
ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ವರ್ಷಂ ಪ್ರತಿ ಯುಗಾದಿ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದ್ದು,ಸತತ ಮೂರನೇ ವರ್ಷವೂ ಕೂಡ ಶುಭದ ಆರ್ ಪ್ರಕಾಶ್ ರವರು ಭಕ್ತಿಗೀತೆ, ಜಾನಪದ ಗೀತೆ ಮತ್ತು ಶಾಸ್ತ್ರೀಯ ಸಂಗೀತವನ್ನು ಹಾಡಲು ತೆರಳಿರುವುದಾಗಿ ತಿಳಿದು ಬಂದಿದೆ
ಜೀ ಕನ್ನಡ ಲಿಟಲ್ ಚಾಂಪ್ ಸೀಸನ್ 16ರ ಖ್ಯಾತಿಯ ಶುಭದ ಆರ್ ಪ್ರಕಾಶ್ ರವರು ಸುಳ್ಯ ತಾಲೂಕು ಸೂರ್ತಿಲ ನಿವಾಸಿ ರವಿಪ್ರಕಾಶ್ ಸಿ ಪಿ ಮತ್ತು ಜಯಶ್ರೀ ಆರ್ ಪ್ರಕಾಶ್ ದಂಪತಿಯ ಪುತ್ರಿ ಪ್ರಸ್ತುತ ವಿವೇಕಾನಂದ ಕಾಲೇಜು ಪುತ್ತೂರು ಇದರ ಪ್ರಥಮ ಬಿ ಬಿ ಎ ವಿದ್ಯಾರ್ಥಿನಿ.


