ಡಿ.16 ರಿಂದ18ರ ವರೆಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮೈದಾನದಲ್ಲಿ ಪ್ರಣವ ಸೌಹಾರ್ದ ಸಹಕಾರಿ ಸಂಘ, ಸುಳ್ಯ ರೈತ ಉತ್ಪಾದಕರ ಕಂಪೆನಿ, ಮಂಗಳೂರು ವಿಶ್ವವಿದ್ಯಾನಿಲಯ, ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಮತ್ತು ಸಹಕಾರಿ ಯೂನಿಯನ್ ಇವುಗಳ ಜಂಟಿ ಆಶ್ರಯದಲ್ಲಿ ನಡೆಯವ ಬೃಹತ್ ಕೃಷಿ ಮೇಳದ ಪ್ರಯುಕ್ತ ಇದರ ಪೂರ್ವಭಾವಿ ಸಭೆ ಸುಳ್ಯ ತಾಲೋಕು ಪಂಚಾಯತ್ ಇದರ ಮಿನಿ ಹಾಲ್ ನಲ್ಲಿ ನಡೆಸಲಾಯಿತು .ಸಭೆಯ ಅಧ್ಯಕ್ಷತೆಯನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ವಹಿಸಿದ್ದರು,ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಕಾರ್ಯಕ್ರಮ ಯಶಸ್ವಿ ಯಾಗಿ ಮಾಡುವುದರ ಜೊತೆಗೆ, ಅತ್ಯಂತ ಪರಿಣಾಮಕಾರಿಯಾಗಿ ಆಗುವಂತೆ ಯೋಜನೆ ರೋಪಿಸಬೇಕು ಹಾಗೂ ಕಾರ್ಯಕ್ರಮದಲ್ಲಿ ಸಂಪೂರ್ಣ್ ಉಚಿತ ಮಾಹಿತಿ ರೈತರಿಗೆ ದೊರೆಯಬೇಕು ಅಲ್ಲದೆ ಸ್ವಾ ಉದ್ಯೋಗ ಬಯಸಿ ಬರುವವರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯ, ಸಹಾಯಧನ ಹಾಗೂ ಸವಲತ್ತುಗಳ ಬಗ್ಗೆ ಮಾಹಿತಿ ದೊರೆಯುವಂತಾಗಬೇಕು ಎಂದರು, ಪ್ರಣವ ಸೌಹಾರ್ದ ಸಹಕಾರಿ ಸಂಘದ ಅದ್ಯಕ್ಷ ಜಿ.ಆರ್ ಪ್ರಸಾದ್ ಮಾತನಾಡಿ ಕಾರ್ಯಕ್ರಮದಲ್ಲಿ ಸಾವಯವ ಮತ್ತು ಆಧುನಿಕ ಕೃಷಿ ಬಗ್ಗೆ ಮಾಹಿತಿ,ಕೃಷಿ ಉತ್ಪನ್ನ ಮತ್ತು ಉಪಕರಣ ಇತ್ಯಾದಿ ಮಳಿಗೆಗಳ ಮೂಲಕ ಪ್ರದರ್ಶನ, ಮಾರಾಟ, ಪ್ರಾತ್ಯಕ್ಷಿಕೆ ನೀಡುವುದಲ್ಲದೆ,ಕೃಷಿ ,ತೋಟಗಾರಿಕೆ, ಒಳನಾಡು ಮೀನುಗಾರಿಕೆ, ಪರ್ಯಾಯ ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರ ಸರಕಾರದ ಸವಲತ್ತು ಬಗ್ಗೆ ವಿವರಣೆ ನೀಡಲಾಗುವುದು ಎಂದರು.ಅಲ್ಲದೆ ಕೃಷಿ ಸಾದಕರನ್ನು ಗುರುತಿಸಲಾಗುವುದು ಎಂದರು, ಸಭೆಯಲ್ಲಿ ನಗರ ಪಂಚಾಯತ್ ಅದ್ಯಕ್ಷ ವಿನಯ ಕುಮಾರ್ ಕಂದಡ್ಕ,ಮೀನುಗಾರಿಕೆನಿಗಮದ ಜಿಲ್ಲಾದ್ಯಕ್ಷ ಎ ವಿ ತೀರ್ಥರಾಮ, ತಾಲೋಕು ಪಂಚಾಯತ್ ಇ.ಒ ಎನ್ ಭವಾನಿಶಂಕರ, ಕೃಷಿ ಮೇಳದ ಸಂಘಟಕ ವೀರಪ್ಪಗೌಡ ಮೊದಲಾದವರು ಉಪಸ್ಥಿತಿಯಿದ್ದರು, ಸಭೆಯಲ್ಲಿ ಕೃಷಿ ಮೇಳದ ಲಾಂಚನವನ್ನು ಸಚಿವ ಅಂಗಾರ ಅನಾವರಣಮಾಡಿದರು.



