
ಕಾಂತಾರ ಭಾರತ ಕಂಡ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು, ಅದರಲ್ಲೂ ಕನ್ನಡದ ಸಿನಿಮಾವೊಂದು ದೇಶದ ಗಡಿ ಮೀರಿ ವಿದೇಶದಲ್ಲೂ ಅದ್ಧೂರಿ ಪ್ರದರ್ಶನ ಪಡೆದು ಎಲ್ಲಡೆ ಅಚ್ಚರಿಯ ಕಮಾಲ್ ಮಾಡಿದೆ, ಅಷ್ಟಕ್ಕೂ ತುಳುನಾಡಿನ ಭೂತಾರಾಧನೆ ಎಲ್ಲರನ್ನು ಅಕರ್ಷಿಸುವುದರ ಜೊತೆಗೆ ಇಲ್ಲಿನ ಸಂಸ್ಕೃತಿ, ಆಚಾರ ವಿಚಾರ ಎಲ್ಲವೂ ಎಲ್ಲರನ್ನು ನಿಬ್ಬೆರಗಾಗಿಸಿದೆ ಮತ್ತು ಕುತೂಹಲಿಗರನ್ನಾಗಿಸಿದೆ. ರಿಷಬ್ ಶೆಟ್ಟಿಯವರ ನಟನೆ ಮತ್ತು ತಂಡದ ಸಹಕಾರ,ಅತ್ಯುತ್ತಮ ಚಿತ್ರಿಕರಣ ಮತ್ತು ಸಂಗೀತ,ಹೀಗೆ ಒಂದಲ್ಲ ಎರಡಲ್ಲಾ ಎಲ್ಲಾ ವಿಧದಲ್ಲೂ ಸಿನೀಮಾ ಪ್ರಿಯರ ಮನದಲ್ಲಿ ಕಾಂತಾರ ಪಡಿಯಚ್ಚಾಗಿದೆ, ಭಾರತ ಅಗ್ರಮಾನ್ಯ ಎನಿಸಿರುವ ನಟರು, ರಾಜಕೀಯ ಮುಖಂಡರೂ ಸಿನಿಮಾ ನೋಡಿ ಮೆಚ್ಚುಗೆಯ ಮತ್ತು ಸ್ಪೂರ್ತಿಯ ಮಾತುಗಳನ್ನಾಡಿದ್ದಾರೆ, ಎಲ್ಲಾ ದಾಖಲೆಗಳನ್ನು ತನ್ನ ಬಗಲಿಗೆ ಹಾಕಿ ಕೊಂಡಿರುವ ಚಿತ್ರ ತಂಡ, ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್ ಮಾರಾಟ ಮಾಡುವುದರ ಮೂಲಕ ಹೊಸ ರೆಕಾರ್ಡ್ ಮಾಡಿಕೊಂಡಿದೆ, ೫೦ ಕ್ಕೂ ಅಧಿಕ ದಿನ ೨೫೦ ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಹೌಸ್ ಪುಲ್ ಪ್ರದರ್ಶನ ಕಂಡಿರುವ ಕಾಂತಾರ ಸಿನಿಮಾವನ್ನು ನಾಳೆಯಿಂದ ಅಂದರೆ ನ.24.ರಿಂದ ಪ್ರೈಮ್ ವೀಡಿಯೋದಲ್ಲಿ ನೋಡಬಹುದಾಗಿದೆ ಈ ಬಗ್ಗೆ ವಿಜಯ್ ಕಿರಗುಂದೂರು ಸಾರಥ್ಯದ ಹೊಂಬಾಳೆ ತಂಡ ಅಧಿಕೃತ ಪ್ರಕಟಣೆ ಹೊರಡಿಸಿದೆ ಇದರಿಂದ ಇದುವರೆಗೆ, ಸಿನಿಮಾ ನೋಡಲು ಚಿತ್ರ ಮಂದಿರಗಳಿಗೆ ಹೋಗಲು ಸಾದ್ಯವಾಗದ ಲಕ್ಷಾಂತರ ಮಂದಿ ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ಮೂಲಕ ಸಿನಿಮಾ ನೋಡಬಹುದಾಗಿದೆ.



