
ರಾಜ್ಯ ಮತ್ತು ಕೇಂದ್ರ ಸರಕಾರದ ವೈಪಲ್ಯಗಳನ್ನು ಸಾರ್ವಜನಿಕರಿಗೆ ಮುಟ್ಟುವಂತೆ ಮಾಡುವ ದೃಷ್ಟಿಯಿಂದ, ತಳ ಮಟ್ಟದ ಕಾರ್ಯಕರ್ತರನ್ನು ಹುರಿದುಂಭಿಸಿ ಭೂತ್ ಮಟ್ಟದ ಕಾರ್ಯಕರ್ತರ ಮೂಲಕ ಡಬ್ಬಲ್ ಇಂಜಿನ ಸರಕಾರದ ವೈಪಲ್ಯಗಳನ್ನು ಮನೆ ಮನೆಗಳಿಗೆ ಮುಟ್ಟಿಸುವ ಅಭಿಯಾನವಾಗಿ ಕರಾವಳಿಯಾದ್ಯಂತ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದು ಫೆ. 5.ರಂದು ಸುಳ್ಯ ನಗರದಲ್ಲಿ ಸಾರ್ವನಿಕ ಸಭೆ ನಡೆಸಲಿದ್ದು ಈ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ ಹಾಗು ರಾಜ್ಯ ವಿಧಾನ ಪರಿಷತ್ ವಿರೋದ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ರವರು ಭಾಗವಹಿಸಲಿದ್ದು,ಸಾವಿರಾರು ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ,ಅವರು ಸುಳ್ಯದ ಉಡುಪಿ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ತಿಳಿಸಿದ್ದಾರೆ, ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳನ್ನು ದೃಷ್ಟಿಯಲ್ಲಿರಿಸಿ ಕರಾವಳಿ ಭಾಗದಲ್ಲಿ 5 ಕೂಟಗಳಾಗಿ ಪರಿವರ್ತಿಸಿ, ಮಂಗಳೂರು,ದಕ್ಷಿಣ ಕನ್ನಡ, ಕೊಡಗು, ಉಡುಪಿ,ಚಿಕ್ಕಮಂಗಳೂರಿನಲ್ಲಿ ಪಕ್ಷದ ನಾಯಕರಾದ,ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಪಕ್ಷದ ಎಲ್ಲಾ ನಾಯಕರುಗಳ ಒಗ್ಗೂಡುವಿಕೆಯಿಂದ ಪ್ರಜಾದ್ವನಿ ಯಾತ್ರೆ ಮುಂದುವರಿಯಲಿದ್ದು ಇದರ ಅಂಗವಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಆರಂಭಿಕವಾಗಿ ನೆಲ್ಯಾಡಿಯಲ್ಲಿ ಫೆ.5 ರಂದು 10.30 ಕ್ಕೆ ಈ ಸಾರ್ವಜನಿಕ ಸಭೆ ಯಾಥ್ರೆ ಚಾಲನೆಯಾಗಲಿದೆ, ಪ್ರಜಾದ್ವನಿ ಯಾತ್ರೆಯು ಮುಂದುವರೆದು
12 ಘಂಟೆಗೆ ಬೆಳ್ಳಾರೆಯಲ್ಲಿ , 3 ಘಂಟೆಗೆ ಗುತ್ತಿಗಾರಿನಲ್ಲಿ, ಸುಳ್ಯದಲ್ಲಿ ಸಂಜೆ 5 ಘಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ,ಎಂದು ಅವರು ಮಾಹಿತಿ ನೀಡಿದ್ದಾರೆ, ಈ ಬಾರಿ ದ.ಕ ಕನ್ನಡದಲ್ಲಿ 8 ಕ್ಕೆ 8 ಸೀಟುಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.



ಕೋಮು ಪ್ರಚೋದನವೇ ಬಿಜೆಪಿಯ ಗೆಲ್ಲುವ ಅಸ್ತ್ರ: ನಮ್ಮದು ಅಭಿವೃದ್ಧಿಯೇ ಮಂತ್ರ
ವಿಶ್ವಹಿಂದೂ ಪರಿಷತ್ ಭಜರಂಗದಳದ ಪ್ರಮುಖರು ಭಾಷಣದಲ್ಲಿ ಕೋಮು ಪ್ರಚೋಧಕವಾಗಿ ಮಾತನಾಡುತ್ತಾರೆ, ತಲವಾರು ಕೊಟ್ಟವರು ನಾವೇ ಎಂದು ಹೇಳುತ್ತಾರೆ, ಆದರೂ ಕಾನೂನು ವ್ಯವಸ್ಥೆ ಕೈ ಕಟ್ಟಿ ನಿಂತಿದೆ, ಇದು ಪ್ರಜಾಪ್ರಭುತ್ವದಲ್ಲಿ ನಿರೀಕ್ಷೆ ಮಾಡಲಾಗದ ವಿಷಯ, ಸಂವಿದಾನ ವಿರೋಧಿಯಾದುದು,ಕೋಮು ಪ್ರಚೋದನವೇ ಬಿಜೆಪಿ ಗೆಲ್ಲುವ ಅಸ್ತ್ರ, ನಮ್ಮದು ಅಭಿವೃದ್ಧಿಯೇ ಮಂತ್ರ ಪೋಲೀಸ್ ಇಲಾಖೆ,ಸರಕಾರ, ರಾಜ್ಯಪಾಲರು ಇದನ್ನು ನಿಲ್ಲಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಡಬಲ್ ಇಂಜಿನ್ ಸರಕಾರದಲ್ಲಿ ಎರಡೂ ಇಂಜಿನ್ ಕೆಟ್ಟುಹೋಗಿದೆ:
ರಾಜ್ಯ ಮತ್ತು ಕೇಂದ್ರ ಸರಕಾರ ಎರಡು ಕೆಟ್ಟು ಹೋಗಿದೆ, 40% ಪರ್ಸೆಂಟ್ ಕಮಿಷನ್ ಪಡೆಯವ ಸರಕಾರದಿಂದ ಜನರು ಏನು ಅಭಿವೃದ್ದಿ ಪಡೆಯಲು ಸಾಧ್ಯ ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುತ್ತಿರು ಕಾಮಗಾರಿಗಳ 25000 ಕೋಟಿ ಕಾಮಗಾರಿಗಳ ಬಿಲ್ ಪಾವತಿಯಾಗದೆ ಸದ್ಯದಲ್ಲಿ ಕಾಮಗಾರಿ ನಿಲ್ಲಿಸುತ್ತೇವೆ ಎಂದು ಕಾಂಟ್ರಾಕ್ಟ್ ದಾರರು ಎಚ್ಚರಿಕೆ ನೀಡುತ್ತಿದ್ದಾರೆ, ಸರಕಾರದ ವೈಪಲ್ಯ ಹೇಳುವವರನ್ನು ವಿವಿಧ ಕಾರಣಗಳಿಗೆ ಸಿಲುಕಿಸಿ ಜೈಲಿಗಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನುಡಿದಂತೆ ನಡೆವ ಸರಕಾರ.
ಪಕ್ಷದ ಪ್ರಣಾಳಿಕೆಯಲ್ಲಿ ಅಡಿಕೆ ಎಲೆಚುಕ್ಕಿ ಮತ್ತು ಹಳದಿ ರೋಗಕ್ಕೆ ಪರಿಹಾರ ನೀಡುವ ಭರವಸೆ ನೀಡುತ್ತೇವೆ ಮತ್ತು,ಸಂಶೋಧನೆಗೆ 50 ಕೋಟಿ ರೋ ಮೀಸಲಿರಿಸುತ್ತೇವೆ ಎಂದು ಭರವಸೆ ನೀಡುತ್ತೇವೆ, ನಮ್ಮದ್ದು ಹೇಳಿದನ್ನು ಮಾಡಿತೋರಿಸುವ ಸರಕಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಅಧ್ಯಕ್ಷ ಪಿ ಸಿ ಜಯರಾಮ್, ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ,ಸುಳ್ಯ ಬ್ಲಾಕ್ ಉಸ್ತುವಾರಿ ಕೃಷ್ಣಪ್ಪ,ಬ್ಲಾಕ್ , ಸುದೀರ್ ಕುಮಾರ್ ಶೆಟ್ಟಿ ಎಂ,ಜಯಪ್ರಕಾಶ್ ರೈ ಎನ್ ಕೆ.ಪಿಸಿಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ ಗೌಡ, ಮಹಿಳಾ ಕಾಂಗ್ರೇಸ್ ಘಟಕದ ಅಧ್ಯಕ್ಷೆ ಗೀತಾಕೋಲ್ಚಾರ್, ಬ್ಲಾಕ್ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಕಾಂಗ್ರೇಸ್ ಮುಖಂಡರುಗಳಾದ ಕೆ. ಎಂ ಮುಸ್ತಾಪ, ಸರ್ವೋತ್ತಮ ಗೌಡ, ಸತೀಶ್ ಕೆಡೆಂಜಿ,ಪ್ರದೀಪ್ ಕುಮಾರ್ ಶೆಟ್ಟಿ ,ಶೀನಪ್ಪ ಗೌಡ, ಮೀರಜ್ ಜಂದ್ರಪಾಲ್,ರಾಜೀವಿ ಆರ್ ರೈ, ಅವಿನಾಶ್, ಕಳಂಜ ವಿಶ್ವನಾಥ್ ರೈ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಭವಾನಿ ಶಂಕರ್ ಕಲ್ಮಡ್ಕ, ನಂದರಾಜ್ ಸಂಕೇಶ, ಸತ್ಯಕುಮಾರ್ ಆಡಿಂಜ,ಕೃಷ್ಣಪ್ಪ ನೆಕ್ರಾಜೆ, ಗೋಕುಲ್ ದಾಸ್, ಶರೀಪ್, ಸುರೇಶ ಎಂ ಹೆಚ್,ದಿನೇಶ್ ಅಂಬೆಕಲ್ಲು,ಅನಿಲ್ ರೈ, ಹಮೀದ್ ಹೆಚ್ ಎಂ, ಶಶಿಧರ ಎಂ.ಜೆ,ರಾಜು ಪಂಡಿತ್,ಶಾಪಿಕುತ್ತ ಮೊಟ್ಟೆ,ಜಯಪ್ರಕಾಶ್ ನೆಕ್ರಪ್ಪಾಡಿ,ಶರೀಪ್ ಕಂಠಿ,ವಿಜಯ ಕುಮಾರ್ ಸೊರಕೆ,ಕೆ.ಪಿ ಥಾಮಸ್,ಪಿ ಪಿ ವರ್ಗೀಸ್, ಗಂಗಾಧರ್ ಮೇನಾಲ,ಅನಿಲ್ ರೈ ಪುಡ್ಕಜೆ,ಸದಾನಂದ ಮಾವಂಜಿ, ಸಿದ್ದಿಕ್ ಕೊಕೊ ಮೊದಲಾದವರಿದ್ದರು.