ಪುತ್ತೂರಿನಲ್ಲಿ ಸಹೋದರರ ನಡುವಿನ ಜಾಗ ವಿವಾಧ ಪರಿಹರಿಸಲು ಹೋದ ನನ್ನ ಮೇಲೆ ಮಾಡಿರುವ ಆಪಾದನೆ ಮತ್ತು ವೆಬ್ ನ್ಯೂಸ್ ಗಳಲ್ಲಿ ಬಿತ್ತರವಾದ ಸುದ್ದಿ, ಸತ್ಯಕ್ಕೆ ದೂರವಾದುದು: ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಸುಂದರ ಪಾಠಾಜೆ ಅಸಮದಾನ.

ಪುತ್ತೂರಿನಲ್ಲಿ ಸಹೋದರರ ನಡುವಿನ ಜಾಗ ವಿವಾಧ ಪರಿಹರಿಸಲು ಹೋದ ನನ್ನ ಮೇಲೆ ಮಾಡಿರುವ ಆಪಾದನೆ ಮತ್ತು ವೆಬ್ ನ್ಯೂಸ್ ಗಳಲ್ಲಿ ಬಿತ್ತರವಾದ ಸುದ್ದಿ, ಸತ್ಯಕ್ಕೆ ದೂರವಾದುದು: ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಸುಂದರ ಪಾಠಾಜೆ ಅಸಮದಾನ.

ಪುತ್ತೂರಿನ ಕೋಡಿಂಬಾಡಿ ಗ್ರಾಮದ ಕಜೆ ಎಂಬ ಸ್ಥಳದಲ್ಲಿ ನಿವಾಸಿಯಾದ ಚೋಮು ಎಂಬವರಿಗೂ ಮತ್ತು,ಗಿರಿಯಪ್ಪರಿಗೂ ಜಾಗದ ವಿವಾದವಿದ್ದು, ಚೋಮ ಎಂಬವರ ೧.೦೫ ಎಕ್ರೆ ಜಾಗ ದರ್ಖಾಸ್ತು ಆಸ್ತಿಯಾಗಿದ್ದು, ಆರ ಟಿ ಸಿ ಹೊಂದಿದ್ದು, ಇದೇ ಜಾಗದಲ್ಲಿ ಗಿರಿಯಪ್ಪರಿಗೂ 94. ಸಿ ಅಡಿ ೫ ಸೆಂಟ್ಸ್ ಜಾಗ ರೆಕಾರ್ಡ್ ಆಗಿತ್ತು ಮತ್ತು ಚೋಮ ಎಂಬವರ ಹೆಸರಿನಲ್ಲಿದ್ದ ಜಾಗವನ್ನು ಅನುಭವಿಸಲು ಅವರ ಸಹೋದರ ಬಿಡದ ಹಿನ್ನಲೆಯಲ್ಲಿ ಚೋಮ ಎಂಬವರು ನಮ್ಮ ಅಂಬೇಡ್ಕರ್ ಸಮಿತಿಗೆ ಮನವಿ ಮಾಡಿದ್ದರು, ಈ ಹಿನ್ನಲೆಯಲ್ಲಿ ನಾವು ಅಲ್ಲಿಯ ಸ್ಥಳಕ್ಕೆ ಹೋಗಿ ಚೋಮು ಎಂಬವರ ಜಾಗದ ಗಡಿ ಗುರುತು ಮಾಡಲು ಸಿದ್ದ ಪಡಿಸಿದಾಗ ಗಿರಿಯಪ್ಪ ರವರು ಮತ್ತು ಅವರ ಮನೆಯವರು ಚೋಮ ಎಂಬವರ ಮಗ ಮತ್ತು ಮಗಳ ಮೇಲೆ ಹಲ್ಲೆ ಮಾಡಲು ಹೋದಾಗ ನಾನು ತಡೆಯಲು ಹೋಗಿದ್ದೆ ಮತ್ತು ಅವರನ್ನು ತಳ್ಳಿದ್ದೆ, ಈ ಸಂದರ್ಭದಲ್ಲಿ ಅವರಲೊಬ್ಬರು ನನ್ನ ಷರ್ಟ್ ಹಿಡಿದು ಷರ್ಟ್ ಹರಿದು ಹೋಗಿತ್ತು ಇದೇ ಪೋಟೊ ಬಳಸಿ, ವೆಬ್ ನ್ಯೂಸ್ಗಳಲ್ಲಿ ನ್ನನ್ನ ಮೇಲೆ ಹಲ್ಲೆಯಾಗಿದೆ, ಪೆಟ್ಟು ತಿಂದು ಓಡಿ ಹೋದ, ಜೈಲಿಗೆ ಹೋಗಿದ್ದಾನೆ, ಹೆಣ್ಣಮಕ್ಕಳು ಮೈ ಮುಟ್ಟಿದ್ದಾನೆ ಎಂಬ ಕಪೊಕಲ್ಪಿತ ಸುಳ್ಳು ವರದಿಯನ್ನು ಜಾಲತಾಣದಲ್ಲಿ ಬಿತ್ತರ ಮಾಡಿದ್ದಾರೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯ ಅದ್ಯಕ್ಷ ಸುಂದರ ಪಾಟಾಜೆ ಅಸಮದಾನ ವ್ಯಕ್ತ ಪಡಿಸಿದ್ದಾರೆ.

ಸುಳ್ಯದಲ್ಲಿ ಪತ್ರಿಕಾ ಗೋಸ್ಟಿ ನಡೆಸಿದ ಅವರು, ಇಲ್ಲದ ಸುದ್ದಿಯನ್ನು ಪ್ರಕಟಿಸಿದ ಜಾಲತಾಣದ ವಿರುದ್ದ ಕಾನೂನು ಮೊರೆ ಹೋಗುತ್ತೇನೆ, ಎಂದು ಹೇಳಿದರು ,ದಾರಿ ಯಲ್ಲಿ ಹೋಗುವವರನ್ನು ಜನ ತಂದಿದ್ದರು ಎಂದಿದ್ದಾರೆ, ಕಾನೂನು ಪ್ರಕಾರ ಕೆಲಸ ಮಾಡುತ್ತಿರುವ ಪೋಲಿಸರ ಮೇಲು ಅಪವಾದ ಮಾಡಿದ್ದಾರೆ, ಈಗಾಗಲೆ ನೂರಾರು ಪ್ರಕರಣವನ್ನು ನ್ಯಾಯವಾಗಿ ಇತ್ಯರ್ಥ ಪಡಿಸಿದ್ದೇನೆ,ಈ ಅಪ ಪ್ರಚಾರ ಮಾಡುವವರು, ಮತ್ತು ನಾನು ಹೆಣ್ಣು ಮಕ್ಕಳ ಮೇಲೆ ಕೈ ಹಾಕಿದ್ದೇನೆ ಎನ್ನುವವರು ಕಾನತ್ತೂರು ಕ್ಷೇತ್ರಕ್ಕೆ ಸತ್ಯಪ್ರಮಾಣಕ್ಕೆ ಬರಲಿ ಎಂದು ಸವಾಲೆಸೆದರು, ಪತ್ರಿಕಾಗೋಸ್ಟಿಯಲ್ಲಿ ಅಂಬೇಡ್ಕರ್ ಸಮಿತಿ ಸಂಚಾಲಕ ಪರಮೇಶ್ವರ ಕೆಮ್ಮಿಂಜೆ,ಚೊಮು, ರೇವತಿ ,ಪ್ರೇಮವತಿ, ಶೇಷಪ್ಪ , ರವಿರಾಜ್ ಮೊದಲಾದವರಿದ್ದರು,

ರಾಜ್ಯ