

ಸುಳ್ಯ: ಸುಳ್ಯ ತಾಲೂಕಿನ ಇತಿಹಾಸ ಪ್ರಸಿದ್ದ ಮೇನಾಲ ದರ್ಗಾ ಶರೀಫ್ ವಾರ್ಷಿಕವಾಗಿ ನಡೆಯುವ ಊರುಸ್ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದ್ದು ಇದೀಗ ಮತ್ತೆ ದರ್ಗಾದ ಬಳಿಯ ಸರಕಾರಿ ಜಾಗದ ವಿವಾದ ಮತ್ತೆ ಭುಗಿಲೆದ್ದಿದೆ. ಕೆಲ ವರ್ಷಗಳ ಹಿಂದೆ ದರ್ಗಾದ ಸಮಿತಿಯು ಸರಕಾರಿ ಜಮೀನಿನಲ್ಲಿ ಮಾನ್ಯ ಸಹಾಯಕ ಆಯುಕ್ತರ ನ್ಯಾಯಲಯದ ಆದೇಶ ಪ್ರಕಾರ ಮುಸ್ಲಿಂ ಮತ್ತು ಹಿಂದುಗಳಿಗು ಸ್ಥಳೀಯ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದು ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದು ಕಳೆದ ವರ್ಷದ ವರೇಗೆ ಯಾವ ರೀತಿಯಲ್ಲಿ ಅನುಮತಿ ಪಡೆಯುತ್ತಿದ್ದರೋ ಅದೇ ರೀತಿಯಲ್ಲಿ ಗ್ರಾಮ ಪಂಚಾಯತ್ ನೀಡುತ್ತಿತ್ತು ,
ವರುಷಗಳ ಹಿಂದಿನಿಂದಲೇ ಭಾರಿ ಆಕ್ರೋಶ ಮತ್ತು ತಿಂಗಳುಗಳ ಕಾಲ ಪೋಲೀಸ್ ಪಹರೆಯಲ್ಲಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಕಾವಲು ಕುಳಿತು ನ್ಯಾಯಲಯದ ಪ್ರವೇಶದ ತನಕವು ಹೋದ ಘಟನೆ ನಡೆದಿತ್ತು .
ಇದೀಗ ಮತ್ತೆ ಅದೇ 155/1 ಮತ್ತು 155/2ರ ವಿಚಾರವು ಇದೀಗ ನ್ಯಾಯಲಯದಲ್ಲಿ ಇದ್ದು ,ಪ್ರಕರಣವು ಮುಕ್ತಾಯವಾಗದೇ ಇರುವುದರಿಂದ ಅಲ್ಲಿ ಕಂದಾಯ ಇಲಾಖೆಯು ತಮ್ಮ ಬೋರ್ಡ್ಗಳನ್ನು ಅಳವಡಿಸಿದ್ದು ಇದೀಗ ಇದೇ ಜಾಗದಲ್ಲಿ ಕಾರ್ಯಕ್ರಮ ನಡೆಸಲು ದರ್ಗಾ ಪಂಚಾಯತ್ ಗೆ ಮನವಿಯನ್ನು ನೀಡಿದ್ದು ಇದೀಗ ಮತ್ತೆ ಈ, ಬಗ್ಗೆ ತುರ್ತುಸಭೆಯನ್ನು ನಡೆಸಿ ದರ್ಗಾ ಕಮಿಟಿಯವರಿಗೆ ಪಂಚಾಯತ್ ಕೆಲವು ಷರತ್ತುಗಳ ಮೇಲೆ ನಿರಾಪೇಕ್ಷಣ ಪತ್ರ ನೀಡಿರುವುದಾಗಿ ತಿಳಿದು ಬಂದಿದೆ ಇದರ ಹಿನ್ನಲೆ ಭಜನ ಮಂಡಳಿಯವರು ಮತ್ತೆ ಮನವಿ ಮಾಡಿದ್ದಾರೆ.,ಇದು ಸ್ಥಳೀಯ ಬಿಜೆಪಿ ಮುಖಂಡರ ಗಮನಕ್ಕೆ ಬಂದು ಇದರ ವಿರುದ್ದ ಪಂಚಾಯತ್ ಗೆ ಆಕ್ಷೇಪಣೆ ಸಲ್ಲಿಸಿದ್ದರು ಮತ್ತು ಹೀಗಾದಲ್ಲಿ ಬೆಳವಣಿಗೆಯ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ವಿರೋಧ ವ್ಯಕ್ತ ಪಡಿಸಿದ ಬೆನ್ನಲ್ಲೆ , ಪಂಚಾಯತ್ ಆಡಳಿತ ಇಕ್ಕಟ್ಟಿಗೆ ಸಿಲುಕಿದಂತಾಗಿದೆ,ಈ ಬಗ್ಗೆ ಮಾತನಾಡಿದ ಅಭಿವೃದ್ದಿ ಅಧಿಕಾರಿ, ಗ್ರಾಮ ಪಂಚಾಯತ್ ಸದಸ್ಯರ ಒತ್ತಡದ ಹಿನ್ನಲೆಯಲ್ಲಿ ಷರತ್ತು ಬದ್ದವಾಗಿ ನಾವು ಸಮಿತಿಗೆ ನಿರಪೇಕ್ಷಣ ಪತ್ರವನ್ನು ನೀಡಿದ್ದು ,ಪ್ರಕರಣ ನ್ಯಾಯಾಲಯದಲ್ಲಿರುವುದು ಮತ್ತು ಆರಂಭದಲ್ಲಿ ಇದರ ದಾಖಲೆ ಪಂಚಾಯತ್ ಕೈ ಸೇರದೇ ಇದ್ದ ಕಾರಣ ಮತ್ತು ಇದೀಗ ಇಬ್ಬರ ಹಿಂದೆ ಇನ್ನೊಬ್ಬರಂತೆ ನಮಗೆ ನ್ಯಾಯಲಯಕ್ಕೆ ಸಲ್ಲಿಸಿದ ದಾಖಲೆಗಳನ್ನು ಒದಗಿಸುತ್ತಿದ್ದು ನ್ಯಾಯಲಯದ ಆದೇಶವನ್ನು ಗಮನಿಸಿದ ನಾವು ಇದೀಗ ನೀಡಿದ ನಿರಪೇಕ್ಷಣಾ ಪತ್ರದಲ್ಲಿರುವ ಷರತ್ತುಗಳನ್ನು ಪೂರ್ಣವಾಗಿಸಿ ಒಂದು ವಾರದೊಳಗೆ ಪಂಚಾಯತ್ ಗೆ, ತಾಹಶೀಲ್ದಾರ್ ಹಾಗೂ ಠಾಣೆಗೆ ಒದಗಿಸಲು ನೋಟೀಸ್ ನೀಡಿದ್ದೇವೆ, ಷರತ್ತು ಪೂರ್ಣವಾದ ಮೇಲೆಯಷ್ಟೇ ನಿರಾಪೇಕ್ಷಣಾ ಪತ್ರ ಮಾನ್ಯ ವಾಗುತ್ತದೆ , ಅವರಿಂದಲೇ ಮಾಹಿತಿ ಪಡೆದುಕೊಳ್ಳಲು ನೋಟಿಸ್ ಜಾರಿ ಮಾಡಲಾಗುವುದು, ಎಂದು ಸ್ಥಳೀಯವಾಗಿ ಯಾವುದೇ ಗೊಂದಲವಾಗದಂತೆ, ನ್ಯಾಯಾಲಯದ ಆದೇಶದಂತೆ ಮತ್ತು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿವಾದ ಪರಿಹಾರ ಕಾಣಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ . ಮುಂದಿನ ಬೆಳವಣಿಗೆಯ ಬಗ್ಗೆ ಮತ್ತಷ್ಟು ವಿವರ ತಿಳಿದು ಬರಬೇಕಾಗಿದೆ.


