ಕುಂದಾಪುರ: ಲೈಟಿಂಗ್ ಹಾಕಲೆಂದು ಮರದ ಗೆಲ್ಲು ಕಡಿಯುವಾಗ ವಿದ್ಯುತ್ ತಂತಿ ಸ್ಪರ್ಶ: ಯುವಕ ಮೃತ್ಯು.

ಕುಂದಾಪುರ: ಲೈಟಿಂಗ್ ಹಾಕಲೆಂದು ಮರದ ಗೆಲ್ಲು ಕಡಿಯುವಾಗ ವಿದ್ಯುತ್ ತಂತಿ ಸ್ಪರ್ಶ: ಯುವಕ ಮೃತ್ಯು.

ಕುಂದಾಪುರ: ಲೈಟಿಂಗ್ ಹಾಕಲೆಂದು ಮರದ
ಗೆಲ್ಲು ಕಡಿಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ
ಯುವಕನೊಬ್ಬ ಮೃತಪಟ್ಟ ಘಟನೆ ಗುಜ್ಜಾಡಿ
ಗ್ರಾಮದ ನಾಯಕ್ವಾಡಿ ಜಂಕ್ಷನ್‌ನಲ್ಲಿ ನಡೆದಿದೆ.
ಗುಜ್ಜಾಡಿ ಗ್ರಾಮದ ನಿವಾಸಿ ನರಸಿಂಹ
ನಾಯಕ್ವಾಡಿ ಎಂಬುವರ ಮಗ ಸುಜಯ (20)
ಮೃತ ಯುವಕ. ಇಂದು ಮಧ್ಯಾಹ್ನ ಸುಮಾರು
3.15ಕ್ಕೆ ನಾಲ್ವಾಡಿ ಜಂಕ್ಷನ್ ಬಳಿ ಇರುವ
ನಾಕ್ವಾಡಿಯ ಸಂಗಮೇಶ್ವರ ದೇವಸ್ಥಾನದ
ದೀಪೋತ್ಸವ ಹಿನ್ನೆಲೆಯಲ್ಲಿ ಲೈಟಿಂಗ್ ಹಾಕಲು
ಸುಜಯ ಮರದ ಗೆಲ್ಲು ಕಡಿಯುತ್ತಿದ್ದರು. ಈ
ವೇಳೆ ವಿದ್ಯತ್ ಲೈನ್ ತಾಗಿ ಆಘಾತದಿಂದ ಕೆಳಗೆ ಬಿದ್ದಿದ್ದಾರೆ.ನಂತರ ಅವರನ್ನು ಅಂಬುಲೆನ್ಸ್ ನಲ್ಲಿ
ಕುಂದಾಪುರದ ಆದರ್ಶ ಆಸ್ಪತ್ರೆಗೆ
ಕರೆದೊಯ್ಯಲಾಯಿತು. ಆದರೆ ವೈದ್ಯರು
ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ
ತಿಳಿಸಿದ್ದಾರೆ. ಮೃತದೇಹವನ್ನು ಕುಂದಾಪುರ
ಶವಾಗಾರದಲ್ಲಿ ಇಡಲಾಗಿದ್ದು ಇನ್ನಷ್ಟೇ
ಪ್ರಕರಣ ದಾಖಲಾಗಬೇಕಿದೆ.

ರಾಜ್ಯ