ಚಿಕ್ಕಮಗಳೂರು: ಚಿನ್ನದ
ವಹಿವಾಟು ಮಾಡುವ ವರ್ತಕನನ್ನು ಹೆದರಿಸಿ,
ಬೆದರಿಕೆಯೊಡ್ಡಿ ಆತನಿಂದ ಪೊಲೀಸರೇ 05 ಲಕ್ಷ
ರೂ.ಹಣವನ್ನು ದರೋಡೆ ಮಾಡಿರುವ ಆರೋಪ
ಅಜ್ಜಂಪುರ ಪೊಲೀಸರ ಮೇಲೆ ಬಂದಿದೆ. ಘಟನಾ
ಸಂಬಂಧ ಪ್ರಕರಣ ದಾಖಲಾಗಿದೆ.
ದಾವಣಗೆರೆ ಮೂಲದ ವರ್ತಕ ಭಗವಾನ್ ಅವರ
ಪುತ್ರ ರೋಹಿತ್ ಎಂಬುವವರಿಗೆ ಚಿಕ್ಕಮಗಳೂರು
ಜಿಲ್ಲೆಯ ಅಜ್ಜಂಪುರ ಠಾಣಾಧಿಕಾರಿ ಲಿಂಗರಾಜು
ಹಾಗೂ ಠಾಣೆಯ ಇತರೆ ಪೊಲೀಸರು ಬೆದರಿಸಿ
ಆತನಿಂದ ಚಿನ್ನದ ಒಡವೆಯನ್ನು ಬೇಡಿಕೆಯಿಟ್ಟಿದರು
ಎಂದು ದೂರಿನಲ್ಲಿ ದಾಖಲಿಸಲಾಗಿದೆ.ದಾವಣಗೆರೆಯ ಚಿನ್ನದ ವರ್ತಕ ಭಗವಾನ್ ರವರ ಪುತ್ರ ರೋಹಿತ್ 2 ಕೆ.ಜಿ ಚಿನ್ನದ ಆಭರಣಗಳನ್ನು ಬೇಲೂರಿನ ವ್ಯಾಪಾರಿಗೆ ನೀಡಲೆಂದು ಜಿ.ಎಸ್.ಟಿ ದಾಖಲೆ ಸಹಿತ ಕಾರಿನಲ್ಲಿ ಅಜ್ಜಂಪುರದ ಬುಕ್ಕಂಬುದಿ ಸಮೀಪದ ಹೋಟೆಲ್ ಗೇಟಿನ ಬಳಿ ಇಬ್ಬರು ಪೊಲೀಸರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ಮುಂದೆ ಇಸ್ಪೆಕ್ಟರ್ ಇದ್ದಾರೆ ಅವರ ಬಳಿ ಹೋಗುವಂತೆ ಸೂಚಿಸಿದ್ದಾರೆ.
ಇನ್ಸೆಕ್ಟರ್ ಬಳಿ ತೆರಳಿ ವಾಹನ ನಿಲ್ಲಿಸಿದಾಗ ಕಾರಿನ
ಒಳಕುಳಿತ ಅಜ್ಜಂಪುರ ಠಾಣೆಯ ಇನ್ಸೆಕ್ಟರ್
ಲಿಂಗರಾಜು ಕಾರನ್ನು ಅಜ್ಜಂಪುರದ ಕಡೆಗೆ
ತೆಗೆದುಕೊಂಡು ಹೋಗುವಂತೆ ಸೂಚಿಸಿ ಕೈ
ಸನ್ನೆಯಲ್ಲಿ ಪೊಲೀಸ್ ಜೀಪನ್ನು ಹಿಂಬಾಲಿಸುವಂತೆ
ತಿಳಿಸಿದ್ದಾರೆ ಎನ್ನಲಾಗಿದೆ.ರೋಹಿತ್ ನ್ನು ಬಲವಂತವಾಗಿ ಬೇರೆ ಸ್ಥಳಕ್ಕೆ
ಕರೆದುಕೊಂಡು ಹೋಗಿ 10 ಲಕ್ಷ ರೂ. ನೀಡುವಂತೆ
ಬೇಡಿಕೆ ಸಲ್ಲಿಸಿದ್ದಾರೆ. ತಪ್ಪಿದಲ್ಲಿ ಅಕ್ರಮವಾಗಿ ಚಿನ್ನ
ಸಾಗಿಸುವ ಆರೋಪದ ಮೇಲೆ ಬಂಧಿಸಿ
ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ
ಬೆದರಿಸಿದ್ದಾರೆ ಎಂದು ದೂರು ದಾಖಲಿಸಲಾಗಿದೆ.
ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದು ಅದಕ್ಕೆ
ಸಂಬಂಧಿಸಿದ ದಾಖಲೆಗಳನ್ನು ತೋರಿಸಿದರು ಬಿಡದೆ
ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ
ತಿಳಿಸಿದ್ದು, ಅಂತಿಮವಾಗಿ 5 ಲಕ್ಷ ರೂಗಳಿಗೆ
ವ್ಯವಹಾರ ಕುದುರಿದ್ದು ರೋಹಿತ್
ಅಜ್ಜಂಪುರದಲ್ಲಿರುವ ವರ್ತಕರೊಬ್ಬರಿಂದ ಹಣವನ್ನು
ಪಡೆದು ಇವರಿಗೆ ಸಂದಾಯ ಮಾಡಿದ್ದಾರೆ ಎಂದು
ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರನ್ನು ಆಧರಿಸಿ
ತನಿಖೆ ನಡೆಸಿ ಮೇಲ್ನೋಟಕ್ಕೆ ಆರೋಪ
ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ. ಜನರ ರಕ್ಷಣೆ ಮಾಡಬೇಕಿದ್ದ ಆರಕ್ಷಕರೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಜನರಲ್ಲಿ ಆತಂಕವನ್ನು ಉಂಟುಮಾಡಿದ್ದು ಇಲಾಖೆಯೇ ಈ ಘಟನೆಯಿಂದ ತಲೆ ತಗ್ಗಿಸುವಂತೆ ಆಗಿದೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.
ಇಸ್ಪೆಕ್ಟರ್ ಲಿಂಗರಾಜು ಸೇರಿದಂತೆ
ಸಖರಾಯಪಟ್ಟಣದ ಸಿಪಿಸಿ ಧನಪಾಲ್ ನಾಯ್ಕ,
ಕುದುರೆಮುಖದ ಸಿಪಿಸಿ ಓಂಕಾರ್ ಮೂರ್ತಿ,
ಲಿಂಗದಹಳ್ಳಿಯ ಶರತ್ ರಾಜ್ ಮೇಲೆ ಪ್ರಕರಣ
ದಾಖಲಾಗಿದೆ.
