
ಇದೇ ತಿಂಗಳ 22ರಂದು ಪುತ್ತೂರಿನಲ್ಲಿ ನಡೆಯಲಿರುವ ಆದಿ ಚಂಚುನಗಿರಿ ಮಹಾಸಂಸ್ಥಾನದ ಮಹಾ ಸ್ವಾಮಿಯವರಾದ ಭೈರವೈಕ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿಯವರಿಗೆ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
ಪುತ್ತೂರು ಕ್ಷೇತ್ರದ ಶಾಸಕರಾದ ಶ್ರೀ ಸಜೀವ ಮಠಂದೂರು, ಮಹಾಲಿಂಗೇಶ್ವರ ಕೈಗಾರಿಕಾ
ಸಂಸ್ಥೆಯ ಸಂಚಾಲಕಾರದ ಶ್ರೀ ರಾಮಕೃಷ್ಣ ಯು.ಪಿ, ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಇದರ ಸಂಚಾಲಕರಾದ ಎಂ.ಪಿ ಉಮೇಶ್ರವರು ಶ್ರೀಯುತರನ್ನು ಆಮಂತ್ರಿಸಿದ್ದರು ಕಾರ್ಯಕ್ರಮದ ಯಶಸ್ಸಿನ ಸಲುವಾಗಿ ಡಾ. ರೇಣಕಾ ಪ್ರಸಾದ್ ರವರು ರೂ. 100001ನ್ನು ದೇಣಿಗೆಯಾಗಿ ನೀಡಿ ಶುಭ ಹಾರೈಸಿದರು.ಈ ಸಂಧರ್ಭದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಉಜ್ವಲ್ ಊರುಬೈಲು, ಉಪಾಧ್ಯಕ್ಷರ ಆಡಳಿತ ಕಛೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ ಉಪಸ್ಥಿತರಿದ್ದರು.

