ಅಜ್ಜಾವರದ ಮೇನಾಲ ಮಸೀದಿ ಜಾಗದಲ್ಲಿ ಶೌಚಾಲಯ ಗುಂಡಿಯನ್ನೇ ಅಂಡರ್ ಗ್ರೌಂಡ್ ಕಟ್ಟಡ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಜಾಲತಾಣದ ವಿರುದ್ದ್ ಮಸೀದಿ ಕಮಿಟಿ ಅಸಮದಾನ.

ಅಜ್ಜಾವರದ ಮೇನಾಲ ಮಸೀದಿ ಜಾಗದಲ್ಲಿ ಶೌಚಾಲಯ ಗುಂಡಿಯನ್ನೇ ಅಂಡರ್ ಗ್ರೌಂಡ್ ಕಟ್ಟಡ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಜಾಲತಾಣದ ವಿರುದ್ದ್ ಮಸೀದಿ ಕಮಿಟಿ ಅಸಮದಾನ.

ಅಜ್ಜಾವರ ಗ್ರಾಮದ ಮೇನಾಲ ಮಸೀದಿಯಲ್ಲಿ ಎಪ್ರಿಲ್ ತಿಂಗಳಲ್ಲಿ ಉರೂಸ್ ಕಾರ್ಯಕ್ರಮವಿದ್ದು ಈ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುವ ಹಿನ್ನಲೆಯಲ್ಲಿ ಮಸೀದಿ ಆವರಣದಲ್ಲಿದ್ದ ಶೌಚಾಲಯ ಕಿರಿದಾಗಿದ್ದು ಈ ಹಿನ್ನಲೆಯಲ್ಲಿ ಈಗಿರುವ ಶೌಚಾಲಯವನ್ನು ತೆಗೆದು ಅದೇ ಜಾಗದಲ್ಲಿ ಗುಂಡಿ ತೋಡಿ ಶೌಚಾಲಯ ನಿರ್ಮಾಣ ಕಾರ್ಯ ಮಾಡುತ್ತಿದ್ದಾಗ ಇದನ್ನೆ ಅಕ್ರಮ ಕಟ್ಟಡ ಎಂದು ಸ್ಥಳೀಯ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಕ್ರಮ ಕಟ್ಟಡ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಪ್ರಕಟಿಸಿ ಅಪಪ್ರಚಾರ ಮಾಡತೊಡಗಿದಲ್ಲದೆ, ಸಮುದಾಯಗಳ ನಡುವೆ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಜ್ಜಾವರ , ಮೇನಾಲ ಮುಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಕಮಿಟಿಯವರು ಈ ಬಗ್ಗೆ ಅಸಮದಾನ ವ್ಯಕ್ತಪಡಿಸಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಾರ್ಯದರ್ಶಿ ಶಾಫಿ ಮುಕ್ರಿ ಮುಂಬರುವ ಉರೂಸ್ ಕಾರ್ಯಕ್ರಮಕ್ಕೆ ಈಗಾಗಲೆ ಪಂಚಾಯತ್ ನಿಂದ ನಿರಾಪೇಕ್ಷಣ ಪತ್ರ ಷರತ್ತು ಬದ್ದವಾಗಿ ಪಡೆಯಲಾಗಿದೆ, ಮತ್ತು ಈ ಷರತ್ತುಗಳನ್ನು ಪಾಲನೆ ಮಾಡಿಯೇ ನಾವು ಉರೂಸ್ ಕಾರ್ಯಕ್ರಮ ನಡೆಸುತ್ತೇವೆ, ಯಾರು ಯಾವ ಕಾರ್ಯಕ್ರಮ ಮಾಡಿದರೂ ಸ್ಥಳ ಬಳಸುವುದರಲ್ಲಿ ನಮ್ಮದು ತಕರಾರು ಇಲ್ಲ, ಈ ಹಿಂದೆಯೂ ನಾವು ತಕರಾರು ಮಾಡಿಲ್ಲ ಅಲ್ಲಿ ಎಲ್ಲವೂ ಸೌಹಾರ್ದತೆಯಿಂದ ನಡೆಯುತ್ತಿದೆ, ಮೂರು ನಾಲ್ಕು ಜನರಿಂದ ಇದೆಲ್ಲಾ ಆಗ್ತಾ ಇರುವುದು, ಮತ್ತು ಜಾಲತಾಣದಲ್ಲಿ ಬರೆಯುವುದು ಮಾಡುತ್ತಿದ್ದಾರೆ, ಮುಂದಿನ ದಿನ ಅಪಪ್ರಚಾರದ ವಿರುದ್ದ ಕಾನೂನು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ

.ಪತ್ರಿಕಾ ಗೋಷ್ಟಿಯಲ್ಲಿ
ಮಸೀದಿ ಅಡಳಿತ ಸಮಿತಿ ಅಧ್ಯಕ್ಷ ಅಬ್ದುಲ್‌ ಖಾದರ್ ಹಾಜಿ,ಉಪಾಧ್ಯಕ್ಷ ಅಂದಹಾಜಿ ಪ್ರಗತಿ,ಕೋಶಾಧಿಕಾರಿ ಶರೀಫ್ ರಿಲ್ಯಾಕ್ಸ್,ಸದಸ್ಯರಾ ಹಮೀದ್ ಬಿ ಎಂ,ಮಹಮ್ಮದ್ ಕುಂಞಿ ಮೇನಾಲ ,ಅಬೂಭಕ್ಕರ್ ಸಿ.ಎ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ