ಕನಕಮಜಲು ಗ್ರಾಮದಲ್ಲಿ ಎರಡು ಕಡೆ ಕಳ್ಳತನದ ಘಟನೆ ನಡೆದಿದ್ದು, ಎರಡೂ ಘಟನೆ ತಡವಾಗಿ ಮನೆಯವರ ಅರಿವಿಗೆ ಬಂದಿದ್ದು ಪ್ರಕರಣ ದಾಖಲಾಗಿದೆ. ಕನಕಮಜಲು ಗ್ರಾಮದ ಸಣ್ಣಮೂಲೆ ಕೆ.ಮೂಸಾ. ಎಂಬವರ ಪುತ್ರ ಕೆ.ಮಹಮ್ಮದ್ ಹಸನ್ ಎಂಬವರ ಮನೆಯಲ್ಲಿ ಕಳವು ಕೃತ್ಯ ನಡೆದಿದೆ. ಮಹಮ್ಮದ್ ಹಸನ್ ಅವರು ಜೂ.17ರಂದು ತಮ್ಮ ಹೆಂಡತಿಯ ಚಿಕ್ಕಮ್ಮನ ಮನೆಯಾದ ಪುತ್ತೂರು ತಾಲೂಕಿನ ಪರ್ಪುಂಜ ಎಂಬಲ್ಲಿಗೆ ಸಂಸಾರದೊಂದಿಗೆ ವಾಸವಾಗಿದ್ದ ಬಾಡಿಗೆ ಮನೆಗೆ ಬೀಗ ಹಾಕಿ ತೆರಳಿದ್ದರು. ಜೂ.18ರಂದು ವಾಪಾಸ್ ಮನೆಗೆ ಬಂದಿದ್ದು, ಎಂದಿನಂತೆ ಕೆಲಸಕ್ಕೆ ಹೋಗಿದ್ದು ಜೂ.21ರಂದು ಹಣದ ಅವಶ್ಯಕತೆ ಇದ್ದುದರಿಂದ ತಮ್ಮ ಮನೆಯ ಗಾಡ್ರೇಜ್ ಕೀ ತಗೆದು ನೋಡಿದಾಗ ಅದರಲ್ಲಿದ್ದ 50000/- ಹಣ ಇಲ್ಲದೇ ಇದ್ದು, ನಂತರ ಅವರ ಹೆಂಡತಿಯ 30 ಗ್ರಾಂ ಚಿನ್ನದ ಸರ ಕಾಣೆಯಾಗಿತ್ತು. ಮನೆಮಂದಿ ಮನೆಯಲ್ಲಿಲ್ಲದೇ ಇದ್ದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶ ಮಾಡಿ ಗಾಡ್ರೇಜ್ ನಲ್ಲಿದ್ದ ನಗದು ಹಾಗೂ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾಗಿ ಎಂದು ಸುಳ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ


ಪಕ್ಕದ ಮನೆಯಲ್ಲಿ ಕಳ್ಳತನ ನಡೆದಿದೆ ಎಂಬ ಸುದ್ದಿ ತಿಳಿದು ತನ್ನ ಮನೆಯ ಗೋಡ್ರೇಜ್ ಪರಿಶೀಲನೆ ವೇಳೆ ತನ್ನ ಮಳೆಯಲ್ಲೂ ಚಿನ್ನಾಭರಣ ಕಳವು ನಡೆದಿರುವುದು ಬೆಳಕಿಗೆ ಬಂದಿರುವ ಘಟನೆ ಸುಳ್ಯ ತಾಲೂಕಿನ ಅಡ್ಕಾರಿನಲ್ಲಿ ನಡೆದಿದೆ.
ಇಲ್ಲಿನ ಅಬ್ದುಲ್ ರಜಾಕ್ ಎಂಬವರ ಮನೆಯಲ್ಲಿ ಕಳವು ಕೃತ್ಯ ನಡೆದಿದೆ. ಅಬ್ದುಲ್ ರಜಾಕ್ ಹಾಗೂ ಅವರ ಸಹೋದರ ಮಹಮ್ಮದ್ ಸಾದೀಕ್ ಅವರು ಪೈಚಾರ್ ನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಅಡ್ಕಾರ್ ಮಸೀದಿಯ ಬಳಿಯಲ್ಲಿರುವ ಕ್ವಾಟ್ರಸ್ ನಲ್ಲಿ ತಮ್ಮ ಸಂಸಾರದೊಂದಿಗೆ ಒಟ್ಟಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಜೂ.17ರಂದು ತಮ್ಮ ತಂದೆ ತಾಯಿ ಮನೆಯಾದ ಜಾಲ್ಸೂರು ಗ್ರಾಮದ ಪೈಚಾರ್ ಎಂಬಲ್ಲಿಗೆ ವಾಸವಾಗಿದ್ದ ಬಾಡಿಗೆ ಮನೆಗೆ ಬೀಗ ಹಾಕಿ ತೆರಳಿದ್ದು, ಜೂ.18ರಂದು ವಾಪಾಸ್ ಮನೆಗೆ ಬಂದಿದ್ದು, ಎಂದಿನಂತೆ ಕೆಲಸಕ್ಕೆ ಹೋಗಿರುತ್ತಾರೆ. ಜೂ.21ರಂದು ತಮ್ಮ ಬಾಡಿಗೆ ಮನೆಯ ಪಕ್ಕದ ಹಸನ್ ಎಂಬವರ ಮನೆಯಲ್ಲಿ ಕಳ್ಳತನವಾದ ಸುದ್ದಿ ಕೇಳಿ ತಮ್ಮ ಮನೆಯಲ್ಲಿದ್ದ ಗಾಡ್ರೇಜ್ ಕೀ ತಗೆದು ನೋಡಿದಾಗ ಅದರಲ್ಲಿದ್ದ ರಜಾಕ್ ಅವರ ಹೆಂಡತಿ ಉಪಯೋಗಿಸುತ್ತಿದ್ದ 6 ಗ್ರಾಂ ತೂಕದ ಚಿನ್ನದ ಕಿವಿ ಓಲೆ, ತಮ್ಮನ ಹೆಂಡತಿ ಉಪಯೋಗಿಸುತ್ತಿದ್ದ 6 ಗ್ರಾಂ ತೂಕದ ಚಿನ್ನದ ಕಿವಿ ಓಲೆ ಹಾಗೂ 6 ಗ್ರಾಂ ತೂಕದ ವಿವಿಧ ನಮೂನೆಯ ಚಿನ್ನದ ಉಂಗುರಗಳು – 3 ಮತ್ತು ತಮ್ಮನ ಹೆಂಡತಿ ಉಪಯೋಗಿಸುತ್ತಿದ್ದ 5 ಗ್ರಾಂ ತೂಕದ ಉಂಗುರಗಳ ಚಿನ್ನದ ಸೆಟ್ ಗಳನ್ನು ಮನೆಮಂದಿ ಮನೆಯಲ್ಲಿಲ್ಲದೇ ಇದ್ದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶ ಮಾಡಿ ಕವಾಟಿನಲ್ಲಿದ್ದ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.