ರಾಜ್ಯದಲ್ಲಿ ನಮ್ಮದೇ ಸರಕಾರ ಬರಲಿದೆ: ಸುಳ್ಯದಲ್ಲಿ ಜನ ಬದಲಾವಣೆ ಬಯಸಿರುವುದು ಸ್ಪಷ್ಟ ವಾಗಿದೆ: ಗೆಲುವು ನಿಶ್ಚಿತ: ಜಿ ಕೃಷ್ಣಪ್ಪ.

ರಾಜ್ಯದಲ್ಲಿ ನಮ್ಮದೇ ಸರಕಾರ ಬರಲಿದೆ: ಸುಳ್ಯದಲ್ಲಿ ಜನ ಬದಲಾವಣೆ ಬಯಸಿರುವುದು ಸ್ಪಷ್ಟ ವಾಗಿದೆ: ಗೆಲುವು ನಿಶ್ಚಿತ: ಜಿ ಕೃಷ್ಣಪ್ಪ.

ರಾಜ್ಯದಲ್ಲಿ ಕಾಂಗ್ರೇಸ್ ನಿಚ್ಛಳ ಬಹುಮತ ಪಡೆದು ಮುಂದಿನ ಸರಕಾರದಲ್ಲಿ ನಮ್ಮ ಪಕ್ಷ ಆಡಳಿತ ನಡೆಸಲಿದೆ.ಈ ಸರಕಾರದಲ್ಲಿ ಸುಳ್ಯಕ್ಷೇತ್ರದಿಂದ ಮತದಾರರು ತನ್ನನ್ನು ಬೆಂಬಲಿಸಿದರೆ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸುಳ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು,
ಸುಳ್ಯ ಕೃಷಿ ಪ್ರಧಾನವಾದ ಪ್ರದೇಶ. ಇಲ್ಲಿ ಅಡಿಕೆ ಕೃಷಿ
ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಅಡಿಕೆ ಬೆಳೆಗೆ ಎಲೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದಿಂದದ ಇಲ್ಲಿಯ ರೈತರು ಕಂಗಾಲಾಗಿದ್ದಾರೆ.ಇದಕ್ಕಾಗಿ
ಪರಿಹಾರಕ್ಕಾಗಿ 100 ಕೋಟಿ ರೋಗಳನ್ನು ಮುಂದೆ ನಮ್ಮ ಸರಕಾರದಲ್ಲಿ ರೈತರಿಗೆ ಸಹಾಯಧನ ನೀಡುವ ಯೋಜನೆ ಹಾಕಿಕೊಂಡಿದ್ದೇವೆ, ಮತ್ತುಇದರ ಸಂಶೋಧನೆಗೆ 50 ಕೋಟಿ ವಿನಿಯೋಗಿಸಿ ಶಾಶ್ವತವಾಗಿ ರೈತರ ಸಮಸ್ಯೆ ನೀಗಿಸಲು ತೀರ್ಮಾನಕ್ಕೇ ಈಗಾಗಲೆ ಬಂದಿದ್ದೇವೆ ಎಂದು ಸುಳ್ಯ ವಿಧಾನಸಭಾ ಕಾಂಗ್ರೇಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಹೇಳಿದ್ದಾರೆ. ಅವರು ನಾಮಪತ್ರ ಸಲ್ಲಿಸಿದ ಬಳಿಕ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಸಂದರ್ಭ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಳ್ಯದಲ್ಲಿ ರಬ್ಬರ್ ಬಹು ಪ್ರದೇಶದ ಬೆಳೆಯಾಗಿದೆ ಇಲ್ಲಿ ರಬ್ಬರ್ ಗೂ ಮಾರುಕಟ್ಟೆ ಸ್ಥಿರತೆ ಇಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸುಳ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಅಗತ್ಯ ಇದೆ. ಆ ನಿಟ್ಟಿನಲ್ಲಿ
ನಾನು ಮೊದಲ ಆದ್ಯತೆ ನೀಡುತ್ತೇನೆ. ಸುಳ್ಯದ
ವಿದ್ಯಾವಂತ ಯುವಕರು ಊರು ಬಿಟ್ಟು ದೂರದ ಊರಿನಲ್ಲಿ ದುಡಿಯುತ್ತಿದ್ದಾರೆ. ಇಲ್ಲೇ ಕೈಗಾರಿಕೆಗಳು ಬಂದರೆಊರಿನಲ್ಲಿ ಕೆಲಸದಲ್ಲಿ ಇರಬಹುದು. ತಮ್ಮ ತಂದೆ ತಾಯಿ ಜೊತೆ ಇದ್ದು ಕೆಲಸ ನಿಭಾಯಿಸಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಸುಳ್ಯದ ಬಹುಬೇಡಿಕೆಯ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಇನ್ನೂ ಆಗಿಲ್ಲ. ಅದನ್ನು ಮಾಡಿಸಿ ಇಲ್ಲಿನ ವಿದ್ಯುತ್ ಸಮಸ್ಯೆ ನಿವಾರಿಸುವೆ ಎಂದ ಅವರು,ತಾಲೂಕಿನ ಹಲವು ರಸ್ತೆಗಳು ಅಭಿವೃದ್ಧಿ ಆಗಬೇಕಾಗಿದೆ.
ಆ ನಿಟ್ಟಿನಲ್ಲಿಯೂ ಪ್ರಯತ್ನ ಮಾಡಲಾಗುವುದು.
ಕೊರೊನಾ ಸಂದರ್ಭದ ಬಳಿಕ ಕ್ಷೇತ್ರದಲ್ಲಿ ಸಾಕಷ್ಟು ಕಡೆ
ಓಡಾಡಿದ್ದೇನೆ. ಜನರ ಸಮಸ್ಯೆಯನ್ನು ಅರ್ಥೈಸಿ ಕೊಂಡಿದ್ದೇನೆ ಇದೀಗ ಕ್ಷೇತ್ರ ಭೇಟಿಗೆ ಹೋದಾಗ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಅವರು ಹೇಳಿದರು.
ಪಕ್ಷದ ಆಂತರಿಕ ಬೆಳೆವಣಿಗೆಯ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದ್ದಾಗ ಉತ್ತರಿಸಿದ ಅವರು ಟಿಕೆಟ್ ಸಿಗದಿದ್ದಾಗ ಒಂದಷ್ಟು ನೋವುಗಳು ಆಗವುದು ಸಹಜ. ಹಿಂದೆ ನಾನು ಜಿಗಣಿ ಕ್ಷೇತ್ರದಲ್ಲಿ ಜಿ.ಪಂ.ಸದಸ್ಯನಾಗಿ ಆಯ್ಕೆಯಾಗಿದ್ದೆ. ಬಿ ಫಾರಂ ಸಿಕ್ಕಿತ್ತು. ಕೊನೆಯ ಕ್ಷಣದಲ್ಲಿ ತಪ್ಪಿತ್ತು ಕಾರಣ ನಾನು ಹಿರಿಯರ ಮಾತನ್ನು ಕೇಳಿದ್ದೆ. ನಾನು ನಂದ ಕುಮಾರ್ ಹಾಗೂಅವರ ತಂಡದವರ ಜತೆ ಸ್ವತಹ ಮಾತನಾಡುತ್ತೇನೆ. ನಮಗೆ ಸಹಕಾರ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಜನ ಒಪ್ಪಿಕೊಂಡಿದ್ದಾರೆ: ಭವ್ಯ ನರಸಿಂಹಮೂರ್ತಿ

ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ಮಾತನಾಡಿ
ಈ ಚುನಾವಣೆಯಲ್ಲಿ ನಾಲ್ಕು ಗ್ಯಾರಂಟಿಗಳನ್ನು ಇಟ್ಟುಕೊಂಡು ಜನರ ಮುಂದೆ ಕಾಂಗ್ರೆಸ್ ಪಕ್ಷ ಹೋಗುತ್ತದೆ.ಈಗಾಗಲೇ ಜನರು ನಮ್ಮನ್ನು ಒಪ್ಪಿಕೊಂಡಿದ್ದಾರೆ.ಈಗೀರುವ ಬ್ರಷ್ಟಾಚಾರಸರಕಾರದ ಆಡಳಿತ ನೋಡಿದ ಜನ ಆಡಳಿತ ವಿರೋದಿ ಅಭಿಪ್ರಾಯ ಹೊಂದಿದ್ದಾರೆ, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಬಿಫಾರಂ ನೀಡಿದ ಮೇಲೆ ಎಲ್ಲರೂ ಕೂಡಾ ಪಕ್ಷಕ್ಕೆ ನಿಷ್ಠರಾಗಿರುತ್ತಾರೆ: ಭರತ್ ಮುಂಡೋಡಿ.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ
ಮಾತನಾಡಿ, ಇವತ್ತು ನಂದಕುಮಾರ್
ಅಭಿಮಾನಿಗಳೆಂದು ಹೇಳಿಕೊಂಡವರು ನಮ್ಮೊಡನೆ ಇದ್ದಾರೆ ,ಬಿ ಫಾರಂ ಸಿಕ್ಕುವ ಮೊದಲು ವೀರೊದ ಮಾಡುವುದು ಸಹಜ ಒಮ್ಮೆ ಬಿಫಾರಂ ನೀಡಿದ ಮೇಲೆ ಎಲ್ಲರೂ ಕೂಡಾ ಪಕ್ಷಕ್ಕೆ ನಿಷ್ಠರಾಗಿರುತ್ತಾರೆ. ಆದ್ದರಿಂದ ಇವತ್ತಿಗೆ ನಮ್ಮೊಳಗಿದ್ದ ಗೊಂದಲ ಪರಿಹಾರವಾಗಿ ಅವರೆಲ್ಲಾ ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

30 ವರ್ಷಗಳಿಂದ ಇಲ್ಲಿ ಸ್ಯಾಂಕ್ಷನ್ ಆಗಿರುವ ಕೆಲಸವನ್ನು ಮಾಡದ ಬಿಜೆಪಿಯಿಂದ ಜನ ಏನೂ ನಿರೀಕ್ಷಸಲು ಸಧ್ಯವಿಲ್ಲ: ಅಡ್ಪಂಗಾಯ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯರು ಮಾತನಾಡಿ ಬಿಜೆಪಿ ಯವರಾದ ಡಿ.ವಿ.ಸದಾನಂದ ಗೌಡರು, ನಳಿನ್ ಕಟೀಲ್, ಶೋಭಾ ಕರಂದ್ಲಾಜೆ ಎಲ್ಲರೂ ಸಂಸದರು. ಇಲ್ಲಿ‌ಅಂಗಾರರು 30 ವರ್ಷದಿಂದ ಬಿಜೆಪಿ ಶಾಸಕ, ಆಡಳಿತವೂ ಅವರ ಕೈಯಲ್ಲೇ ಇತ್ತು. ಆದರೆ 30 ವರ್ಷಗಳಿಂದ ಇಲ್ಲಿ ಸ್ಯಾಂಕ್ಷನ್ ಆಗಿರುವ ಕೆಲಸವನ್ನು ಅವರಿಂದ ಇನ್ನೂ ಮಾಡಲು ಆಗಿಲ್ಲ. ವಿದ್ಯುತ್ ಸಮಸ್ಯೆ ಮೂಲಭೂತ ಸೌಕರ್ಯ ಒದಗಿಸಲು ಆಗದ ಅವರಿಂದ ಜನ ಏನು ನಿರೀಕ್ಷೆ ಮಾಡಲು ಸಾದ್ಯ ಕ್ಷೇತ್ರದಲ್ಲಿ ಕಾಂಗ್ರೆಸ್
ಅಭ್ಯರ್ಥಿ ಗೆಲ್ಲುವುದು ಶತ ಸಿದ್ಧ ಎಂದು ಹೇಳಿದರು

ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ: ಪಿ ಸಿ ಜಯರಾಮ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು
ಮಾತನಾಡಿ ಸುಳ್ಯ ಕ್ಷೇತ್ರದಲ್ಲಿ ಜನ ಬದಲಾವಣೆ
ಬಯಸಿದ್ದಾರೆ ಎನ್ನುವುದಕ್ಕೆ ಇಂದಿನ ಕಾಂಗ್ರೆಸ್
ಮೆರವಣಿಗೆಯೇ ಸಾಕ್ಷಿ. ನಾವೆಲ್ಲರೂ ಸಂಘಟಿತರಾಗಿ
ಮುಂದೆ ಹೋಗುತ್ತೇವೆ. ಈ ಬಾರಿ ಕಾಂಗ್ರೆಸ್ ಗೆದ್ದೆ
ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆ.ಪಿ.ಸಿ.ಸಿ. ವಕ್ತಾರ ಟಿ.ಎಂ. ಶಹೀದ್ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಂಜಿ ಎನ್.ಎಸ್.ಯು.ಐ. ಅಧ್ಯಕ್ಷ ಕೀರ್ತನ್
ಕೊಡಪಾಲ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ
ಕೋಲ್ಚಾರ್ ಮೊದಲಾದವರು ಇದ್ದರು.

ರಾಜ್ಯ