ಸುಳ್ಯ ಕಾಯರ್ತೋಡಿ ವಿಷ್ಣು ನಗರದ ಸೂರ್ತಿಲ ಶ್ರೀ ರಕ್ತೇಶ್ವರಿ, ಗುಳಿಗ ಮತ್ತು ನಾಗದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ.

ಸುಳ್ಯ ಕಾಯರ್ತೋಡಿ ವಿಷ್ಣು ನಗರದ ಸೂರ್ತಿಲ ಶ್ರೀ ರಕ್ತೇಶ್ವರಿ, ಗುಳಿಗ ಮತ್ತು ನಾಗದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ.

ಹರಿಯುವ ನದಿ ಧರ್ಮ ಜಾತಿಗಳನ್ನು ನೋಡಿ ಹರಿಯುವುದಿಲ್ಲ , ಪ್ರಕೃತಿಯ ಈ ಪಾಠ ಅರಿತುಕೊಂಡು ಇಂದು ಧರ್ಮ , ಧರ್ಮಗಳ ನಡವಿನ ತಿಕ್ಕಾಟಕ್ಕೆ ಅಂತ್ಯಕಾಣುವಂತಾಗಲಿ ,ಹಿಂದೂ ಧರ್ಮ ಪ್ರತೀ ಧರ್ಮದವರನ್ನು ಆಧರದಿಂದ ಕಾಣುವ ಧರ್ಮ, ಈ ಪ್ರಕೃತಿಯಲ್ಲಿ ದೇವರನ್ನು ಕಾಣುವ ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ಪಕ್ರತಿಯ ನಡುವಿನ ಸಮ್ಮಿಳಿತವನ್ನು ಕಾಣಬಹುದಾಗಿದೆ, ಮನುಷ್ಯತ್ವ ಜೊತೆ ಮಾನವೀಯತೆ ಇದ್ದಾಗ ಮಾತ್ರ ಬದುಕು ಪ್ರಸನ್ನವಾಗಿರಲು ಸಾಧ್ಯ,ಯೋಚನೆ ಯೋಜನೆಯಾಗಿ ಪರಿವರ್ತನೆಯಾಗಲು ಉತ್ತಮ ನಾಯಕತ್ವ ಗುಣ ಬೇಕು ಅದು ಈ ಸೂರ್ತಿಲದಲ್ಲಿ ದೊರಕಿದೆ ಎಂದು ಗ್ರೀನ್ ಹೀರೋ ಇಂಡಿಯಾ ಮತ್ತು ಗುಜರಾತ್ ಉದ್ಯಮಿ ಡಾ| ಆರ್. ಕೆ. ನಾಯರ್ ಹೇಳಿದ್ದಾರೆ .

ಅವರು ಮೇ 22 ರಂದು
ಸುಳ್ಯ ಕಾಯರ್ತೋಡಿ ವಿಷ್ಣು ನಗರದ ಸೂರ್ತಿಲ ನೂತನವಾಗಿ ನಿರ್ಮಾಣಗೊಂಡ ಶ್ರೀ ರಕ್ತೇಶ್ವರಿ, ಗುಳಿಗ ಮತ್ತು ನಾಗದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು, ವೇದ ಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ರಕ್ತೇಶ್ವರಿ, ಗುಳಿಗ ಮತ್ತು ನಾಗದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಮೇ.22 ರಂದು ನಡೆಯಿತು. ಬೆಳಿಗ್ಗೆ 6ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, 7.44 ರ ಮಿಥುನ ಲಗ್ನ ಮಿಥುನ ಲಗ್ನದ ಸುಮುಹೂರ್ತದಲ್ಲಿ ಪ್ರತಿಷ್ಠೆ – ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ, ಪ್ರಸಾದ ವಿತರಣೆ ನಡೆಯಿತು.ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಡಿ ವಿ ಲೀಲಾಧರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು,

ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ್ ತಂತ್ರಿವರ್ಯರು ಆಶೀರ್ವಚನ ನೀಡಿದರು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ,ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಸುಳ್ಯ ನಗರ ಪಂಚಾಯತ್ ಮಾಜೀ ಸದಸ್ಯೆ ಪ್ರವಿತಾ ಪ್ರಶಾಂತ್, ಪದ್ಮಶ್ರೀ ಪುರಸ್ಕೃತ ಗಿರೀಶ್ ಬಾರದ್ವಾಜ್ ಉಪಸ್ಥಿತರಿದ್ದರು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡಿದ ಉದ್ಯಮಿ ಆರ್.ಕೆ.ನಾಯರ್, ಜಯರಾಮ ಸೂರ್ತಿಲ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಸಮಿತಿ ಪದಾಧಿಕಾರಿಗಳಾದ ನಾರಾಯಣ ಕೇಕಡ್ಕ, ಕೋಶಾಧಿಕಾರಿ ಗಣೇಶ್ ಆಳ್ವ, ಕೃಷ್ಣ ಬೆಟ್ಟ, ಶಶಿಧರ ಶೆಟ್ಟಿ, ಕೃಷ್ಣ ಬೆಟ್ಟ ಮೊದಲಾದವರು ಉಪಸ್ಥಿತರಿದ್ದರು.ಬೂಡು ರಾಧಾಕೃಷ್ಣ ರೈ, ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಮೇ.21 ರಂದು ಹಸಿರುವಾಣಿ ಸಮರ್ಪಣೆಯ ಬಳಿಕಸಂಜೆ 3.30ರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಶ್ರೀ ರಕೇಶ್ವರಿ ಭಜನಾ ಮಂಡಳಿ ಕಾಯರ್ತೋಡಿ- ಸೂರ್ತಿಲ, ಸುಳ್ಯ ಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ, ಅಮೈ ಮಡಿಯಾ‌ರು
ದೀಪಾಂಜಲಿ ಮಹಿಳಾ ಮಂಡಳಿ ಶಾಂತಿನಗರ, ಶ್ರೀ ಸದಾಶಿವ ಭಜನಾ ಸಂಘ ಆಲೆಟ್ಟಿ ಶ್ರೀ ಮಹಾವಿಷ್ಣು ಭಜನಾ ಸಂಘ ಕಾಯರ್ತೋಡಿ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ತಂತ್ರಿಗಳ ಆಗಮನವಾಗಿ ಪುಣ್ಯಾವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ,
ರಾಕ್ಕೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.

ರಾಜ್ಯ