
ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯಲ್ಲಿ ಎ.1 ರಿಂದ ಎ. 10 ರವರೆಗೆ ವಿಭಿನ್ನ , ವಿಶಿಷ್ಟ ಕಾರ್ಯ ಚಟುವಟಿಕೆಗಳಿಂದ ಕೂಡಿದ ಬೇಸಿಗೆ ಶಿಬಿರವು ನಡೆಯಿತು.ಇದರ ಸಮಾರೋಪ ಸಮಾರಂಭವು ಎ.10 ರಂದು ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿ ಯುವ ಉದ್ಯಮಿ ಡಾ. ಶ್ವೇತಾ ಮಡಪ್ಪಾಡಿ ಅವರು ಮಾತನಾಡಿ – ” ಮಕ್ಕಳಿಗೆ ಪೋಷಕರ ಪ್ರೋತ್ಸಾಹ ಸದಾ ಇರಬೇಕು.ಮಕ್ಕಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಬೆಂಬಲ ನೀಡಬೇಕು.ಅದಕ್ಕೆ ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ .ಮಕ್ಜಳ ವ್ಯಕ್ತಿತ್ವ ಬೇಸಿಗೆ ಶಿಬಿರದಲ್ಲಿ ಕಟ್ಟಿಕೊಳ್ಳುತ್ತದೆ.” ಎಂದರು.



ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಸಂಪನ್ಮೂಲ ವ್ಯಕ್ತಿ ಶ್ರೀಯುತ ನವೀನ್ ಸಾಣೆಹಳ್ಳಿ ಇವರು ಮಾತನಾಡಿ ” ಶಿಬಿರಾರ್ಥಿಗಳು ಭವಿಷ್ಯದಲ್ಲಿ ನಟರಾಗಬಹುದು, ನಿರ್ದೇಶಕರಾಗಬಹುದು ಇಲ್ಲವಾದಲ್ಲಿ ಉತ್ತಮ ಪ್ರೇಕ್ಷಕರಾದರೂ ಅಂತಹ ವ್ಯಕ್ತಿತ್ವ ಸಮಾಜಕ್ಕೆ ಒಂದು ಕೊಡುಗೆ “ಎಂದು ನುಡಿದರು.

ಶಾಲಾ ಪ್ರಾಂಶುಪಾಲರು ಮಾತನಾಡಿ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಶ್ರೀ ಎಂ.ಪಿ.ಉಮೇಶ್ ಅವರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಶ್ರೀಮತಿ ಹಿತಶ್ರೀ ಸರ್ವರನ್ನೂ ಸ್ವಾಗತಿಸಿ , ಸಹ ಶಿಕ್ಷಕಿ ಶ್ರೀಮತಿ ಸುಧಾ ವಂದಿಸಿದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಶ್ರೀಮತಿ ರೇಶ್ಮಾ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿಬಿರಾರ್ಥಿಗಳು ಜನಹಿತಗೀತೆ, ರಂಗಗೀತೆ, ಪರಿಸರ ಗೀತೆಗಳನ್ನು ಹಾಡಿದರು.ಜನಪದ ನೃತ್ಯಗಳು ಹಾಗೂ ನಾಟಕ’ ಮೃಗ ಮತ್ತು ಸುಂದರಿ’ ಇವುಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು.
ಶಿಬಿರದಲ್ಲಿ ತಯಾರಿಸಿದ ಗೂಡುದೀಪ, ಆವೆಮಣ್ಣಿನ ಆಕೃತಿ ರಚನೆ, ತಯಾರಿಸಿದ ಸಾಬೂನಿನ ಪ್ರದರ್ಶನ,
ಮಣ್ಣಿನ ಮಡಕೆ ಪ್ರದರ್ಶನ, ಡೆಕೋಪಾಜ್ ಮುಂತಾದ ಕೌಶಲ್ಯಗಳು ನೋಡುಗರ ಮನಸೆಳೆಯಿತು.