
.


ಮಡಿಕೇರಿ ಏ.20 : ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಇಂದು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 22 ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅವರಲ್ಲಿ ಅಮೀನ್ ಮೋಹಿಸಿನ್ (ಎಸ್ಡಿಪಿಐ),ಮುತ್ತಪ್ಪ ಎನ್.ಎಂ.(ಜನತಾದಳ ಜಾತ್ಯಾತೀತ),ಕೆ.ಬಿ.ರಾಜು(ಆರ್ ಐ ಕರ್ನಾಟಕ), ಜಿ.ಜಿ.ಹೇಮಂತ್ ಕುಮಾರ್(ಪಕ್ಷೇತರ),
ಅಪ್ಪಚ್ಚುರಂಜನ್ ಎಂ.ಪಿ.(ಭಾರತೀಯ ಜನತಾ
ಪಾರ್ಟಿ), ಡಾ.ಮಂಥರ್ ಗೌಡ (ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ ಪಕ್ಷ),ಎಚ್.ಎಂ.ಸೋಮಪ್ಪ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ)(ಸಿಪಿಐ), ದಿವಿಲ್ ಕುಮಾರ್
ಎ.ಎ.(ಬಹುಜನ ಸಮಾಜ ಪಕ್ಷ), ಎಂ.ಖಲೀಲ್ (ಪಕ್ಷೇತರ), ರಶೀದ ಬೇಗಂ (ಇಂಡಿಯನ್ ಮೂವೆಮೆಂಟ್ ಪಾರ್ಟಿ), ಶ್ರೀನಿವಾಸ ರೈ ಬಿ.ಕೆ.(ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ), ಅಶ್ರಫ್ (ಪಕ್ಷೇತರ), ದರ್ಶನ್ ಶೌರಿ ಪಿ.ಕೆ.(ಪಕ್ಷೇತರ), ಬೋಪಣ್ಣ ಕೆ.ಪಿ.(ಆಮ್ ಆದ್ಮ ಪಾರ್ಟಿ), ಹರೀಶ್ ಆಚಾರ್ಯ (ಪಕ್ಷೇತರ),ಎಂ.ಮೊಹಮ್ಮದ್ ಹನೀಫ್(ಪಕ್ಷೇತರ),
ಸಜೀರ್ ಮಜೀದ್ ನೆಲಾಟ್ (ಕರ್ನಾಟಕ ರಾಷ್ಟ್ರ
ಸಮಿತಿ), ಉಸ್ಮಾನ್ ಕೆ.ಎ.(ಎಸ್ಡಿಪಿಐ),ಹಾಶಿಮ್ ಕೆ.ಎ.(ಪಕ್ಷೇತರ), ಸಿಂಧು ವೈ.ಎಂ. (ಪಕ್ಷೇತರ), ಪದ್ಮನಾಭ ಎ.ಎನ್.(ಜನ ಸಂಘ ಪಾರ್ಟಿ), ಶೃತಿ ಕೆ.ಪಿ.(ಪಕ್ಷೇತರ).
ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆ ಜಿ ಭೋಪಯ್ಯ (ಭಾರತೀಯ ಜನತಾ ಪಾರ್ಟಿ),ಎಂ.ಎ.ನಾಸೀರ್(ಪಕ್ಷೇತರ),
ಎ.ಎಸ್.ಪೊನ್ನಣ್ಣ (ರಾಷ್ಟ್ರೀಯ ಕಾಂಗ್ರೆಸ್ ಪಕ್ಷ),
ಮನ್ಸೂರ್ ಅಲಿ ಎಂ.ಎ.(ಜನತಾ ದಳ ಜಾತ್ಯಾತೀತ), ಸಿ.ಎಸ್.ರವೀಂದ್ರ (ಆಮ್ ಆದಿ ಪಕ್ಷ), ಕೆ.ಎಸ್.ಮನು
(ಸರ್ವೋದಯ ಕರ್ನಾಟಕ ಪಕ್ಷ), ದರ್ಶನ್ ಶೌರಿ ಪಿ.ಕೆ.
(ಪಕ್ಷೇತರ), ಮಸೂದ್ ಫೌಜ್ಜಾರ್(ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ), ಸಜು ವಿ.ಎ.(ಕರ್ನಾಟಕ ರಾಷ್ಟ್ರ ಸಮಿತಿ), ಎಚ್.ಪಿ.ಸರೋಜ(ಪಕ್ಷೇತರ).ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 12 ನಾಮಪತ್ರ ಸಲ್ಲಿಕೆಯಾಗಿದ್ದು, 10 ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಸಂಬಂಧಪಟ್ಟ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.