ಅಮ್ಮಾ..ಎಷ್ಟು ಕರೆದರೂ.. ಗೋಗರೆದರು.. ನಿನ್ಯಾಕೆ ನನ್ನ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ.. ಅಮ್ಮಾ…ನಿನ್ನ ನೆನೆದು ಕಣ್ಣೆಲ್ಲಾ ತೇವವಾಗಿದೆ ಕರೆದೊಯ್ಯಮ್ಮಾ…ಎಷ್ಟಾದರು ನಾನು ನಿನ್ನ ಕಂದನಲ್ಲವೇ…

ಅಮ್ಮಾ..ಎಷ್ಟು ಕರೆದರೂ.. ಗೋಗರೆದರು.. ನಿನ್ಯಾಕೆ ನನ್ನ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ.. ಅಮ್ಮಾ…ನಿನ್ನ ನೆನೆದು ಕಣ್ಣೆಲ್ಲಾ ತೇವವಾಗಿದೆ ಕರೆದೊಯ್ಯಮ್ಮಾ…ಎಷ್ಟಾದರು ನಾನು ನಿನ್ನ ಕಂದನಲ್ಲವೇ…

ಅಮ್ಮಾ..ಎಷ್ಟು ಕರೆದರೂ.. ಗೋಗರೆದರು.. ನಿನ್ಯಾಕೆ ನನ್ನ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ.. ಅಮ್ಮಾ…ನಿನ್ನ ನೆನೆದು ಕಣ್ಣೆಲ್ಲಾ ತೇವವಾಗಿದೆ ಕರೆದೊಯ್ಯಮ್ಮಾ…ಎಷ್ಟಾದರು ನಾನು ನಿನ್ನ ಕಂದನಲ್ಲವೇ… ಜೊತೆಗೆ ಕರೆದೊಯ್ಯಮ್ಮ….ಎಂದು ಕಣ್ಣೀರಿಟ್ಟು ಕೋಗರೆಯುತ್ತಿದೆ 3 ತಿಂಗಳ ಪುಟ್ಟ ಕಂದಮ್ಮ
ತಾಯಿ ತಂದೆ – ಜೊತೆಗಾರರ ಜೊತೆ ಆಡಿ ಬೆಳೆಯಬೇಕಾಗಿದ್ದ ಪುಟ್ಟ ಕಂದಮ್ಮ ತನ್ನ ಹೆತ್ತವರಿಗಾಗಿ ಕಣ್ಣೀರುಡುತ್ತಿದೆ..ತಾಯಿ ಮಡಿಲು ಸೇರಲು ಹಾತೋರೆಯುತ್ತಿದೆ.


ಇದು ಯಾವುದೋ ಸಿನಿಮಾದ ಕತೆಯಲ್ಲ ಸುಳ್ಯ ತಾಲೋಕಿನ ಅಜ್ಜಾವರ ಗ್ರಾಮದಂಚಿನ ಕಾಡಿನಲ್ಲಿ ಕಣ್ಣೀರ ಕೋಡಿ ಹರಿಸುತ್ತಿರುವ ಪುಟ್ಟ ಆನೆಮರಿಯೊಂದರ ಕಥೆ..ಕರುಳು ಹಿಂಡುವ ಕಣ್ಣೀರ ಕಥೆ..

ಹೌದು ಅದು ಎ.12 ರಾತ್ರಿ ಮರಿಯಾನೆಯ ಪಾಲಿನ ಕರಾಳ ರಾತ್ರಿ… ಹಸಿರು ಗಿಡ ಮರಗಳು ಒಣಗಿ ಸೋರಗಿದ ಕಾಡು, ನೀರಿನ ಒರತೆಗಳಿಲ್ಲದೆ ಬತ್ತಿಹೋದ ತೋಡು,ಇವೆಲ್ಲ ಸಂಕಷ್ಟಗಳ ನಡುವೆ ನಾಡಿಗೆ ಬಂದ ಕಾಡಾನೆಗಳ ಹಿಂಡು ಅಜ್ಜಾವರ ಗ್ರಾಮದ ಮೇದಿನಡ್ಕ ಸಮೀಪದ ಸಂತೋಷ್ ರೈ ಯವರ ತೋಟಕ್ಕೆ ನುಗ್ಗಿವೆ
ತೋಟದಲ್ಲಿ ಬೆಳೆದ ಬಾಳೆಗಳನ್ನು ತಿಂದು ನೀರು ಕುಡಿಯಲೆಂದು ಹೋದ ಮರಿಯಾನೆ ಕೆರೆಗೆ ಬಿದ್ದು ಬಿಟ್ಟಿದೆ.. ರಕ್ಷಣೆಗೆ ದಾವಿಸಿದ ಹಿರಿಯಾನೆಗಳು ಮತ್ತೊಂದು ಮರಿಯಾನೆಯೂ ಕೆರೆಯಲ್ಲಿ ಬಿದ್ದು ಸಿಲುಕುವಂತಾಯ್ತು ಕೆರೆಯಿಂದ ಮೇಲೆ ಬರಲಾಗದೆ ಚಡಪಡಿಸಿ ದೀನಪೂರ್ತಿ ನೀರಲ್ಲೆ ಕಳೆದ ಆನೆಗಳ ಹಿಂಡು ಮರುದಿನ ಅರಣ್ಯಾಧಿಕಾರಿಗಳ ಮತ್ತು ಸ್ಥಳೀಯರ ಕಾರ್ಯಾಚರಣೆಯಲ್ಲಿ ಹೇಗೋ ಕಾಡು ಸೇರಿಕೊಂಡಿತ್ತು:ಆದರೆ.. ಬಸವಳಿದು ನಡೆಯಲಾರದೆ ಹೋದ ಮರಿಯಾನೆ ಮಾತ್ರ ಅಲ್ಲಿಯೇ ಬಾಕಿಯಾಗಿ ಬಿಟ್ಟಿತು. ಮರಿಯಾನೆಯನ್ನು ತಾಯಿ ಜೊತೆ ಸೇರಿಸಲು ಅರಣ್ಯಾಧಿಕಾರಿಗಳು ಮತ್ತು ಸ್ಥಳಿಯರು ಹೇಗೋ ಕಾಡಿನಂಚಿಗೆ ಬಿಟ್ಟು ಬಂದರು, ಆದರೆ ಕಾಡಿನತ್ತ ಓಟ ಕಿತ್ತ ಹಿರಿಯಾನೆಗಳು ಮರಿಯನ್ನು ಹತ್ತಿರ ಸೇರಿಸಿ ಕೊಳ್ಳಲೇ ಇಲ್ಲ: ಅತ್ತು ಅತ್ತು ಕಣೀರ ಸುರಿಸುತ್ತಿರುವ ಮರಿಯಾನೆ ಈಗಾ ಅರಣ್ಯಾಧಿಕಾರಿಗಳ ರಕ್ಷಣೆಯಲ್ಲಿಯೇ ಇದೆ. ಅಜ್ಜಾವರ ಗ್ರಾಮದ ಮೇದಿನಡ್ಕ ಸಮೀಪದ ಬೆಳ್ಳಾಪಾರೆ ಎಂಬಲ್ಲಿ ರಸ್ತೆ ಬದಿಯ ಕಾಡಿನಂಚಿನಲ್ಲಿ ತಾಯಿಯ ಅಪ್ಪುಗೆಗಾಗಿ ಹಾತೋರೆಯುತ್ತಿದೆ:ಅಮ್ಮಾ… ಎಂದು ರೋದಿಸುತ್ತಿದೆ

ರಾತ್ರಿಯಿಡೀ ಮರಿಯಾನೆಗೆ ಕಾವಲಾದ ಅರಣ್ಯಾಧಿಕಾರಿಗಳು.

ಈದೀಗ ಮರಿಯಾನೆಗೆ ವೈದ್ಯರ ಸಲಹೆ ಮೇರೆಗೆ ಗ್ಲೋಕೋಸ್ ನೀಡಲಾಗುತ್ತಿದೆ, ಹಸಿರು ಹುಲ್ಲು ಕೊಡಲಾಗುತ್ತಿದೆ ನೀರು ಸಿಂಪಡಿಸಿ ದೇಹ ತಂಪಾಗಿಸಿ ಪೋಷಣೆ ಮಾಡಲಾಗುತ್ತಿದೆ.ಅರಣ್ಯಾಧಿಕಾರಿಗಳ ತಂಡ ಕಣ್ಣಿಗೆ ಕಣ್ಣಿಟ್ಟು ರಾತ್ರೀಯಿಡೀ ಮರಿಯಾನೆಯ ಕಾವಲು ಕಾಯುತ್ತಿದ್ದಾರೆ.

ರಾಜ್ಯ