ಸುಳ್ಯ ತಹಶೀಲ್ಧಾರ್ ಕು .ಅನಿತಾಲಕ್ಷ್ಮಿ ದಿಟ್ಟ ಕ್ರಮಕ್ಕೆ ಬೆದರಿದ ಕಲ್ಲು ,ಮರಳು, ಮಾರಾಟಗಾರರು: ಬರೋಬ್ಬರಿ 100 ಲೋಡ್ ಮರಳು ವಶ.!

ಸುಳ್ಯ ತಹಶೀಲ್ಧಾರ್ ಕು .ಅನಿತಾಲಕ್ಷ್ಮಿ ದಿಟ್ಟ ಕ್ರಮಕ್ಕೆ ಬೆದರಿದ ಕಲ್ಲು ,ಮರಳು, ಮಾರಾಟಗಾರರು: ಬರೋಬ್ಬರಿ 100 ಲೋಡ್ ಮರಳು ವಶ.!

ಸುಳ್ಯ, ಕಳೆದ ಕೆಲವು ದಿನಗಳಿಂದ ಸುಳ್ಯ ತಾಲೂಕು ಆಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಮರಳು ದಾಸ್ತಾನು ಘಟಕಗಳ ದಿಡೀರ್ ದಾಳಿ ಮುಂದುವರಿದಿದ್ದು, ಇಂದು ಸುಳ್ಯದ ಮೇನಾಲದಲ್ಲಿ ನೂರಕ್ಕೂ ಹೆಚ್ಚು ಅಧಿಕ ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಮೇನಾಲ ಬಳಿ ರಸ್ತೆ ಪರಂಬೋಕು ಸ್ಥಳದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಲಾಗಿರುವ‌ ಮಾಹಿತಿ ಪಡೆದ ಕಂದಾಯ ಇಲಾಖೆಯ ಅಧಿಕಾರಿಗಳು ಡಿ.18 ರಂದು‌ ದಾಳಿ ಮಾಡಿದ್ದರು .


ಅಜ್ಜಾವರ ಗ್ರಾಮ ಆಡಳಿತಾಧಿಕಾರಿ ಶರತ್ ಹಾಗೂ ಮೆಸ್ಕಾಂ ಎ.ಇ.‌ ಸುಪ್ರೀತ್ ಮರಳು ದಾಸ್ತಾನು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಸುಳ್ಯ ತಹಶೀಲ್ದಾರ್ ರಿಗೆ ವರದಿ ನೀಡಿದ್ದ ಹಿನ್ನೆಲೆಯಲ್ಲಿ ಈ ದಾಸ್ತಾನು ಘಟನೆ ಬೆಳಕಿಗೆ ಬಂದಿದೆ.ಇದೀಗ ಗಣಿ ಇಲಾಖೆಯವರು ಮೇನಾಲಕ್ಕೆ ಭೇಟಿ ನೀಡಿ ಮರಳು ತಮ್ಮ ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ. ಸುಳ್ಯ ತಹಶೀಲ್ಧಾರ್ ಇತ್ತೀಚೆಗೆ ಕೆಲವು ವಿಚಾರದಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವುದು ಕಂಡು ಬಂದಿದೆ.ಇವರ ಈ ಕ್ರಮಕ್ಕೆ ಕೆಂಪು ಕಲ್ಲು , ಮತ್ತು ಮರಳು ಮಾರಾಟ ಉದ್ಯಮಿಗಳು ಬೆದರಿದ್ದು , ಸರ್ವಾಜನಿಕರು ಸುಳ್ಯ ತಹಶೀಲ್ಧಾರ್ ಕ್ರಮಕ್ಕೆ ಭೇಷ್ ಎನ್ನುತ್ತಿದ್ದಾರೆ, ಇದೀಗ ಧಕ್ಷ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ನೈತಿಕ ಬೆಂಬಲ ಬೇಕಿದೆ ಎನ್ನುವುದು ಸಾರ್ವಜನಿಕ ವಲಯದ ಮಾತಾಗಿದೆ.

ರಾಜ್ಯ