ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಸುಳ್ಯ ಭೇಟಿ: ಕಾರ್ಯಕರ್ತರೊಡನೆ ಸಮಾಲೋಚನೆ.

ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಸುಳ್ಯ ಭೇಟಿ: ಕಾರ್ಯಕರ್ತರೊಡನೆ ಸಮಾಲೋಚನೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ
ಸಚಿವರಾದ ಎಂ ವೀರಪ್ಪ ಮೊಯ್ಲಿ ಅವರು ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಸುಳ್ಯಕ್ಕೆ ಆಗಮಿಸಿದಾಗ ಸುಳ್ಯದ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮತ್ತು ಸುಳ್ಯ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಸುಳ್ಯದಲ್ಲಿ ಪಕ್ಷದ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾಗತಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ. ಸಿ.ಜಯರಾಮ್, ಖಜಾಂಚಿ ಕಳಂಜ ವಿಶ್ವನಾಥ ರೈಮಾಜಿ ನಗರ ಪಂಚಾಯತ್ ಸದಸ್ಯ ಕೆ. ಎಂ.ಮುಸ್ತಫ ಪಕ್ಷದ ಮುಖಂಡರುಗಳಾದ ಬಾಪು ಸಾಹೇಬ್,ಗೋಕುಲ್ ದಾಸ್,ಶಶಿಧರ ಮಾಸ್ಟರ್ ಕೀರ್ತನ ಕೊಡೆಪಾಲ ಎನ್. ಎಸ್. ಯು. ಐ,ಕಿಸಾನ್ ಘಟಕದ ಸುರೇಶ ಅಮೈಭವಾನಿಶಂಕರ್ ಕಲ್ಮಡ್ಕ,ಧೀರಕ್ರಾಸ್ತಮಾಜಿ ಮೇಯರ್ ಗಳಾದ ಭಾಸ್ಕರ್ ಮೊಯ್ಲಿ ಶಶಿಧರ ಹೆಗಡೆ ಮಾಜಿ ಕಾರ್ಪೊರೇಟರ್ ಗಳಾದ ಅಶೋಕ್ ಕುಮಾರ್ ಶೆಟ್ಟಿ, ಸಂತೋಷ್ ಶೆಟ್ಟಿ ಮೊದಲಾದವರು
ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯ