ಕಾಂಗ್ರೇಸ್ ಕಛೇರಿಯಲ್ಲಿ ಅಭಿಪ್ರಾಯ ಸಂಗ್ರಹ ಸ್ಥಳದಲ್ಲಿ ಕಾರ್ಯಕರ್ತರಿಂದ ಆಕ್ರೋಶ.ಆಕ್ರೋಶಿತರನ್ನು ಸಮಾದಾನ ಪಡಿಸಿದ ನಂದಕುಮಾರ್.

ಕಾಂಗ್ರೇಸ್ ಕಛೇರಿಯಲ್ಲಿ ಅಭಿಪ್ರಾಯ ಸಂಗ್ರಹ ಸ್ಥಳದಲ್ಲಿ ಕಾರ್ಯಕರ್ತರಿಂದ ಆಕ್ರೋಶ.
ಆಕ್ರೋಶಿತರನ್ನು ಸಮಾದಾನ ಪಡಿಸಿದ ನಂದಕುಮಾರ್.

ಅಭ್ಯರ್ಥಿ ಆಯ್ಕೆ ಸರಿಯಲ್ಲ ನಂದಕುಮಾರ್ ಅವರಿ ಬಿ ಪಾರ್ಮ್ ನೀಡಬೇಕು ಎಂದು ನಂದಕುಮಾರ್ ಬೆಂಬಲಿಗರು ಆಯ್ಕೆ ಪ್ರಕ್ರಿಯೆಗೆಂದು ಆಗಮಿಸಿದ ಕಾಂಗೇಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಎಂಎಲ್ ಸಿ ಮಂಜುನಾಥ್ ಬಂಡಾರಿ ಮತ್ತು ಮಾಜೀ ಸಚಿವ ರಮಾನಾಥ್ ರೈ ಕೆ ಪಿ ಸಿ ಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮುಂದೆ ಆಗ್ರಹ ವ್ಯಕ್ತಪಡಿಸಿ ಆಕ್ರೋಶ ಹೊರ ಹಾಕಿದ ಘಟನೆ ನಡೆಯುತ್ತಿದೆ ಸುಮಾರು ೫೦೦ ಕ್ಕೂ ಅಧಿಕ ಮಂದಿ ಆಕ್ರೋಶ ಹೊರ ಹಾಕುತ್ತಿದ್ದು ಬಹುತೇಕರು ನಂದಕುಮಾರ್ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೇಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಳ್ಯದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಆಯ್ಕೆಯಲ್ಲಿ ಕಗ್ಗಂಟು ಉಂಟಾಗಿದ್ದು, ಡಿ ಕೆ ಶಿವಕುಮಾರ್ ನಿನೆ ಬೆಂಗಳೂರಿನಲ್ಲಿ ಸುಳ್ಯದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ತಿಳಿಸಿದ್ದರು. ಅದರಂತೆ ಇಂದು ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ ನಾಯಕರಿಗೆ ಇಂದು ಕಾಂಗ್ರೇಸ್ ಕಾರ್ಯಕರ್ತರ ಅಭಿಪ್ರಾಯ ಸಿಕ್ಕಿದೆ. ಏಕಾ ಏಕಿ ಕಚೇರಿಯ ಒಳ ಕೋಣೆಗೆ ನುಗ್ಗಿದ ಕಾರ್ಯಕರ್ತರು ಆಕ್ರೋಶ ಭರಿತರಾಗಿ ಅಭಿಪ್ರಾಯ ಹಂಚಿಕೆ ಮಾಡಿದ್ದಾರೆ,

ಈ ಸಂದರ್ಭ ಪ್ರಮುಖರಾದ ಬ್ಲಾಕ್ ಅಧ್ಯಕ್ಷ. ಪಿ ಸಿ ಜಯರಾಮ , ಭರತ್ ಮುಂಡೋಡಿ, ಪಿ.ಎಸ್ ಗಂಗಾಧರ , ಪಿ ಎಸ್ ಗಂಗಾಧರ್ ಸೇರಿದಂತೆ ಹಲವು ನಾಯಕರಿದ್ದರು.

ರಾಜ್ಯ