ಅಗ್ನಿ ಆಕಸ್ಮಿಕ : ರಬ್ಬರ್ ಹಾಳೆಗಳು ಬೆಂಕಿಗಾಹುತಿ : ಚೆಂಬುವಿನಲ್ಲಿ ಘಟನೆ.

ಅಗ್ನಿ ಆಕಸ್ಮಿಕ : ರಬ್ಬರ್ ಹಾಳೆಗಳು ಬೆಂಕಿಗಾಹುತಿ : ಚೆಂಬುವಿನಲ್ಲಿ ಘಟನೆ.


ಚೆಂಬು ಜ.2 : ಅಗ್ನಿ ಆಕಸ್ಮಿಕದಿಂದ ರಬ್ಬರ್
ಹಾಳೆಗಳು ಬೆಂಕಿಗಾಹುತಿಯಾದ ಘಟನೆ
ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಲ್ಲಿ
ನಡೆದಿದೆ. ಸ್ಥಳೀಯ ಕೃಷಿಕ ಸೂರಜ್ ಹೊಸೂರು
ಎಂಬುವವರ ಮನೆಯಲ್ಲಿ ರಬ್ಬರ್ ಹಾಳೆಗಳ
ದಾಸ್ತಾನು ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು
ಈ ಅನಾಹುತ ಸಂಭಿಸಿದೆ. ರಬ್ಬರ್ ಹೊಗೆ ಗೂಡಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಅನಾಹುತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮನೆಯವರು ಸ್ಥಳೀಯರು ಸೇರಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದು , ಆವೇಳೆಗಾಗಲೆ ಬೆಂಕಿಯ ಕೆನ್ನಾಲಿಗೆ ಬಹು ಪಾಲು ಆಕ್ರಮಿಸಿ ಆಗಿತ್ತು. ಒಂದೂವರೆ ಲಕ್ಷ ರೂ. ಗೂ ಅಧಿಕ ಮೌಲ್ಯದ ರಬ್ಬರ್ ಹಾಳೆಗಳು ಸುಟ್ಟು ಕರಕಲಾಗಿದ್ದು,ಯಂತ್ರಗಳಿಗೂ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ರಾಜ್ಯ