ಸಾಹಸ ಪ್ರದರ್ಶಿಸಿ ಐವರು ಭಾರತೀಯರ ರಕ್ಷಣೆ ಮಾಡಿದ ಅರಂತೋಡಿನ ಯೋಧನಿಗೆ ಸೇನಾಧಿಕಾರಿಗಳಿಂದ ಗೌರವ.

ಸಾಹಸ ಪ್ರದರ್ಶಿಸಿ ಐವರು ಭಾರತೀಯರ ರಕ್ಷಣೆ ಮಾಡಿದ ಅರಂತೋಡಿನ ಯೋಧನಿಗೆ ಸೇನಾಧಿಕಾರಿಗಳಿಂದ ಗೌರವ.

ಐದು ಜನ ನಾಗರಿಕರನ್ನುಉಗ್ರ ರಿಂದ ರಕ್ಷಿಸಿದ ಕಾರಣಕ್ಕಾಗಿ ಅರಂತೋಡಿನ ಯೋಧ ಆಕಾಶ್ ರಿಗೆ ಭಾರತೀಯ ಸೇನಾ ದಿನಾಚರಣೆಯಂದು ಗೌರವ ಲಭಿಸಿದೆ. ಇಂದು ಜಮ್ಮು ಕಾಶ್ಮೀರದ ಶ್ರೀ ನಗರದಲ್ಲಿ ಭೂ ಸೇನಾಧಿಕಾರಿ ಜನರಲ್ ಮೇಜರ್ ರವರು ಅರಂತೋಡಿನ ಆಕಾಶ್ ರನ್ನು ಗೌರವಿಸಿದ್ದಾರೆ.

ಇವರು ಕಳೆದ 6 ವರುಷ ಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಮಹಾರಾಷ್ಟ್ರ, ರಾಜಸ್ಥಾನ ಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಜಮ್ಮು ಕಾಶ್ಮೀರ ದ ಶ್ರೀ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆರಂತೋಡು ಗ್ರಾಮದ ಓಟೆಡ್ಕ ಕಮಲಾಕ್ಷ ಮತ್ತು ದಮಯ0ತಿ ದಂಪತಿಗಳ ಪುತ್ರ ಇದೀಗ ಇವರ ಸಾಹಸಗಾಥೆ ನೆನೆದು ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ,

ವರದಿ: ಪ್ರದೀಪ್ ಅರಂತೋಡು.

ರಾಜ್ಯ