
ಮಿಂಚಿನ ದಾಳಿಗೆ ಹಲವು ಅಂಗಡಿಗಳಿಂದ ತಂಬಾಕು ಉತ್ಪನ್ನ ವಶ..
ಸುಳ್ಯ ನಗರದಾದ್ಯಂತ ತಂಬಾಕು ಮತ್ತು ಗುಟುಕಾ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ಪೋಲೀಸ್ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ, ಶಾಲೆ ಮತ್ತು ಕಾಲೇಜು ಬಳಿಯ ಅಂಗಡಿಗಳಲ್ಲಿ ಸಿಗರೇಟ್ ಮತ್ತು ಗುಟುಕಾ ಮಾರಾಟ ಮಾಡುತ್ತಿದ್ದ ಖಚಿತ ವರ್ತಮಾನದ ಮೇರೆಗೆ ಪೋಲೀಸ್ ಇಲಾಖೆ ದಾಳಿ ಸಂಘಟಿಸಿದೆ ಎಂದು ತಿಳಿದು ಬಂದಿದೆ, ಕೆ ವಿ ಜಿ ಜಂಕ್ಷನ್, ಜ್ಯೋತಿಸರ್ಕಲ್ , ಜಟ್ಟಿಪಳ್ಳ, ಗಾಂಧೀನಗರ ಸೇರಿದಂತೆ ನಗರದ ಹಲವು ಕಡೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ, ಈ ಸಂದರ್ಭದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಕಂಡು ಬಂದಿದ್ದು ಅವಗಳನ್ನು ಸೀಜ್ ಮಾಡಲಾಗಿದೆ. ಎಂದು ತಿಳಿದು ಬಂದಿದೆ. ಸುಳ್ಯ ವೃತ್ತನಿರೀಕ್ಷಕ ರವೀಂದ್ರ ಮಾರ್ಗದರ್ಶನದಲ್ಲಿ ಸುಳ್ಯ ಠಾಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ಸಿಬ್ಬಂದಿವರ್ಗ ಕಾರ್ಯಾಚರಣೆ ನಡೆಸಿದ್ದಾರೆ.

