
ಪೆರಾಜೆ ಗ್ರಾಮದ ಕುಂಬಳಚೇರಿಯಲ್ಲಿರುವ ವಯನಾಟ್ ಕುಲವನ್ ದೈವಸ್ಥಾನಕ್ಕೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಭೇಟಿ ಪೂರ್ವಸಿದ್ದತಾ ಕಾಮಗಾರಿಗಳ ವೀಕ್ಷಣೆ ಮಾಡಿದ್ದಾರೆ,



ಮಾ.3 ರಿಂದ. ಮಾ. 5 ರ ವರೆಗೆ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಟು ಮಹೋತ್ಸವ ನಡೆಯಲಿರುವ ಹಿನ್ನಲೆಯಲ್ಲಿ ಸ್ಥಳಾವಕಾಶ ಮತ್ತು ಭಕ್ತ ಪ್ರೇಕ್ಷಕ ಗ್ಯಾಲರಿಗಳ ನಿರ್ಮಾಣ ಕಾರ್ಯ ಸೇರಿದಂತೆ ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಫೆ.4 ರಂದು ಶಾಸಕರಾದ ಶ್ರೀ ಕೆಜಿ ಬೋಪಯ್ಯರವರು ಶ್ರೀ ವಯ ನಾಟ್ ಕುಲವನ್ ದೈವಸ್ಥಾನಕ್ಕೆ ಆಗಮಿಸಿ ಮಹೋತ್ಸವದ ಪೂರ್ವಸಿದ್ದತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು, ಈ ಸಂದರ್ಭದಲ್ಲಿ ಕೋಡಿರ ಪ್ರಸನ್ನ , ನಾಗೇಶ್ ಕುಂದಲಪಾಡಿ, ಪದ್ಮಯ್ಯ ಕುಂಬಳಚೇರಿ,ಹೊನ್ನಪ್ಪ ಕೊಳಂಗಾಯ, ಪ್ರವೀಣ್ ಮಜಿಕೋಡಿ, ಪ್ರಸನ್ನ ನೆಕ್ಕಿಲ ಹಾಗೂ ಸಮಿತಿಗಳ ವಿವಿಧ ಪದಾಧಿಕಾರಿಗಳು ಹಾಜರಿದ್ದರು.
