ಎಂ.ಬಿ. ಫೌಂಡೇಶನ್ ನೇತೃತ್ವದ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡ ಉದ್ಘಾಟನೆ.

ಎಂ.ಬಿ. ಫೌಂಡೇಶನ್ ನೇತೃತ್ವದ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡ ಉದ್ಘಾಟನೆ.

ಸಾಂದೀಪ್ ಶಿಕ್ಷಣ ಸಂಸ್ಥೆಯಿಂದ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ,ಹೃದಯದಿಂದ ಶಿಕ್ಷಣ ನೀಡುತ್ತಿದ್ದಾರೆ: ಮಂಜುನಾಥ ಭಂಡಾರಿ.

ಎಂ. ಬಿ ಸದಾಶಿವರವರು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರು : ಬಿ ಎಂ ಫಾರೂಕ್.

ಅಗಲಿದ ಸ್ನೇಹಿತನ ಸಾಂದೀಪ್ ಹೆಸರನ್ನೇ ತಾನು ನಡೆಸುವ ಶಿಕ್ಷಣ ಸಂಸ್ಥೆಗೆ ಇಟ್ಟು,ಮತ್ತು ಈ ಸಂಸ್ಥೆಯಲ್ಲಿ ದೇವರ ಮಕ್ಕಳೆಂದು ನಾವು ನೀವೆಲ್ಲ ಕರೆಯುವ ಈ ವಿಶೇಷ ಮಕ್ಕಳಿಗೆ ಎಂ.ಬಿ ಸದಾಶಿವ ಮತ್ತು ಹರಿಣಿ ಸದಾಶಿವ ರವರೆ ನಿಜವಾದ ದೇವರಾಗಿದ್ದಾರೆ, ಎಷ್ಟೋ ಕಡೆ ಈ ರೀತಿ ಇರುವ ಸ್ವಂತ ಮಕ್ಕಳನ್ನೇ ತಂದೆ ತಾಯಿಯರು ನೋಡಿಕೊಳ್ಳಲು ತಾರತಮ್ಯ ಮಾಡುವ ಈ ಕಾಲದಲ್ಲಿ, ಸಾಂದೀಪ್ ಸಂಸ್ಥೆ ಅಂತಹ ಮಕ್ಕಳಿಗೆ ಹೃದಯದಿಂದ ಸಂಸ್ಕಾರ ಕಲಿಸುತ್ತಿದ್ದಾರೆ,ಇಂತಹ ಸಂಸ್ಥೆಗೆ ಯಾವುದೇ ಸರಕಾರ ಬರಲಿ ನಿಜವಾಗಿಯೂ ಅನುದಾನ ಕೊಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಬಂಡಾರಿ ಹೇಳಿದ್ದಾರೆ.ಅವರು
ಎಂ.ಬಿ. ಫೌಂಡೇಶನ್ ವತಿಯಿಂದ ಎಂ.ಬಿ. ಸದಾಶಿವರವರು ಮತ್ತು ಹರಿಣಿ ಸದಾಶಿವ ತಮ್ಮ ಜಾಗದಲ್ಲಿ ನಿರ್ಮಿಸಿರುವ ಭಿನ್ನ ಸಾಮರ್ಥ್ಯದ ವಿಶೇಷ ಮಕ್ಕಳ ಸಾಂದೀಪ್ ವಿಶೇಷ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು ಫೆ. 12 ರಂದು ಸಾಂದೀಪ್ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆಯನ್ನು ಸುಳ್ಯ ಎ.ಒ.ಎಲ್.ಇ. ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಉದ್ಘಾಟಿಸಿದರು,


ರೂ.1.45 ಕೋಟಿ ವೆಚ್ಚದಲ್ಲಿ ಸರ್ವಸಜ್ಜಿತ ನೂತನ ಕಟ್ಟಡ ನಿರ್ಮಾಣಗೊಂಡಿದ್ದು ಫಿಸಿಯೋ ತೆರಪಿ, ವಾಕ್ ಶ್ರವಣ ತರಬೇತಿ, ಮಾನಸಿಕ ಆರೋಗ್ಯ ಕೇಂದ್ರ ಹಾಗೂ ವಿದೇಶದಿಂದ ಆಮದು ಮಾಡಿದ ಯಂತ್ರದ ಮೂಲಕ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕು ರೂಪಿಸಲು ಸ್ವಯಂ ಉದ್ಯೋಗ ಸೃಷ್ಠಿಸುವ ಸಲುವಾಗಿ ಚೀನದಿಂದ ಯಂತ್ರ ಆಮದು ಮಾಡಿ ಪ್ರಯೋಗಾತ್ಮವಾಗಿಯೂ ವಿಶೇಷ ಮಕ್ಕಳು ಸೇವಾತತ್ಪರತೆಯಿಂದಿರಲು ಅವಕಾಶವನ್ನು ಈ ಕಟ್ಟಡದಲ್ಲಿ ಕಲ್ಪಿಸಲಾಗಿರುವ ಈ ಕಟ್ಟಡದ ಕೆಳ ಅಂತಸ್ತಿನ ಶಾಲಾ ಕೊಠಡಿಯನ್ನು ಬಂದರು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರು ಉದ್ಘಾಟಿಸಿದರು.ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಖ್ ವೃತ್ತಿ ಶಿಕ್ಷಣ ಕೇಂದ್ರ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಫಿಜಿಯೋ ತೆರಫಿ ಕೊಠಡಿ ಮತ್ತುಉದ್ಯಮಿಗಳಾದ ಅಬ್ದುಲ್ ರಹಿಮಾನ್ ಸಂಕೇಶ್ ನಾಯಕತ್ವ ತರಬೇತಿ ಕೇಂದ್ರ ಉದ್ಘಾಟಿಸಿದರು. ಸುಳ್ಯ ಎ.ಒ.ಎಲ್.ಇ. ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ವೈದ್ಯಕೀಯ ತಪಾಸಣಾ ಕೊಠಡಿ ಉದ್ಘಾಟಿಸಿದರು.


ಸಭಾ ಕಾರ್ಯಕ್ರಮ ಯುವಜನ ಸಂಯುಕ್ತ ಮಂಡಳಿ ವಠಾರದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು
ನ.ಪಂ.ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ವಹಿಸಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಬಿ ಜಯರಾಮ ಮತ್ತು ಗೀತಾ ಜಯರಾಮ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಂದರು ಮೀನುಗಾರಿಕೆ ಒಳನಾಡು ಸಚಿವ ಎಸ್ ಅಂಗಾರ ಬಾಗವಹಿಸಿ ಬಿನ್ನ ಸಾಮರ್ಥ್ಯದ ಮಕ್ಕಳಿಗೆ ಸಂಸ್ಕಾರ ಕಲಿಸುವುದೆಂದರೆ ಸಾಮಾನ್ಯ ಕೆಲಸವಲ್ಲ ಈ ಅಸಮಾನ್ಯ ಶಕ್ತಿ ಎಂ.ಬಿ ಸದಾಶಿವ ದಂಪತಿಗಳಿದೆ,ಮಕ್ಕಳಿಗೆ ಮನೋ ಶಕ್ತೀ ನೀಡಿದಾಗ ಮಾತ್ರ ಮಕ್ಕಳನ್ನು ತಿದ್ದುವ ಕೆಲಸ ಸಾಧ್ಯವಿದೆ.ಇಂತಹ ಮಕ್ಕಳು ಕೊಯಿಲ ಮತ್ತು ಕೊಕ್ಕಡದಲ್ಲಿದ್ದಾರೆ ಎಲ್ಲರಿಗೂ ಅನುಕೂಲವಾಗುವಂತೆ ಸಹಾಯ ಹಸ್ತ ಚಾಚುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಧಾನ ಪರಿಷತ್ ಸದಸ್ಯ,ಬಿ ಎಂ ಫಾರೂಕ್ ಮಾತನಾಡಿ, ಇಂದಿನ ವರೆಗೂ ಇಂತಹ ಸಂಸ್ಥೆ ನಡೆಸುತ್ತಿದ್ದೇನೆ ಎಂದು ಹೇಳಿಕೊಳ್ಳದೆ ,ಯಾರ ಅನುದಾನಕ್ಕೂ ಕಾಯದೆ ೨೦ ವರ್ಷಗಳಿಂದ ಈ ಸಂಸ್ಥೆಯನ್ನು ನಡೆಸುತ್ತಿರುವ ಎಂ.ಬಿ ದಂಪತಿ ಮತ್ತು ಶಿಕ್ಷಕ ವರ್ಗದ ಸಾಧನೆಯನ್ನು ಶ್ಲಾಗಿಸಿದರು, ಎಂ ಬಿ ಸದಾಶಿವ ರವರು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರು ಎಂದು ಅಭಿಪ್ರಾಯ ಪಟ್ಟರುಮತ್ತು ನೆರವಿನ ಭರವಸೆ ನೀಡಿದರು, ಕಾರ್ಯಕ್ರಮದ ವೇದಿಕೆಯಲ್ಲಿ , ಹೈದರಾಭಾದ್ ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್ ಜರ್ಮನಿಯ ಕ್ಯಾರೋಲೀನಾ, ಕ್ರಿಸ್ಟೀನ್, ಕೆ ವಿ ಜಿ ವೈಧ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷ ಡಾ ಕೆ ವಿ ಚಿದಾನಂದ,ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್, ಪಮೆಲಾ ಸಂದೀಪ್ ಮೊದಲಾದವರು ಅತಿಥಿಯಾಗಿದ್ದರು.ಎಂ.ಬಿ. ಫೌಂಡೇಶನ್‌ನ ಅಧ್ಯಕ್ಷ ಎಂ.ಬಿ.ಸದಾಶಿವ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಜಿ ಪುಷ್ಪಾ ರಾಧಾಕೃಷ್ಣ ವಂದಿಸಿದರು.ಸುಸ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು. ಸಾಂದೀಪ್ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ, ಎಂ.ಬಿ.ಫೌಂಡೇಶನ್ ಸಲಹಾ ಸಮಿತಿ ಸದಸ್ಯರಾದ ಎನ್.ಜಯಪ್ರಕಾಶ್ ರೈ, ಕೆ.ಸಿ.ಕರುಂಬಯ್ಯ, ಎಂ.ಬಿ.ಫೌಂಡೇಷನ್ ಕಾರ್ಯದರ್ಶಿ ಡಾ.ಸವಿತಾ ಲಕ್ಷ್ಮಿ, ಟ್ರಸ್ಟಿಗಳಾದ ಎಂ.ಎಸ್.ನಿಹಾಲ್, ಶರೀಫ್ ಜಟ್ಟಿಪಳ್ಳ, ಪುಷ್ಪಜಯರಾಮ ಉಪಸ್ಥಿತರಿದ್ದರು.

ರಾಜ್ಯ