತಿಂದು ವಿವಿಧ ರೋಗಗಳಿಗೆ ತುತ್ತಾಗುತ್ತಿವೆ, ಹಾಗೆ ಕಾಡಿನೊಳಗೆ ಇರುವ ಇತರ ಪ್ರಾಣಿಗಳಿಗೂ ಕೂಡ ಈ ರೋಗವನ್ನು ಹರಡುತ್ತಿದೆ, ಇತ್ತೀಚೆಗೆ ಮಂಗಗಳಿಗೆ ಚರ್ಮರೋಗ ಒಂದು ವ್ಯಾಪಿಸಿದ್ದು, ಅದನ್ನು ಗುಣಪಡಿಸಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾಡು ಪ್ರಾಣಿಗಳಿಗೆ ರೋಗಗಳು ಹಬ್ಬವ ಭೀತಿ ಅರಣ್ಯ ಇಲಾಖೆಗೆ ಎದುರಾಗಿದೆ. ಕೊಡಗಿನ ಗೋಣಿಕೊಪ್ಪ ಹುಣಸೂರು ರಸ್ತೆ, ಪಿರಿಯಾಪಟ್ಟಣ ರಸ್ತೆ, ಸುಂಟಿಕೊಪ್ಪ ಕುಶಾಲನಗರ ರಸ್ತೆ, ಭಾಗಮಂಡಲ ಕರಿಕೆ ರಸ್ತೆ, ವಿರಾಜಪೇಟೆ ಮಾಕೂಟ ರಸ್ತೆಗಳಲ್ಲಿ , ಈ ರಸ್ತೆಯಲ್ಲಿ ಹೋಗುವ ಬಹಳಷ್ಟು ಪ್ರಯಾಣಿಕರು ಹಾಗೂ ಪ್ರವಾಸಿಗರು, ಮಂಗಗಳಿಗೆ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ. ಇನ್ನು ಮುಂದೆ ಯಾರು ಕಾಡು ಪ್ರಾಣಿಗಳಿಗೆ ಆಹಾರ ನೀಡುವಂತಿಲ್ಲ , ಉಪಟಳ ನೀಡುವಂತಿಲ್ಲ ಅರಣ್ಯ ಇಲಾಖೆ ಪ್ರಕಟಿಸಿದೆ.

ರಾಜ್ಯ