ಜೀವನ್ ರಾಂ ಸುಳ್ಯರಿಗೆ ಜನಪದ ವಿಶ್ವ ವಿದ್ಯಾನಿಲಯದ ಗೌರವ ಡಾಕ್ಟರೇಟ್..

ಕಠಿಣ ಪರಿಶ್ರಮವಿದ್ದರೆ, ಸಾಧನೆಯ ಛಲವಿದ್ದರೆ, ಗೌರವ ತಾನಾಗಿಯೇ ಒಲಿದು ಬರುವುದು ಎಂಬುದಕ್ಕೆ ಸುಳ್ಯದ ರಂಗಕರ್ಮಿ ಜೀವನ್ ರಾಂ ಸುಳ್ಯ ದೃಷ್ಟಾಂತವಾಗಿದ್ದಾರೆ. ಹೌದು ಹಿರಿಯ ರಂಗ ಕರ್ಮಿ ಸಾವಿರಾರು ವಿದ್ಯಾರ್ಥಿಗಳಿಗೆ ತನ್ನಲ್ಲಿರುವ ರಂಗ ನೈಪುಣ್ಯತೆಯನ್ನು ಧಾರೆ ಎರೆದು ಕಲೆಯಲ್ಲಿಯೂ ಬದುಕು ಸಾಗಿಸಬಹುದು ಎಂದು ಕಲಿಸಿ ಕೊಟ್ಟವರು ಇದೀಗ ಇವರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ನೀಡುವ 2022 ನೇ
ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ಜೀವನ್ ರಾಂ ರವರು ರಂಗಭೂಮಿ, ಜಾನಪದ, ಯಕ್ಷಗಾನ,ಸಂಗೀತ, ಕಲೆ, ಜಾದೂ, ಚಲನಚಿತ್ರ ಹಾಗೂ ಸಂಘಟನೆ ಮುಂತಾಗಿ ಸಾಂಸ್ಕೃತಿಕ ಲೋಕದಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಜಾನಪದ ವಿಶ್ವವಿದ್ಯಾಲಯು ಇವರನ್ನು ಈ ಗೌರವಕ್ಕೆ ಆಯ್ಕೆ ಮಾಡಿರುತ್ತದೆ.ಡಿಸೆಂಬರ್ 1 ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಕರ್ನಾಟಕ ಜಾನಪದ ವಿ.ವಿ.ಯ ಆರನೇ ಘಟಿಕೋತ್ಸವದ ಸಂದರ್ಭದಲ್ಲಿ ಜೀವನ್ ರಾಂ ಅವರಿಗೆ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ರವರು ಪದವಿ ಪ್ರದಾನ
ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್
ನಾರಾಯಣ್ ಸಿ.ಎನ್. ಮೊದಲಾದವರ ಸಮ್ಮುಖದಲ್ಲಿ ಈ ಗೌರವ ಜೀವನ್ ರಾಂ ಮುಡಿಗೇರಲಿದೆ.

