
ನೂತನ ಲಿಕ್ವಿಡ್ ಫಿಲ್ಲಿಂಗ್ ಅಕ್ಸಿಜನ್ ಪ್ಲಾಂಟ್ ರಚನೆಗೆ ಯೋಜನೆ.



ಸುಳ್ಯ ತಾಲೂಕು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯು ಮಾ19 ರಂದು ಮೀನುಗಾರಿಕೆ -ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರ ಅಧ್ಯಕ್ಷತೆಯಲ್ಲಿ ಪಟ್ಟಣದ ಆಸ್ಪತ್ರೆಯ ಕಛೇರಿಯಲ್ಲಿ ನಡೆಯಿತು.
ಆಸ್ಪತ್ರೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆಸೂಚಿಸಿದರು. ಸಭೆಯಲ್ಲಿ ಆಸ್ಪತ್ರೆಗೆ ಹೊಸದಾಗಿ ಲಿಕ್ವಿಡ್ ಫಿಲ್ಲಿಂಗ್ ಆಕ್ಸಿಜನ್ ಪ್ಲಾಂಟ್ ರಚಿಸುವ ಯೋಜನೆಗೆ ಹಳೆಯ ವಸತಿ ಗೃಹವನ್ನು ತೆರವು ಮಾಡಿ ಅಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸುವುದು ಮತ್ತು ಈಗಿರುವ ಕ್ಯಾಂಟೀನ್ ಸ್ಥಳ ಬದಲಾಯಿಸಿ ವಾಹನ ಪಾರ್ಕಿಂಗ್ ಜಾಗ ಮತ್ತಷ್ಟು ಅಗಲಗೊಳಿಸುವ ಯೋಜನೆಗೆ ಬರಲಾಯಿತು.
ಸಭೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ಸಮಿತಿಯ ಸದಸ್ಯರಾದ ಡಾ.ಮನೋಜ್,ಸುಬ್ರಹ್ಮಣ್ಯ ಕೊಡಿಯಾಲಬೈಲು, ಕೇಶವ ಮಾಸ್ಟರ್,ಗಿರೀಶ್ ಕಲ್ಲಗದ್ದೆ,ಸುನಿಲ್ ಕೇರ್ಪಳ, ಸುನಿತಾ ಮೊಂತೆರೋ,ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ, ಮೊದಲಾದವರು ಉಪಸ್ಥಿತರಿದ್ದರು.
