ಸುಳ್ಯದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಭಾ ಕಾರ್ಯಕ್ರಮ ಮತ್ತು ಸವಲತ್ತುಗಳ ವಿತರಣೆ.

ಸುಳ್ಯದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಭಾ ಕಾರ್ಯಕ್ರಮ ಮತ್ತು ಸವಲತ್ತುಗಳ ವಿತರಣೆ.

ಸುಳ್ಯ ನಗರ ಪಂಚಾಯತ್ ಮುಖ್ಯ ಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಹಂತ – 4ರ ಯೋಜನೆಯಲ್ಲಿ ಸುಳ್ಯ ನಗರ ಪಂಚಾಯತ್‌ಗೆ ಮಂಜೂರಾಗಿರುವ ರೂ. 5 ಕೋಟಿ ಮೊತ್ತದ
ಯೋಜನೆಯಲ್ಲಿ ರೂ. 2.80 ಕೋಟಿ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ, ಸಣ್ಣ ನೀರಾವರಿ ಇಲಾಖೆಯಿಂದ ಕಲ್ಲುಮುಟ್ಟುವಿನಲ್ಲಿ ಮಂಜೂರಾದ ರೂ. 17.00 ಕೋಟಿಯ ಕಿಂಡಿ ಅಣೆಕಟ್ಟು ಹಾಗೂ ಆರೋಗ್ಯ


ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಡಿ 9.ಶುಕ್ರವಾರ ದಂದು ಸುಳ್ಯ ಲಯನ್ಸ್ ಸೇವಾ ಸಧನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಒಳನಾಡು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್ ಅಂಗಾರ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಇರುವ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿದಾಗ ವ್ಯವಸ್ಥೆ ಉನ್ನತ ಮಟ್ಟದಲ್ಲಿ ಹೋಗಲು ಸಾದ್ಯ, ಸುಳ್ಯ ತಾಲೋಕು1994 ರಿಂದ ನಿರಂತರವಾಗಿ ಅಭಿವೃದ್ದಿ ಯಾಗುತ್ತಿದೆ , ಜನರು ನೀಡಿರುವ ಜವಬ್ಧಾರಿಗಳಿಗೆ ಬದ್ದತೆಯಿಂದ ಜನಪ್ರತಿನಿಧಿಗಳು ಕೆಲಸಮಾಡಬೇಕಾಗಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಪಂಚಾಯತ್ ಅದ್ಯಕ್ಷ ವಿನಯ್ ಕುಮಾರ್ ಕಂದಡ್ಕ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಯಡಿಯೂರಪ್ಪ ಅಧಿಕಾರ ರಾಜ್ಯದಲ್ಲಿ ಇದ್ದಾಗ ಬಂದಂತಹ ಅನುದಾನವನ್ನು ಹೊರತ್ತು ಪಡಿಸಿ ಸುಳ್ಯ ನಗರಕ್ಕೆ ಬಹು ದೊಡ್ಡ ಮೊತ್ತದ ಅನುದಾನಾ ಈ ಭಾರಿಯೇ ಬಂದಿದೆ, ನಗರದಲ್ಲಿ ಈ ಭಾರಿ ಸಾಕಷ್ಟು ಅಭಿವೃದ್ದಿಯಾಗಲಿದೆ, ನಗರದ ಜನರ ಕುಡಿಯುವ ನೀರಿನ ಸಮಸ್ಯೇ ಸದ್ಯದಲ್ಲೇ ಪರಿಹಾರವಾಗಲಿದೆ, ಸುಳ್ಯದ ಅತಿ ದೊಡ್ಡ ಸಮಸ್ಯೆಯಾದ ಕಸ ವಿಲೇವಾರಿಯ ಸಮಸ್ಯೆ ಇದರಲ್ಲೂ ನಾವೀಗ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಕಸದಲ್ಲಿ ಗ್ಯಾಸ್ ಉತ್ಪಾದನೆ ಮಾಡುವ ಹಂತಕ್ಕೆ ಬಂದಿದ್ದು ಅಲ್ಲಿ ಈಗ ವಿದ್ಯುತ್ ಉಪಯೋಗ ಇಲ್ಲದೇಯೇ ಕೇವಲ ಕಸದಿಂದ ಉತ್ಪತ್ತಿಯಾದ ಗ್ಯಾಸ್ ನಿಂದ ಕಸ ಬರ್ನ್ ಮಾಡುವ ಯಂತ್ರ ಚಾಲೂ ಆಗ್ತಿದೆ, ಇದು ಇಡೀ ದೇಶದಲ್ಲಿ ವಾರಣಾಶಿ ಬಿಟ್ಟರೆ ಸುಳ್ಯದಲ್ಲಿ ಮಾತ್ರ ಇದೆ ಈ ಯೋಜನೆ ರೋಪುಗೊಳ್ಳಲು ಸಚಿವರ ಅದ್ಯಯನ ಪ್ರವಾಸದಿಂದ ಸಾದ್ಯವಾಯಿತು ಇದಕ್ಕೆ ಎಲ್ಲಾ ಅಧಿಕಾರಿಗಳು ಮತ್ತು ನಗರ ಪಂಚಾಯತ್ ಸದಸ್ಯರು ಸಹಕಾರವನ್ನು ಮಾಡಿದ್ದಾರೆ. ಎಂದರು ಪ್ಲಾಸ್ಟಿಕ್ ಬಳಸದೇ ಇರುವುದರಿಂದ ಮಾತ್ರ ಪ್ಲಾಸ್ಟಿಕ್ ನಿರ್ಮೂಲನೆ ಸಾಧ್ಯ ಎಂದರು, ಕಾರ್ಯಕ್ರಮದಲ್ಲಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಭೀದಿ ಬದಿ ವ್ಯಾಪಾರಿಗಳಿಗೆ ಗುರುತು ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮೀನುಗಾರಿಕಾ ನಗಮದ ಅಧ್ಯಕ್ಷ ಎ.ವಿ ತೀರ್ಥರಾಮ, ಪದ್ಮಶ್ರಿ ಪುರಸ್ಕೃತ ಗಿರೀಶ್ ಭಾರದ್ವಾಜ್, ನಗರ ಪಂಚಾಯತ್ ಉಪಾದ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅದ್ಯಕ್ಷೆ ಶೀಲಾ ಅರುಣ್ ಕುರುಂಜಿ. ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನ ನಿರ್ದೇಶಕ ಅಭಿಷೇಕ್ ವಿ.ಕೆ.ಎ.ಎಸ್,ಜಿಲ್ಲಾ ನಗರಾಭಿವೃದ್ಧಿಕೋಶ ಇದರ ಕಾರ್ಯಪಾಲಕ ಅಭಿಯಂತರ, ಪುರಂದರ ಕೋಟ್ಯಾನ್.ಮೊದಲಾದವರು ಉಪಸ್ಥಿತಿಯಿದ್ದರು ನಗರಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ.ವಂದಿಸಿದರು.

ರಾಜ್ಯ