ಸುಳ್ಯ:ಸಚಿವ ಅಂಗಾರರಿಂದ ರಾಜಕೀಯಕ್ಕೆ ಸಂಪೂರ್ಣ ನಿವೃತಿ ಘೋಷಣೆ…! ಪಕ್ಷದೊಳಗಿದ್ದು ಪಕ್ಷವಿರೋಧಿ ಚಟುವಟಿಕೆ ನಡೆಸಿದ ಕೆಲವೊಬ್ಬರ ಪಿತೂರಿಯಿಂದ ನಿಷ್ಟಾವಂತರಿಗೆ ಬೆಲೆ ಇಲ್ಲದಂತಾಗಿದೆ.

ಸುಳ್ಯ:ಸಚಿವ ಅಂಗಾರರಿಂದ ರಾಜಕೀಯಕ್ಕೆ ಸಂಪೂರ್ಣ ನಿವೃತಿ ಘೋಷಣೆ…! ಪಕ್ಷದೊಳಗಿದ್ದು ಪಕ್ಷವಿರೋಧಿ ಚಟುವಟಿಕೆ ನಡೆಸಿದ ಕೆಲವೊಬ್ಬರ ಪಿತೂರಿಯಿಂದ ನಿಷ್ಟಾವಂತರಿಗೆ ಬೆಲೆ ಇಲ್ಲದಂತಾಗಿದೆ.


ಹಲವು ಬಾರಿ ಸಹಕರಿಸಿದ ಸುಳ್ಯದ ಜನತೆಗೆ ಋಣಿಯಾಗಿದ್ದೇನೆ.
ಪಕ್ಷದೊಳಗಿದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕೆಲವೊಂದು ವ್ಯಕ್ತಿಗಳ ಪಿತೂರಿಯಿಂದ ಈ ಬಾರಿ ನನಗೆ ಬಿಜೆಪಿಯಿಂದ ಸೀಟು ದೊರೆಯಲಿಲ್ಲ, ಈ ಬಾರಿ ನಾನು ತೋರಿದ ಪಕ್ಷ ನಿಷ್ಟೆ, ಹಾಗೂ ಅಭಿವೃದ್ದಿ ಕಾರ್ಯ ಪರಿಗಣಿಸಿ ಮತ್ತೆ ಸೀಟು ದೊರೆಯುವ ಭರವಸೆ ಹೊಂದಿದ್ದೆ . ಆದರೆ ಸೀಟ್ ಗಾಗಿ ಯಾವುದೇ ಲಾಭಿ ಮಾಡಲು ಹೊಗಿರಲಿಲ್ಲ, ಲಾಭಿ ನಡೆಸಿದ್ದರೆ ಸೀಟು ಗಿಟ್ಟಿಸಿಕೊಳ್ಳಬಹುದಿತ್ತು,ನಾನು ಪ್ರಾಮಾಣಿಕ ರಾಜಕೀಯ ಮಾಡುತ್ತಾ ಬಂದವನು, ಸುಳ್ಯ ಕ್ಷೇತ್ರದ ಅಭಿವೃದ್ದಿಗೆ ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ.ದಿಡೀರ್ ಅಭ್ಯರ್ಥಿ ಬದಲಾವಣೆ ಬೇಸರ ತಂದಿದೆ, ಮಂದಿನ ದಿನಗಳಲ್ಲಿ ಸಂಪೂರ್ಣ ಪಕ್ಷ ಚಟುವಟಿಕೆಯಿಂದ ಹಿಂದೆ ಸರಿದಿದ್ದೇನೆ, ಇಷ್ಟು ಬಾರಿ ಅವಕಾಶ ನೀಡಿದ ಸುಳ್ಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ, ಈಗಾಲೇ ಚಾಲನೆ ನೀಡಲಾಗಿರುವ ಅಭಿವೃದ್ದಿ ಕೆಲಸಗಳು ಮುಂದು ವರಿಯದೇ ಇದ್ದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿದ್ದರೂ ಜನರ ದ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ನ್ಯೂಸ್ ರೂಮ್ ಫಸ್ಟ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಜ್ಯ