
ಸುಳ್ಯ: ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟಿಗೆ ಪಿಕಪ್ ವಾಹನವೊಂದು ಗುದ್ದಿ, ಸ್ಕೂಟಿ ಚರಂಡಿಗೆ ಉರುಳಿಬಿದ್ದು ಪಿಕಪ್ ಚಾಲಕ ನಿಲ್ಲಿಸದೇ ಪರಾರಿಯಾದ ಘಟನೆಗೆ ಸಂಭಂದಿಸಿದಂತೆ ಪಿಕಪ್ ವಾಹನ ಮತ್ತು ಚಾಲಕನನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ, ಜು.3 ರಂದು ಸಂಜೆ ಸುಳ್ಯದ ವಿದ್ಯಾನಗರದಲ್ಲಿ ಅಜ್ಜಾವರ ಗ್ರಾಮದ ಶಿವರಾಮ ಎಂಬವರು ಸುಳ್ಯದ ಹಳೆಗೇಟು ಬಳಿಯ
ವಿದ್ಯಾನಗರದಲ್ಲಿ ರಸ್ತೆ ಬದಿ ಸ್ಕೂಟಿ ನಿಲ್ಲಿಸಿ ಅಂಗಡಿಗೆ ಹೋಗಿ ಮಾತನಾಡುತ್ತಿದ್ದರು. ಆಗ ಪೈಚಾರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಪಿಕಪ್ ವಾಹನವೊಂದು ಸೂಟಿಗೆ ಗುದ್ದಿದ ಪರಿಣಾಮ ಪಕ್ಕದ ಕಮರಿಗೆ ಉರುಳಿಬಿದ್ದಿತು ಪಿಕಪ್ ನಿಲ್ಲಿಸದೆ ಮುಂದಕ್ಕೆ ಹೋಯಿತು. ಪಿಕಪ್ ವಾಹನದಲ್ಲಿ ಶ್ರೀರಾಮ ಎಲೆಕ್ಟಿಕಲ್ಸ್ ಗುತ್ತಿಗಾರು ಎಂದು ಬರೆದಿದ್ದುದನ್ನು ಸ್ಥಳೀಯರು ನೋಡಿದ್ದರು. ಈ ಹಿನ್ನಲೆಯಲ್ಲಿ ಪೋಲೀಸರಿಗೆ ದೂರು
ದೂರು ನೀಡಲಾಯಿತು. ಅಪಘಾತ ನಡೆದು ಗೊತ್ತಾದ ಬಳಿಕವೂ ಪಿಕಪ್ ನಿಲ್ಲಿಸದೇ ಪರಾರಿಯಾದುದರಿಂದ ಸ್ಥಳೀಯರು ಆ ವಾಹನ ಹಿಂತಿರುಗಿ ಬರುವುದನ್ನು ಸ್ಕೂಟಿ ತೆಗೆಯದೇ ಕಾಯುತ್ತಿದ್ದರು. ಸ್ವಲ್ಪಹೊತ್ತಿನ ಬಳಿಕ ಎರಡು ವಿದ್ಯುತ್ ಕಂಬ ಹೇರಿಕೊಂಡು ಆ ಪಿಕಪ್ ವಾಹನ ಬಂದಿತು. ಆದರೆ ವಿದ್ಯಾನಗರದಲ್ಲಿ ನಿಲ್ಲದೇ ಪೈಚಾರಿನತ್ತ ದಾವಿಸಿತು. ವಿಷಯತಿಳಿದ ಪೋಲೀಸರು ಬೆನ್ನತ್ತಿ ಸೋಣಂಗೇರಿಯಲ್ಲಿ ಅಡ್ಡಗಟ್ಟಿ ಪಿಕಪ್ ನ್ನು ವಶಪಡಿಸಿಕೊಂಡರೆಂದು ತಿಳಿದು ಬಂದಿದೆ.




